Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೊರೊನಾ ಎಂಬುದು ಮೆಡಿಕಲ್ ಮಾಫಿಯಾ, ನಾನು ವ್ಯಾಕ್ಸಿನ್ ತಗೊಂಡಿಲ್ಲ: ಅಗ್ನಿ ಶ್ರೀಧರ್
ಕೊರೊನಾ ಎಂಬ ಕಾಯಿಲೆ ಬಗ್ಗೆ ಆರಂಭದಿಂದಲೂ ಹಲವರು ಅನುಮಾನ ವ್ಯಕ್ತಪಡಿಸುತ್ತಲೇ ಇದ್ದಾರೆ. ಇದು ಲ್ಯಾಬ್ನಲ್ಲಿ ಸೃಷ್ಟಿಸಲಾದ ವೈರಸ್ ಎಂದು ಕೆಲವರು ವಾದಿಸಿದರು, ಮೆಡಿಕಲ್ ಮಾಫಿಯಾಗಳು ಹಣ ಮಾಡಿಕೊಳ್ಳಲು ಸುಖಾ ಸುಮ್ಮನೆ ಕೊರೊನಾ ಭೀತಿ ಹರಡಿಸುತ್ತಿವೆ ಎಂಬ ಮಾತುಗಳೂ ಅಲ್ಲಲ್ಲಿ ಕೇಳಿ ಬರುತ್ತಲೇ ಇದೆ.
ಇದೀಗ ಚಿತ್ರಕತೆ ಬರಹಗಾರ ಅಗ್ನಿ ಶ್ರೀಧರ್ ಅವರು ಕೊರೊನಾ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ''ಕೋವಿಡ್ ಎಂಬುದು ಇಲ್ಲ, ಇದು ಕೇವಲ ಮೆಡಿಕಲ್ ಮಾಫಿಯಾ'' ಎಂದಿದ್ದಾರೆ.
'ಕ್ರೀಂ' ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ವೈದ್ಯಕೀಯ ವಿಭಾಗದವರು ಹಣ ಮಾಡಿಕೊಳ್ಳಲು ಕೊರೊನಾದ ಭೀತಿ ಹಬ್ಬಿಸಿದ್ದಾರೆ. ನಾನು ಈವರೆಗೆ ವ್ಯಾಕ್ಸಿನ್ ತೆಗೆದುಕೊಂಡಿಲ್ಲ. ನನ್ನ ಕುಟುಂಬವರೂ ಸಹ ವ್ಯಾಕ್ಸಿನ್ ತೆಗೆದುಕೊಂಡಿಲ್ಲ'' ಎಂದರು.
ಕೊರೊನಾ ಲಾಕ್ಡೌನ್ ಇನ್ನಿತರೆಗಳಿಂದ ರಾಜಕಾರಣಿಗಳು ತಳವರ್ಗದವರನ್ನು ಬದುಕಿರುವಾಗಲೆ ಕೊಂದಿದ್ದಾರೆ. ಇತ್ತೀಚೆಗೆ ನಾನು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾಗಲೂ ಇದೇ ಮಾತುಗಳನ್ನು ಹೇಳಿದ್ದೆ'' ಎಂದರು.
''ಶೇ. 60 ವೈದ್ಯರು ಈ ವರೆಗೆ ಕೊರೊನಾ ಲಸಿಕೆ ಪಡೆದಿಲ್ಲ. ಇದು ಸತ್ಯ. ಯಾರೂ ಕೊವಿಡ್ನಿಂದ ಸತ್ತಿಲ್ಲ. ಸತ್ತ ವ್ಯಕ್ತಿಯಲ್ಲಿ ನೂರಾರು ವೈರಸ್ ಇದೆ. ಇದನ್ನು ಹೈಲೈಟ್ ಮಾಡಲಾಗಿದೆ. ಇದು ನನ್ನ ಅಭಿಪ್ರಾಯ'' ಎಂದು ಅಗ್ನಿ ಶ್ರೀಧರ್ ಹೇಳಿದ್ದಾರೆ.
ರಾಜಕಾರಣಿಗಳ ಮೇಲೆ ತೀವ್ರ ವಾಗ್ದಾಳಿ ನಡೆಸಿರುವ ಅಗ್ನಿ ಶ್ರೀಧರ್, ''ಕೆಜಿಎಫ್ 2' ಸಿನಿಮಾ ಮುಗಿಸಿ ಎರಡು ವರ್ಷಗಳಾಗಿದೆ. ನೂರಾರು ಕೋಟಿ ಬಂಡವಾಳ ಹೂಡಿ ಎರಡು ವರ್ಷದಿಂದ ಸುಮ್ಮನೆ ಇಟ್ಟುಕೊಂಡಿರುವುದೆಂದರೆ ಸಾಮಾನ್ಯವೇ. ಈ ರಾಜಕಾರಣಿಗಳು ತಮಗೆ ಬೇಕಾದಾಗ ಅನ್ಲಾಕ್ ಮಾಡುತ್ತಾರೆ. ರಾಜಕೀಯ ಸಭೆ, ಮೋಜು ಮಸ್ತಿ ಮಾಡುತ್ತಾರೆ. ಸಿನಿಮಾ ಬಿಡುಗಡೆ ಎಂದ ಕೂಡಲೇ ಕೊರೊನಾ ಭೀತಿ ಎನ್ನುತ್ತಾರೆ. ಇವರೆಲ್ಲ ಕೊಳಕು ಜನ, ದುಷ್ಟ ಜನ'' ಎಂದು ಅಗ್ನಿ ಶ್ರೀಧರ್ ಹೇಳಿದ್ದಾರೆ.