twitter
    For Quick Alerts
    ALLOW NOTIFICATIONS  
    For Daily Alerts

    ಅರ್ಜುನ್ ಸರ್ಜಾ ಹೆಸರನ್ನ ಮಾತ್ರ ಹೇಳಲು ಒಂದು ಕಾರಣ ಇದೆ ಎಂದ ಶ್ರುತಿ ಹರಿಹರನ್.!

    |

    ಕಳೆದ ಎರಡು ದಿನಗಳಿಂದ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿರುವ ಹೆಸರು 'ಶ್ರುತಿ ಹರಿಹರನ್'. ಕಾರಣ ಆಕೆ ಮಾಡಿರುವ ಆರೋಪ. ಅದು ನಟ ಅರ್ಜುನ್ ಸರ್ಜಾ ವಿರುದ್ಧ.!

    ''ವಿಸ್ಮಯ' ಚಿತ್ರದ ಶೂಟಿಂಗ್ ವೇಳೆ ನಟ ಅರ್ಜುನ್ ಸರ್ಜಾ ಅಸಭ್ಯವಾಗಿ ವರ್ತಿಸಿದರು. ಡಿನ್ನರ್ ಹಾಗೂ ರೆಸಾರ್ಟ್ ಗೆ ಕರೆದರು. ನನಗೆ ಅವರಿಂದ ತುಂಬಾ ಮುಜುಗರ ಆಗಿದೆ'' ಅಂತ ಶ್ರುತಿ ಹರಿಹರನ್ ಆರೋಪಿಸಿದ್ದರು.

    ಈ ಹಿಂದೆ ಹಲವು ಬಾರಿ ಕಾಸ್ಟಿಂಗ್ ಕೌಚ್ ವಿರುದ್ಧ ದನಿಯೆತ್ತಿದ್ದ ನಟಿ ಶ್ರುತಿ ಹರಿಹರನ್, ಆ ವಿವರಗಳನ್ನು ಬಯಲು ಮಾಡದೆ ಏಕಾಏಕಿ ಅರ್ಜುನ್ ಸರ್ಜಾ ವಿರುದ್ಧ ಬಾಂಬ್ ಸಿಡಿಸಿರುವುದು ಹಲವು ಅನುಮಾನಗಳನ್ನ ಹುಟ್ಟುಹಾಕಿದೆ.

    ಈ ಬಗ್ಗೆ ಇಂದು ನಡೆದ ಪತ್ರಿಕಾಗೋಷ್ಟಿಯಲ್ಲಿ, ''ಅರ್ಜುನ್ ಸರ್ಜಾ ಹೆಸರನ್ನ ಮಾತ್ರ ಹೇಳಲು ಒಂದು ಕಾರಣ ಇದೆ. ಅದನ್ನ ನಾನು ಕೋರ್ಟ್ ನಲ್ಲಿ ಹೇಳುವೆ'' ಎಂದು ನಟಿ ಶ್ರುತಿ ಹರಿಹರನ್ ಹೇಳಿದರು.

    ಅಸಲಿಗೆ, ಇವತ್ತು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ನಟಿ ಶ್ರುತಿ ಹರಿಹರನ್ ಏನಂತ ಮಾತನಾಡಿದರು ಅಂತ ನೀವೇ ಓದಿರಿ, ಫೋಟೋ ಸ್ಲೈಡ್ ಗಳಲ್ಲಿ...

    ಒಂದುವರೆ ವರ್ಷದ ಹಿಂದೆ ಯಾಕೆ ಮಾತನಾಡಲಿಲ್ಲ.?

    ಒಂದುವರೆ ವರ್ಷದ ಹಿಂದೆ ಯಾಕೆ ಮಾತನಾಡಲಿಲ್ಲ.?

    ''ಆ ಸಮಯದಲ್ಲಿ ಏನು ಮಾಡಬಹುದಿತ್ತು, ಅದನ್ನ ಮಾತ್ರ ಮಾಡಿದೆ. ರಿಹರ್ಸಲ್ ಗೆ ಬರಲ್ಲ ಅಂತ ನಿರ್ದೇಶಕರಿಗೆ ಹೇಳಿದೆ. ಶಾಟ್ ಮುಗಿಸಿ ಸೀದಾ ಕ್ಯಾರಾವಾನ್ ಗೆ ಹೋಗುತ್ತಿದ್ದೆ. ಡಿನ್ನರ್ ಹಾಗೂ ರೆಸಾರ್ಟ್ ಗೆ ಕರೆದಾಗ, 'ನೋ' ಅಂತ ಹೇಳಿದ್ದೇನೆ'' - ಶ್ರುತಿ ಹರಿಹರನ್, ನಟಿ

