Don't Miss!
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- News BJP Big Campaign: ಏಪ್ರಿಲ್ 20 ರಿಂದ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕರ ದಂಡು! ಯಾರ್ಯಾರು ಬರಲಿದ್ದಾರೆ?
- Automobiles Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
- Finance ಆಪ್ ಸ್ಟೋರ್ನಿಂದ ವಾಟ್ಸಾಪ್, ಥ್ರೆಡ್ ತೆಗೆದುಹಾಕಿದ ಆಪಲ್!
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Technology Google Maps: ಗೂಗಲ್ ಮ್ಯಾಪ್ಸ್ ನಲ್ಲಿ ಹೊಸ ಸೌಲಭ್ಯ! ಹತ್ತಿರದ EV ಚಾರ್ಜಿಂಗ್ ಸ್ಟೇಷನ್ ಸರ್ಚ್ ಬಲು ಸುಲಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೈನಾ ಆಗಯಾ, ಚಿತ್ರಮಂದಿರದಿಂದ ಚಾರ್ಮಿನಾರ್ ಚಲಾಗಯಾ
ಪರಭಾಷೆಯ ಚಿತ್ರ ಪ್ರದರ್ಶನ ಮಾಡುವ ಚಿತ್ರಮಂದಿರಗಳು atleast ರಾಜ್ಯೋತ್ಸವದ ದಿನದಂದೂ ಕನ್ನಡ ಚಿತ್ರ ಪ್ರದರ್ಶನ ಮಾಡುವುದಿಲ್ಲ. ನಮ್ಮವರ ಹೋರಾಟಕ್ಕೆ ಬೆಲೆಯಿಲ್ಲ, ಒಳ್ಳೆ ಮನಸ್ಸಿನಿಂದ ಪ್ರತಿಭಟಿಸುವವರಿಲ್ಲ, ಚಿತ್ರೋದ್ಯಮದಲ್ಲಿ ಒಗ್ಗಟ್ಟಿಲ್ಲ, ಪರಭಾಷೆಯ ವ್ಯಾಮೋಹ ಬಿಡುವುದಿಲ್ಲ. ಒಟ್ಟಿನಲ್ಲಿ ಕನ್ನಡ ಚಿತ್ರಗಳ ಥಿಯೇಟರ್ ಸಮಸ್ಯೆ ಬಗೆಹರಿಯುವುದೇ ಇಲ್ಲ.
ನಿರ್ದೇಶಕ ನಾಗಶೇಖರ್ ನಿರ್ದೇಶನದ ಮೈನಾ ಚಿತ್ರ ಶುಕ್ರವಾರ (ಫೆ 22) ರಾಜ್ಯದೆಲ್ಲೆಡೆ ಬಿಡುಗಡೆಯಾಯಿತು. ಸುಮಾರು 110 ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಚಿತ್ರಕ್ಕೆ ಮತ್ತೆ "ಕನ್ನಡ ಚಿತ್ರಗಳಿಗೆ ಕನ್ನಡ ಚಿತ್ರಗಳೇ ಪೈಪೋಟಿ"ಯಾಗುತ್ತಿರುವುದು ನೋವಿನ ವಿಷಯ.
ಉತ್ತಮ ಪ್ರದರ್ಶನ ಕಾಣುತ್ತಿರುವ ಚಂದ್ರು ನಿರ್ದೇಶನದ ಚಾರ್ಮಿನಾರ್ ಚಿತ್ರಕ್ಕೆ ಮೈನಾ ಚಿತ್ರದಿಂದ ಹೊಡೆತ ಬಿದ್ದಿದೆ. ಬೆಂಗಳೂರು ನಗರದಲ್ಲಿ ಪ್ರದರ್ಶನ ಕಾಣುತ್ತಿದ್ದ ಹತ್ತು ಚಿತ್ರಮಂದಿರದಿಂದ ಚಾರ್ಮಿನಾರ್ ಚಿತ್ರವನ್ನು ಎತ್ತಂಗಡಿ ಮಾಡಿ ಮೈನಾ ಚಿತ್ರ ಪ್ರದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ.
ಮೂರನೇ ವಾರ ಚಾಲ್ತಿಯಲ್ಲಿರುವ ಚಾರ್ಮಿನಾರ್ ಚಿತ್ರಕ್ಕೆ ಬೆಂಗಳೂರಿನ ಒಂದೊಂದು ಚಿತ್ರಮಂದಿರದಿಂದ ಒಂದು ಲಕ್ಷಕ್ಕೂ ಹೆಚ್ಚಿನ ಆದಾಯ ಬರುತ್ತಿದೆ. ಆದರೂ ಮೈನಾ ಚಿತ್ರದ ಹಂಚಿಕೆದಾರು ನನ್ನ ಚಿತ್ರದ ವಿತರಕರ ಜೊತೆ ಹೊಂದಾಣಿಕೆ ಮಾಡಿಕೊಂಡು ಚಾರ್ಮಿನಾರ್ ಚಿತ್ರವನ್ನು ಎತ್ತಂಗಡಿ ಮಾಡಿಸುತ್ತಿದ್ದಾರೆ ಎಂದು ನಿರ್ದೇಶಕ ಚಂದ್ರು ನೋವು ವ್ಯಕ್ತ ಪಡಿಸುತ್ತಿದ್ದಾರೆ.
ನನಗೆ ಮೈನಾ ಚಿತ್ರದ ಮೇಲೆ ಬೇಸರವಿಲ್ಲ. ಅದೂ ಕನ್ನಡ ಚಿತ್ರ, ಕನ್ನಡ ಚಿತ್ರ ಚೆನ್ನಾಗಿ ಓಡ ಬೇಕೆಂದು ಬಯಸುವವನು ನಾನು. ಹಾಗಂತ ಚಾರ್ಮಿನಾರ್ ಚಿತ್ರ ನಿರ್ಮಿಸಿದ ನನಗಾಗುವ ನಷ್ಟವನ್ನು ತುಂಬಿ ಕೊಡುವವರು ಯಾರು? ಎನ್ನುವುದು ಚಂದ್ರು ಪ್ರಶ್ನೆ.
ಚಂದ್ರು ಕೇಳಿದ valid ಪ್ರಶ್ನೆಗೆ ಕನ್ನಡ ಚಿತ್ರೋದ್ಯಮದಲ್ಲಿ ಸಂಬಂಧ ಪಟ್ಟವರು ಯಾರಾದರೂ ಇದ್ದರೆ ದಯವಿಟ್ಟು ಉತ್ತರಿಸಿ.