Don't Miss!
- News ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಪ್ರಮುಖ ಆರೋಪಿಯನ್ನು ಬಂಧಿಸಿದ ಎನ್ಐಎ
- Lifestyle ಗಾಯ ಗುಣವಾಗಲು, ದೃಷ್ಟಿ ಸುಧಾರಣೆ ಸೇರಿ ಕೀವಿ ಹಣ್ಣಿನ ಲಾಭ ಎಷ್ಟಿದೆ ಗೊತ್ತಾ?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪವನ್ ಕುಮಾರ್ ರಿಗೆ 'ಗಾಳಿಪಟ 2' ಸಿನಿಮಾ ಸಿಗೋಕ್ಕೆ ಈ ಫೋಟೋನೇ ಕಾರಣ
'ಗಾಳಿಪಟ 2' ಸಿನಿಮಾದಲ್ಲಿ ಏನೆಲ್ಲ ಬದಲಾಗಿ ಹೋಯಿತು. ಆದರೆ, ಸಿನಿಮಾದ ನಾಯಕರಲ್ಲಿ ಒಬ್ಬರಾದ ಪವನ್ ಕುಮಾರ್ ಮಾತ್ರ ಚಿತ್ರತಂಡದಲ್ಲಿಯೇ ಉಳಿದುಕೊಂಡಿದ್ದಾರೆ. ಅವರಿಗೆ 'ಗಾಳಿಪಟ 2' ಸಿನಿಮಾದ ಅವಕಾಶ ಕೊಡಿಸಿದ್ದು, ಅದೇ ಸಿನಿಮಾದಲ್ಲಿ ಉಳಿಯುವಂತೆ ಮಾಡಿದ್ದು, ಒಂದು ಫೋಟೋ.
ಈ ಫೋಟೋವನ್ನು ಪವನ್ ಕುಮಾರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೇ ಫೋಟೋ ಮೂಲಕ 'ಗಾಳಿಪಟ 2' ಸಿನಿಮಾಗೆ ಪವನ್ ಕುಮಾರ್ ಆಯ್ಕೆ ಆಗಿದ್ದಾರೆ. ಈ ಫೋಟೋ ಹಿಂದಿನ ಕಥೆಯನ್ನು ಪವನ್ ಇದೀಗ ತಿಳಿಸಿದ್ದಾರೆ.
ಅದಿತಿ ಪ್ರಭುದೇವ ಕೈ ತಪ್ಪಿದ 'ಗಾಳಿಪಟ 2' ಸಿನಿಮಾ
2018ರಲ್ಲಿ ಹೈದರಾಬಾದ್ ನಲ್ಲಿ 'ಯೂ ಟರ್ನ್' ಸಿನಿಮಾದ ಚಿತ್ರೀಕರಣದಲ್ಲಿ ಪವನ್ ಬ್ಯುಸಿ ಇದ್ದರು. ಒಂದು ಮುಂಜಾನೆ ಎದ್ದು, ಒಂದು ಸೆಲ್ಫಿ ತೆಗೆದುಕೊಂಡರು. ಈ ಫೋಟೋವನ್ನು ಮೆಸೇಜ್ ಮಾಡುವ ಸಮಯದಲ್ಲಿ ಎಮೋಜಿಯಾಗಿ ಬಳಸಿ ಪ್ರತಿಕ್ರಿಯೆ ನೀಡಿದ್ದರು.
ಈ ಫೋಟೋ ನಿರ್ದೇಶಕ ಯೋಗರಾಜ್ ಕಣ್ಣಿಗೆ ಬಿತ್ತು. ಫೋಟೋ ನೋಡಿ ಸಿಕ್ಕಾಪಟ್ಟೆ ನಕ್ಕ ಯೋಗರಾಜ್ ಭಟ್, 'ಗಾಳಿಪಟ 2' ಚಿತ್ರದಲ್ಲಿ ಪವನ್ ಗಾಗಿಯೇ ಒಂದು ಪಾತ್ರ ಬರೆದರು. ಸುಮ್ಮನೆ ಕ್ಲಿಕಿಸಿದ ಈ ಫೋಟೋ ಒಂದು ಪಾತ್ರದ ಉದಯಕ್ಕೆ ಸ್ಫೂರ್ತಿ ನೀಡಿತ್ತು.
'ಗಾಳಿಪಟ 2' ಸ್ಟಾರ್ ಗಳ ಬದಲಾವಣೆಗೆ ಇದೇ ಕಾರಣವೇ?
ಆ ಫೋಟೋ ನೋಡಿ ನೋಡಿ 'ಗಾಳಿಪಟ 2' ಸಿನಿಮಾದಲ್ಲಿ ಪವನ್ ಗಾಗಿಯೇ ಯೋಗರಾಜ್ ಭಟ್ ಒಂದು ಪಾತ್ರ ಬರೆದರು. ಹೀಗಾಗಿ ಚಿತ್ರದ ತಾರಗಣದಲ್ಲಿ ಏನೇ ಬದಲಾವಣೆ ಆದರೂ, ಪವನ್ ಮಾತ್ರ ಹಾಗೆಯೇ ಉಳಿದುಕೊಂಡಿದ್ದಾರೆ. ಗಣೇಶ್ ಹಾಗೂ ದಿಗಂತ್ ಸಿನಿಮಾದ ಉಳಿದ ನಾಯಕರಾಗಿದ್ದಾರೆ.