    ಶ್ರುತಿ ಹರಿಹರನ್ ಕೊಟ್ಟ ಏಟಿಗೆ ಐಶ್ವರ್ಯ ಅರ್ಜುನ್ ತಿರುಗೇಟು.!ಶ್ರುತಿ ಹರಿಹರನ್ ಕೊಟ್ಟ ಏಟಿಗೆ ಐಶ್ವರ್ಯ ಅರ್ಜುನ್ ತಿರುಗೇಟು.!

    ಅವತ್ತೇ ಪ್ರೆಸ್ ಮೀಟ್ ಮಾಡಿ ಹೇಳಬಹುದಿತ್ತಲ್ವಾ.?

    ಅವತ್ತೇ ಪ್ರೆಸ್ ಮೀಟ್ ಮಾಡಿ ಹೇಳಬಹುದಿತ್ತಲ್ವಾ.?

    ''ನನಗೆ ಈಗಷ್ಟೇ ಧೈರ್ಯ ಬಂದಿರೋದು. ಅದಕ್ಕೆ ಹೇಳುತ್ತಿದ್ದೇನೆ. ನನಗೆ ಆಗ ಧೈರ್ಯ ಇರಲಿಲ್ಲ. ನನಗೆ ಅಷ್ಟು ಹೆದರಿಕೆ. ನನಗೆ ಈಗ ಮೀಟೂ ಅಭಿಯಾನದಿಂದ ಸ್ವಲ್ಪ ಧೈರ್ಯ ಬಂದಿದೆ'' - ಶ್ರುತಿ ಹರಿಹರನ್, ನಟಿ

    ಶ್ರುತಿ ಹರಿಹರನ್ ಅವರನ್ನ ಪ್ರಶ್ನಿಸಿದ ಅರ್ಜುನ್ ಸರ್ಜಾ ಅತ್ತೆ.!ಶ್ರುತಿ ಹರಿಹರನ್ ಅವರನ್ನ ಪ್ರಶ್ನಿಸಿದ ಅರ್ಜುನ್ ಸರ್ಜಾ ಅತ್ತೆ.!

    ಅಧಿಕಾರ ದುರುಪಯೋಗ

    ಅಧಿಕಾರ ದುರುಪಯೋಗ

    ''ನಾನು ಅವರ Unprofessionalism ಹಾಗೂ misconduct ಬಗ್ಗೆ ಮಾತನಾಡಿದ್ದೆ. ನಾನು ತುಂಬಾ ಸೂಪರ್ ಸ್ಟಾರ್ ಗಳ ಜೊತೆಗೆ ಕೆಲಸ ಮಾಡಿದ್ದೇನೆ. ಯಾರೂ ತಮ್ಮ ಅಧಿಕಾರವನ್ನ ದುರುಪಯೋಗ ಪಡಿಸಿಕೊಂಡಿಲ್ಲ'' - ಶ್ರುತಿ ಹರಿಹರನ್, ನಟಿ

    'ನಾಚಿಕೆ ಆಗಬೇಕು' : ಶ್ರುತಿ ವಿರುದ್ಧ ಅರ್ಜುನ್ ಸರ್ಜಾ ಕೆಂಡಾಮಂಡಲ!'ನಾಚಿಕೆ ಆಗಬೇಕು' : ಶ್ರುತಿ ವಿರುದ್ಧ ಅರ್ಜುನ್ ಸರ್ಜಾ ಕೆಂಡಾಮಂಡಲ!

    ಅರ್ಜುನ್ ಸರ್ಜಾ ಹೆಸರು ಮಾತ್ರ ಯಾಕೆ.?

    ಅರ್ಜುನ್ ಸರ್ಜಾ ಹೆಸರು ಮಾತ್ರ ಯಾಕೆ.?

