Don't Miss!
- News ಚಾಮರಾಜನಗರ: 12 ವರ್ಷಗೊಳಿಗೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಎಲ್ಲರನ್ನೂ ಬಯ್ಯೋದೇ ವಿಶೇಷ.!-ಬೈಗಳು ಹೇಗಿರುತ್ತವೆ ಗೊತ್ತಾ?
- Automobiles ಭಾರತದ ರಸ್ತೆಯಲ್ಲಿ ಘರ್ಜಿಸಲು ಬಂದ ಪವರ್ಫುಲ್ ಎಪ್ರಿಲಿಯಾ ಬೈಕ್ ವಿತರಣೆ ಮಾಹಿತಿ ಬಹಿರಂಗ
- Finance ಸಾಂಬಾರು ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿ, ಇಂದು 276ಕ್ಕೂ ಹೆಚ್ಚು ಚಿನ್ನಾಭರಣ ಮಳಿಗೆಗಳ ಒಡೆಯ!
- Lifestyle ಹಸುವಿನ ಹಾಲಿನಿಂದ ಇಡೀ ವಿಶ್ವಕ್ಕೆ ಇನ್ಸುಲಿನ್..! ಹೊಸ ಅಧ್ಯಯನದಲ್ಲಿ ಬಹಿರಂಗ.!
- Sports ಆರ್ಸಿಬಿ ಸ್ಟಾರ್ ಶ್ರೇಯಾಂಕಾ ಪಾಟೀಲ್ ಬಗ್ಗೆ ನಿಮಗೆಷ್ಟು ಗೊತ್ತು?; ಶಿಕ್ಷಣ, ವಯಸ್ಸು, ಕೌಟುಂಬಿಕ ಹಿನ್ನೆಲೆ ಬಗ್ಗೆ ಮಾಹಿತಿ
- Technology Samsung: ಸ್ಯಾಮ್ಸಂಗ್ನ ಮುಂಬರುವ ಫೋಲ್ಡಬಲ್ ಫೋನ್ ನೀವು ಊಹಿಸಲಾಗದ ಅಗ್ಗದ ಬೆಲೆಗೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂಬಿ ಸತ್ತಾಗ ಜೊತೆಗಿದ್ದ ಆ ನಾಲ್ಕು ಜನ ಈಗ ಸುಮಲತಾಗೆ ಸೈನಿಕರು.!
Recommended Video
ರೆಬೆಲ್ ಸ್ಟಾರ್ ಅಂಬರೀಶ್ ಅಂದ್ರೆ ಇಡೀ ಇಂಡಸ್ಟ್ರಿಗೆ ಅಚ್ಚುಮೆಚ್ಚು. ಎಷ್ಟೇ ಬೈಯ್ತಿದ್ರೂ ಕಷ್ಟ ಅಂತ ಹೋದಾಗ ಕೈಹಿಡಿತಾರೆ ಎಂಬ ನಂಬಿಕೆ. ಅಂಬಿ ಕೂಡ ಅದೇ ರೀತಿ ಇದ್ರು ಬಿಡಿ. ಆಗ ಅಂಬರೀಶ್ ಇಲ್ಲ. ಆದ್ರೂ ಅವರ ಮೇಲಿನ ಅಭಿಮಾನ ಅಭಿಮಾನಿಗಳಿಗೆ ಕಮ್ಮಿಯಾಗಿಲ್ಲ.
ಹಾಗಾಗಿಯೇ ಮಂಡ್ಯದಲ್ಲಿ ಸುಮಲತಾ ಅವರಿಗೆ ಭರ್ಜರಿ ಬೆಂಬಲ ಸಿಕ್ಕಿದೆ. ಈ ಶಕ್ತಿಯ ಜೊತೆ ಸುಮಲತಾ ಅವರಿಗೆ ಇನ್ನೂ ನಾಲ್ಕು ಶಕ್ತಿಗಳು ಜೊತೆಯಲ್ಲಿವೆ. ಅದು ಯಾವುದು ಎಂದು ನೋಡಿದ್ರೆ, ಆ ನಾಲ್ಕು ಜನ ಕಾಣ್ತಾರೆ.
ಹೌದು, ಈ ನಾಲ್ಕು ಜನರು ಅಂದಿನಿಂದ ಇಂದಿನವರೆಗೂ ಅಂಬರೀಶ್ ಹಾಗೂ ಅಂಬಿ ಕುಟುಂಬದ ಜೊತೆ ನಿಂತಿದ್ದಾರೆ. ಅದಕ್ಕೆ ಕಾರಣ ಅಂಬಿ ಮೇಲಿನ ಪ್ರೀತಿ ಮತ್ತು ಅವರು ಮಾಡಿದ ಸಹಾಯ. ಅಂಬಿಯಿಲ್ಲದ ಸುಮಲತಾ ಅವರಿಗೆ ಬೆಂಬಲವಾಗಿ, ಶಕ್ತಿಯಾಗಿ ನಿಂತಿರುವುದು ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ, ಯಶ್ ಹಾಗೂ ದರ್ಶನ್.
ಸುಮಲತಾ ಪರ ಪ್ರಚಾರ ಮಾಡೋದ್ರಿಂದ 'ಜೋಡೆತ್ತು'ಗಳಿಗಾಗುವ ನಷ್ಟವೇನು?
ಅಂದು ಅಂಬರೀಶ್ ಸತ್ತಾಗಲೂ ಈ ನಾಲ್ಕು ಜನ ಅಂತಿಮ ಕ್ಷಣದವರೆಗೂ ಸುಮಲತಾ ಮತ್ತು ಅಭಿಷೇಕ್ ಜೊತೆಯಲ್ಲೇ ಇದ್ದರು. ಶೂಟಿಂಗ್ ನಿಮಿತ್ತ ವಿದೇಶದಲ್ಲಿ ದರ್ಶನ್ ಓಡೋಡಿ ಬಂದರು. ರಾತ್ರಿಯೆಲ್ಲಾ ಆಸ್ಪತ್ರೆ, ಮನೆ, ಕಲಾವಿದರ ಸಂಘ ಅಂತಹ ಯಶ್ ಓಡಾಡುತ್ತಿದ್ದರು. ರಾಕ್ ಲೈನ್ ಮತ್ತು ದೊಡ್ಡಣ್ಣ ಅಂತೂ ಅಂಬಿ ಪಾರ್ಥಿವ ಶರೀರ ಬಿಟ್ಟು ಎಲ್ಲೂ ಹೋಗೇ ಇಲ್ಲ.
ರಾಜನಂತೆ ಮೆರೆದ ಅಂಬರೀಶ್ ಪತ್ನಿ ಸುಮಲತಾ ಎಷ್ಟು ಸಾಲ ಹೊಂದಿದ್ದಾರೆ ಗೊತ್ತಾ?
ಈಗ ಅಂಬರೀಶ್ ಅವರ ಕನಸು, ಆದರ್ಶಗಳನ್ನ ಮುಂದುವರಿಸುತ್ತೇನೆ ಎಂದು ರಾಜಕೀಯಕ್ಕೆ ಬಂದಿರುವ ಸುಮಲತಾಗೆ ಈ ನಾಲ್ವರು ನಾಲ್ಕು ಸೈನಿಕರಂತೆ ನಿಂತಿದ್ದಾರೆ. ಮಂಡ್ಯದಲ್ಲಿ ಹೇಗಾದರೂ ಮಾಡಿ ಗೆಲ್ಲಿಸಲೇ ಬೇಕು ಎಂದು ಪಣತೊಟ್ಟು ಹೆಜ್ಜೆಯಿಟ್ಟಿದ್ದಾರೆ.