Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇದು ಕೇವಲ ಅಲ್ಪವಿರಾಮ ಅಷ್ಟೇ, ಫುಲ್ ಸ್ಟಾಪ್ ಅಲ್ಲ
ಮಂಜುಳಾ ಅವರಿಗೆ ಸಂಸಾರವನ್ನು ಸರಿಪಡಿಸಿಕೊಳ್ಳಲು ದಾರಿಗಳು ಬೇರೆ ಇದ್ದವು. ಇಷ್ಟೆಲ್ಲಾ ಮಾಡಿಕೊಳ್ಳುವ ಅಗತ್ಯವಿರಲಿಲ್ಲ. ಕೋರ್ಟ್ ಗೆ ಹೋಗುವ ಬದಲು ನನ್ನ ಜೊತೆಗೇ ನೇರವಾಗಿ ಮಾತನಾಡಬಹುದಿತ್ತು. ನನ್ನ ಕುಟುಂಬದವರ ಜೊತೆ ಮಾತನಾಡಬಹುದು. ಅವರು ಏಕಾಏಕಿ ಕೋರ್ಟ್ ಗೆ ಹೋದರು. ನನ್ನ ಮಗಳ ಜೊತೆಗೆ ಮಾತನಾಡಲು ಅವಕಾಶ ಕೊಡದೆ ಕೋರ್ಟ್ ಮೆಟ್ಟಿಲೇರಿದರು.
ಸರಿ ಕೋರ್ಟ್ ನಲ್ಲೇ ನನಗೆ ನ್ಯಾಯ ಸಿಗಲಿ ಎಂದು ಹೋರಾಡುತ್ತಿದ್ದೇನೆ. ಅವರ ಮಾರ್ಗದಲ್ಲೇ ನಡೆಯುತ್ತಿದ್ದೇನೆ. ಯಾವುದೇ ಕಾರಣಕ್ಕೂ ಮಂಜುಳಾ ಜೊತೆ ಬದುಕುವ ಪ್ರಶ್ನೆ ಈ ಜನ್ಮದಲ್ಲಿ ಇಲ್ಲ. ನನ್ನ ಜೊತೆ ಬದುಕ ಬೇಕು ಎಂಬ ಆಸೆ ಎಂಟು ವರ್ಷಗಳಲ್ಲಿ ಇಲ್ಲದ್ದು ಎಂಟು ಗಂಟೆ ಎಂಟು ನಿಮಿಷಗಳಲ್ಲಿ ಬರಲು ಸಾಧ್ಯವೇ?
ಶ್ರುತಿ ಅವರ ಮನಸ್ಸಿಗೆ ನೋವುಂಟು ಮಾಡಿದೆನಲ್ಲಾ ಎಂಬ ಪಶ್ಚಾತ್ತಾಪ ನನಗಿದೆ. ಮಂಜುಳಾ ಅವರ ಮುಂದಿನ ಜೀವನ ಅವರು ನಿರ್ಧರಿಸಬೇಕು. ಒಂದು ಸರಿ ಕನ್ನಡಿ ಹೊಡೆದು ಹೋದರೆ ಜೋಡಿಸಲು ಸಾಧ್ಯವೇ? ಅವರು ಬಹಳ ಹಿಂದೆಯೇ ತಿಳಿದುಕೊಳ್ಳಬೇಕಾಗಿತ್ತು. ಕೋರ್ಟ್ ಹೋದರೆ ಸಂಸಾರ ಎಂಬ ಕನ್ನಡಿಯನ್ನು ಜೋಡಿಸಲು ಸಾಧ್ಯವೇ?
ನನ್ನ ತಾಯಿ ಬಗ್ಗೆ ಏನೆಲ್ಲಾ ಮಾತನಾಡಿದರು. ನನ್ನ ಬಗ್ಗೆ ಎಷ್ಟೆಲ್ಲಾ ಮಾತನಾಡಿದರು. ನನ್ನ ಬಗ್ಗೆ ಗೌರವ ಇಟ್ಟುಕೊಂಡಿದ್ದರೆ ಬೇರೆ ತರಹ ಮಾತನಾಡುತ್ತಿದ್ದರು. ಸಂಬಂಧಗಳ ವಿಚಾರಕ್ಕೆ ಬಂದಾಗ ತುಂಬಾ ಪ್ರಬುದ್ಧವಾಗಿ ವರ್ತಿಸಬೇಕಾಗುತ್ತದೆ. ನಮ್ಮ ನಡವಳಿಕೆಗಳೆಲ್ಲವನ್ನೂ ಸಮಾಜ ಗಮನಿಸುತ್ತಿರುತ್ತದೆ. ನಾನು ನಮ್ಮ ಆತ್ಮಸಾಕ್ಷಿಗೆ ನಡೆದುಕೊಳ್ಳಬೇಕಾಗುತ್ತದೆ.
ಮಂಜುಳಾ ಅವರು ನನ್ನ ಮನಸ್ಸಿನಿಂದ ಡಿಲೀಟ್ ಆಗಿದ್ದಾರೆ. ಇದನ್ನು ಮಾತುಕತೆ ಮೂಲಕವೇ ಪರಿಹರಿಸಿಕೊಳ್ಳೋಣ ಎಂದುಕೊಂಡಿದ್ದೆವು. ಈಗ ಅವರು ಕೋರ್ಟ್ ಗೆ ಹೋಗಿದ್ದಾರೆ. ಕೋರ್ಟ್ ನಲ್ಲೇ ಪರಿಹರಿಸಿಕೊಳ್ಳುತ್ತೇನೆ. ಈಗ ಒಂದು ಪ್ರಕರಣದ ತೀರ್ಪನ್ನು ನ್ಯಾಯಾಲಯ ಕೊಟ್ಟಿದೆ. ಇನ್ನೂ ಎರಡು ಕೇಸ್ ಗಳಿವೆ.
ಈಗ ಬಂದಿರುವ ತೀರ್ಪು ಕೇವಲ ಅಲ್ಪ ವಿರಾಮ ಅಷ್ಟೇ. ಇದೇ ಫುಲ್ ಸ್ಟಾಪ್ ಅಲ್ಲ. ಇನ್ನೂ ಎರಡು ಪ್ರಕರಣಗಳು ಕೋರ್ಟ್ ನಲ್ಲಿವೆ. ನನ್ನ ಮತ್ತು ಮಂಜುಳಾ ನಡುವಿನ ಸಂಬಂಧ ಯಾ ಹೊತ್ತೋ ಸತ್ತು ಹೋಗಿತ್ತು. ಈಗ ಅದನ್ನು ಬಡಿದು ಎಬ್ಬಿಸಿ ನಿಲ್ಲಿಸಿದ್ದಾರೆ. ಅದನ್ನು ನ್ಯಾಯಾಲಯಲ್ಲಿ ಮುಗಿಸಿಕೊಳ್ಳಬೇಕಾಗಿತ್ತು. ಅದನ್ನು ಮಾಡದಿದ್ದಕ್ಕೇ ಇಷ್ಟೆಲ್ಲಾ ಆಯಿತು.