    ''ಕಾಸ್ಟಿಂಗ್ ಕೌಚ್ ಬಗ್ಗೆ ನಾನು ಮಾತನಾಡಿದ್ದೇನೆ. ಹೆಸರು ಹೇಳದೇ ಇದ್ದರೂ, ನಾನು ಯಾರ ಬಗ್ಗೆ ಮಾತನಾಡುತ್ತಿದ್ದೇನೆ ಅನ್ನೋದು ಕ್ಲಿಯರ್ ಆಗಿದೆ. ಈಗ ಅರ್ಜುನ್ ಸರ್ಜಾ ಹೆಸರನ್ನ ಮಾತ್ರ ತೆಗೆದುಕೊಳ್ಳಲು ಒಂದು ಕಾರಣ ಇದೆ. ಆ ಕಾರಣವನ್ನ ನಾನು ಕೋರ್ಟ್ ನಲ್ಲಿ ಕೊಡುವೆ'' - ಶ್ರುತಿ ಹರಿಹರನ್, ನಟಿ

    ಶ್ರುತಿ ಹರಿಹರನ್ ಗೆ ಓಪನ್ ಚಾಲೆಂಜ್ ಹಾಕಿದ ಧ್ರುವ ಸರ್ಜಾ!ಶ್ರುತಿ ಹರಿಹರನ್ ಗೆ ಓಪನ್ ಚಾಲೆಂಜ್ ಹಾಕಿದ ಧ್ರುವ ಸರ್ಜಾ!

    ಅವರನ್ನೇ ಯಾಕೆ ಟಾರ್ಗೆಟ್ ಮಾಡ್ತಿದ್ದೀರಾ.?

    ಅವರನ್ನೇ ಯಾಕೆ ಟಾರ್ಗೆಟ್ ಮಾಡ್ತಿದ್ದೀರಾ.?

    ''ಹೆಸರು ಹೇಳುವುದಕ್ಕಿಂತ ಅವರು ಮಾಡಿರುವ ತಪ್ಪು ತುಂಬಾ ಮುಖ್ಯ. ಹೀಗಾಗಿ, ನಾನು ಯಾಕೆ ಅವರ ಹೆಸರನ್ನ ಹೇಳುತ್ತಿದ್ದೇನೆ ಅಂತ ಪ್ರಶ್ನೆ ಮಾಡಬೇಡಿ. ನನ್ನ ಬಳಿ ಎಲ್ಲಾ ಸಾಕ್ಷಿ ಇದೆ. ಸಮಯ ಬಂದಾಗ ತೋರಿಸುವೆ'' - ಶ್ರುತಿ ಹರಿಹರನ್, ನಟಿ

    'ರೆಸಾರ್ಟ್ ಗೆ ಹೋಗೋಣ ಬಾ' ಎಂದು ಕರೆದರು : ಸರ್ಜಾ ಮೇಲೆ ಶ್ರುತಿ ಬಾಂಬ್!'ರೆಸಾರ್ಟ್ ಗೆ ಹೋಗೋಣ ಬಾ' ಎಂದು ಕರೆದರು : ಸರ್ಜಾ ಮೇಲೆ ಶ್ರುತಿ ಬಾಂಬ್!

    ಅರ್ಜುನ್ ಸರ್ಜಾ ಮೆಸೇಜ್ ಮಾಡಿದ್ರಾ.?

    ಅರ್ಜುನ್ ಸರ್ಜಾ ಮೆಸೇಜ್ ಮಾಡಿದ್ರಾ.?

    ''ಬಾಯ್ಮಾತಲ್ಲಿ ಡಿನ್ನರ್ ಹಾಗೂ ರೆಸಾರ್ಟ್ ಗೆ ಕರೆದರು. ಮೆಸೇಜ್ ಮಾಡಿಲ್ಲ. ಎರಡು ಮೂರು ಫಾರ್ವರ್ಡ್ ಬಿಟ್ಟರೆ ಅವರು ನನಗೆ ಯಾವುದೇ ಮೆಸೇಜ್ ಮಾಡಿಲ್ಲ'' - ಶ್ರುತಿ ಹರಿಹರನ್, ನಟಿ

    ಬೆದರಿಕೆ ಕರೆ ಬರುತ್ತಿದೆ

    ಬೆದರಿಕೆ ಕರೆ ಬರುತ್ತಿದೆ

    ''ನನಗೀಗ ಪಬ್ಲಿಸಿಟಿ ಅಗತ್ಯ ಇಲ್ಲ. ಅರ್ಜುನ್ ಸರ್ಜಾ ಅಭಿಮಾನಿಗಳಿಂದ ಬೆದರಿಕೆ ಕರೆ ಬರುತ್ತಿದೆ. ಒಂದೇ ಸಮನೆ ಕರೆ ಬರುತ್ತಿದೆ'' - ಶ್ರುತಿ ಹರಿಹರನ್, ನಟಿ

    English summary
    There is a reason to take out Arjun Sarja's name says Sruthi Hariharan.
    Sunday, October 21, 2018, 17:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X