Don't Miss!
- News RCB: ಆರ್ಸಿಬಿ ಫ್ರಾಂಚೈಸ್ನಿಂದ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Lifestyle ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ದಿ ವಿಲನ್' ನೋಡುವ ಅಭಿಮಾನಿಗಳಲ್ಲಿ ಮನವಿ ಮಾಡಿದ ಚಿತ್ರತಂಡ
Recommended Video
ಪ್ರೇಮ್ ನಿರ್ದೇಶನದಲ್ಲಿ ತಯಾರಾಗಿರುವ ಬಿಗ್ ಬಜೆಟ್ ಹಾಗೂ ಇಬ್ಬರು ಸ್ಟಾರ್ ನಟರು ಅಭಿನಯಿಸಿರುವ 'ದಿ ವಿಲನ್' ಸಿನಿಮಾ ಗುರುವಾರ (ಅಕ್ಟೋಬರ್ 18) ಜಗತ್ತಿನಾದ್ಯಂತ ತೆರೆಕಾಣುತ್ತಿದೆ.
ಈ ವಿಶೇಷವಾಗಿ ಶಿವರಾಜ್ ಕುಮಾರ್ ಮತ್ತು ಸುದೀಪ್ ಅಭಿಮಾನಿಗಳು ದಸರಾ ಹಬ್ಬವನ್ನ ಜೋರಾಗಿ ಆಚರಣೆ ಮಾಡ್ತಿದ್ದಾರೆ. ಈ ಮಧ್ಯೆ 'ದಿ ವಿಲನ್' ಸಿನಿಮಾದ ಬಗ್ಗೆ ಅಭಿಮಾನಿಗಳು ಮತ್ತು ವಿಲನ್ ಚಿತ್ರತಂಡ ವಿಶೇಷವಾದ ಮನವಿ ಮಾಡಿಕೊಂಡಿದೆ. ಅದೇನಪ್ಪಾ ಅಂದ್ರೆ.....
ತವರೂರಲ್ಲಿ ಕಿಚ್ಚನ ಕ್ರೇಜ್ : ಶಿವಮೊಗ್ಗದ 3 ಚಿತ್ರಮಂದಿರಗಳಲ್ಲಿ 'ದಿ ವಿಲನ್'
ದಿ ವಿಲನ್, ಇದು ಕೇವಲ ಶಿವಣ್ಣ, ಸುದೀಪ್, ಪ್ರೇಮ್ ಅಭಿಮಾನಿಗಳ ಸಿನಿಮಾವಲ್ಲ. ಇದು ಸಮಸ್ತ ಕನ್ನಡಿಗರ ಸಿನಿಮಾ. ಮನೋರಂಜನೆಯ ದೃಷ್ಟಿಯಲ್ಲಿ ಪರಭಾಷಾ ಚಿತ್ರಗಳಿಗೆ ಸೆಡ್ಡು ಹೊಡೆಯಲೆಂದೇ ಮೂಡಿಬಂದ ಚಿತ್ರ.
'ದಿ ವಿಲನ್' ಬೆಳಿಗ್ಗೆ 6 ಗಂಟೆ ಶೋ ಎಲ್ಲೆಲ್ಲಿದೆ ನೋಡಿ
ಸತತ ಎರಡು ವರ್ಷಗಳ ಕಾಲ ಪ್ರೇಮ್ ಕಲಾ ಕುಸುರಿಯಲ್ಲಿ ಜೋಪಾನ ಮಾಡಿದ ಕೂಸು. ನಾಳೆಯಿಂದ ಅಭಿಮಾನಿಗಳ ಮಡಿಲು ಸೇರುತ್ತಿದೆ. ಇನ್ಮುಂದೆ ಸಿನಿಮಾದ ಜವಾಬ್ದಾರಿ ಸಮಸ್ತ ಕನ್ನಡಿಗರದ್ದು. ಇದರ ಲಾಲನೆ ಪಾಲನೆ ಮಾಡಿ ಪ್ರೀತಿಯಿಂದ ಕೈ ಹಿಡಿದು ಮುನ್ನಡೆಸಬೇಕಾಗಿ ನಿಮ್ಮೆಲ್ಲರಲ್ಲಿ ವಿನಂತಿ. ಈ ನಡುವೆ ಕೆಲವು ಕಿಡಿಗೇಡಿಗಳು ಶಿವಣ್ಣ ಮತ್ತು ಸುದೀಪ್ ಅಭಿಮಾನಿಗಳ ನಡುವೆ ವೈಮನಸ್ಸು ಮೂಡಿಸಿ ಚಿತ್ರದ ಕುರಿತು ಅಪಪ್ರಚಾರ ಮಾಡುತ್ತಿರುವುದು ಮತ್ತು ಮುಂದೆ ಮಾಡಲೆತ್ನಿಸುವುದು ಖಂಡನಾರ್ಹ.
ಮೈನ್ ಥಿಯೇಟರ್ ಗಳಲ್ಲಿ ಜಾತ್ರೆ : 'ನರ್ತಕಿ'ಯಲ್ಲಿ 5 ಶೋ ಟಿಕೆಟ್ ಸೋಲ್ಡ್ ಔಟ್!
ಕನ್ನಡ ಚಿತ್ರರಂಗದ ಬೆಳವಣಿಗೆಯ ದೃಷ್ಟಿಯಿಂದ ಇದು ಮಾರಕ. ಆದ ಕಾರಣ ಸಮಸ್ತ ಅಭಿಮಾನಿಗಳು ಒಗ್ಗೂಡಿ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಪ್ರೀತಿಯಿಂದ ಸಹಕರಿಸಿ, ಈ ಚಿತ್ರವನ್ನು ಸ್ವೀಕರಿಬೇಕಾಗಿ ವಿನಂತಿ.
ವಿಶೇಷ ಸೂಚನೆ: ದಯಮಾಡಿ ಯಾರು ಕೂಡ ಈ ಸಿನಿಮಾ ದೃಶ್ಯಗಳನ್ನು ಸೆರೆ ಹಿಡಿದು ಯೂಟ್ಯೂಬ್ ಅಥವಾ ಇನ್ಯಾವುದೇ ಮಾಧ್ಯಮಗಳಲ್ಲಿ ಪ್ರಸಾರ ಮಾಡಬಾರದು, ಮಾಡಿದಲ್ಲಿ ಗೂಂಡಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಆದ ಕಾರಣ ಅಭಿಮಾನಿಗಳು ಪೈರಸಿ ತಡೆಗೆ ಸಹಕರಿಸಬೇಕಾಗಿ ವಿನಂತಿ....' ಎಂದು ಕೇಳಿಕೊಳ್ಳುತ್ತಿದ್ದಾರೆ.