Don't Miss!
- News ಮೈತ್ರಿ ಹೆಸರಿನಲ್ಲಿ ಬೆನ್ನಿಗೆ ಚೂರಿ ಹಾಕಿದರು; ಎಚ್.ಡಿ. ಕುಮಾರಸ್ವಾಮಿ ಆಕ್ರೋಶ
- Automobiles KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂಬಿ ಸತ್ತಾಗ ಜೊತೆಗಿದ್ದ ಆ ನಾಲ್ಕು ಜನ ಈಗ ಸುಮಲತಾಗೆ ಸೈನಿಕರು.!
Recommended Video
ರೆಬೆಲ್ ಸ್ಟಾರ್ ಅಂಬರೀಶ್ ಅಂದ್ರೆ ಇಡೀ ಇಂಡಸ್ಟ್ರಿಗೆ ಅಚ್ಚುಮೆಚ್ಚು. ಎಷ್ಟೇ ಬೈಯ್ತಿದ್ರೂ ಕಷ್ಟ ಅಂತ ಹೋದಾಗ ಕೈಹಿಡಿತಾರೆ ಎಂಬ ನಂಬಿಕೆ. ಅಂಬಿ ಕೂಡ ಅದೇ ರೀತಿ ಇದ್ರು ಬಿಡಿ. ಆಗ ಅಂಬರೀಶ್ ಇಲ್ಲ. ಆದ್ರೂ ಅವರ ಮೇಲಿನ ಅಭಿಮಾನ ಅಭಿಮಾನಿಗಳಿಗೆ ಕಮ್ಮಿಯಾಗಿಲ್ಲ.
ಹಾಗಾಗಿಯೇ ಮಂಡ್ಯದಲ್ಲಿ ಸುಮಲತಾ ಅವರಿಗೆ ಭರ್ಜರಿ ಬೆಂಬಲ ಸಿಕ್ಕಿದೆ. ಈ ಶಕ್ತಿಯ ಜೊತೆ ಸುಮಲತಾ ಅವರಿಗೆ ಇನ್ನೂ ನಾಲ್ಕು ಶಕ್ತಿಗಳು ಜೊತೆಯಲ್ಲಿವೆ. ಅದು ಯಾವುದು ಎಂದು ನೋಡಿದ್ರೆ, ಆ ನಾಲ್ಕು ಜನ ಕಾಣ್ತಾರೆ.
ಹೌದು, ಈ ನಾಲ್ಕು ಜನರು ಅಂದಿನಿಂದ ಇಂದಿನವರೆಗೂ ಅಂಬರೀಶ್ ಹಾಗೂ ಅಂಬಿ ಕುಟುಂಬದ ಜೊತೆ ನಿಂತಿದ್ದಾರೆ. ಅದಕ್ಕೆ ಕಾರಣ ಅಂಬಿ ಮೇಲಿನ ಪ್ರೀತಿ ಮತ್ತು ಅವರು ಮಾಡಿದ ಸಹಾಯ. ಅಂಬಿಯಿಲ್ಲದ ಸುಮಲತಾ ಅವರಿಗೆ ಬೆಂಬಲವಾಗಿ, ಶಕ್ತಿಯಾಗಿ ನಿಂತಿರುವುದು ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ, ಯಶ್ ಹಾಗೂ ದರ್ಶನ್.
ಸುಮಲತಾ ಪರ ಪ್ರಚಾರ ಮಾಡೋದ್ರಿಂದ 'ಜೋಡೆತ್ತು'ಗಳಿಗಾಗುವ ನಷ್ಟವೇನು?
ಅಂದು ಅಂಬರೀಶ್ ಸತ್ತಾಗಲೂ ಈ ನಾಲ್ಕು ಜನ ಅಂತಿಮ ಕ್ಷಣದವರೆಗೂ ಸುಮಲತಾ ಮತ್ತು ಅಭಿಷೇಕ್ ಜೊತೆಯಲ್ಲೇ ಇದ್ದರು. ಶೂಟಿಂಗ್ ನಿಮಿತ್ತ ವಿದೇಶದಲ್ಲಿ ದರ್ಶನ್ ಓಡೋಡಿ ಬಂದರು. ರಾತ್ರಿಯೆಲ್ಲಾ ಆಸ್ಪತ್ರೆ, ಮನೆ, ಕಲಾವಿದರ ಸಂಘ ಅಂತಹ ಯಶ್ ಓಡಾಡುತ್ತಿದ್ದರು. ರಾಕ್ ಲೈನ್ ಮತ್ತು ದೊಡ್ಡಣ್ಣ ಅಂತೂ ಅಂಬಿ ಪಾರ್ಥಿವ ಶರೀರ ಬಿಟ್ಟು ಎಲ್ಲೂ ಹೋಗೇ ಇಲ್ಲ.
ರಾಜನಂತೆ ಮೆರೆದ ಅಂಬರೀಶ್ ಪತ್ನಿ ಸುಮಲತಾ ಎಷ್ಟು ಸಾಲ ಹೊಂದಿದ್ದಾರೆ ಗೊತ್ತಾ?
ಈಗ ಅಂಬರೀಶ್ ಅವರ ಕನಸು, ಆದರ್ಶಗಳನ್ನ ಮುಂದುವರಿಸುತ್ತೇನೆ ಎಂದು ರಾಜಕೀಯಕ್ಕೆ ಬಂದಿರುವ ಸುಮಲತಾಗೆ ಈ ನಾಲ್ವರು ನಾಲ್ಕು ಸೈನಿಕರಂತೆ ನಿಂತಿದ್ದಾರೆ. ಮಂಡ್ಯದಲ್ಲಿ ಹೇಗಾದರೂ ಮಾಡಿ ಗೆಲ್ಲಿಸಲೇ ಬೇಕು ಎಂದು ಪಣತೊಟ್ಟು ಹೆಜ್ಜೆಯಿಟ್ಟಿದ್ದಾರೆ.