Don't Miss!
- News BJP Big Campaign: ಏಪ್ರಿಲ್ 20 ರಿಂದ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕರ ದಂಡು! ಯಾರ್ಯಾರು ಬರಲಿದ್ದಾರೆ?
- Automobiles Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
- Finance ಆಪ್ ಸ್ಟೋರ್ನಿಂದ ವಾಟ್ಸಾಪ್, ಥ್ರೆಡ್ ತೆಗೆದುಹಾಕಿದ ಆಪಲ್!
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Technology Google Maps: ಗೂಗಲ್ ಮ್ಯಾಪ್ಸ್ ನಲ್ಲಿ ಹೊಸ ಸೌಲಭ್ಯ! ಹತ್ತಿರದ EV ಚಾರ್ಜಿಂಗ್ ಸ್ಟೇಷನ್ ಸರ್ಚ್ ಬಲು ಸುಲಭ
- Lifestyle ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪವನ್ ಕುಮಾರ್ ರಿಗೆ 'ಗಾಳಿಪಟ 2' ಸಿನಿಮಾ ಸಿಗೋಕ್ಕೆ ಈ ಫೋಟೋನೇ ಕಾರಣ
'ಗಾಳಿಪಟ 2' ಸಿನಿಮಾದಲ್ಲಿ ಏನೆಲ್ಲ ಬದಲಾಗಿ ಹೋಯಿತು. ಆದರೆ, ಸಿನಿಮಾದ ನಾಯಕರಲ್ಲಿ ಒಬ್ಬರಾದ ಪವನ್ ಕುಮಾರ್ ಮಾತ್ರ ಚಿತ್ರತಂಡದಲ್ಲಿಯೇ ಉಳಿದುಕೊಂಡಿದ್ದಾರೆ. ಅವರಿಗೆ 'ಗಾಳಿಪಟ 2' ಸಿನಿಮಾದ ಅವಕಾಶ ಕೊಡಿಸಿದ್ದು, ಅದೇ ಸಿನಿಮಾದಲ್ಲಿ ಉಳಿಯುವಂತೆ ಮಾಡಿದ್ದು, ಒಂದು ಫೋಟೋ.
ಈ ಫೋಟೋವನ್ನು ಪವನ್ ಕುಮಾರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೇ ಫೋಟೋ ಮೂಲಕ 'ಗಾಳಿಪಟ 2' ಸಿನಿಮಾಗೆ ಪವನ್ ಕುಮಾರ್ ಆಯ್ಕೆ ಆಗಿದ್ದಾರೆ. ಈ ಫೋಟೋ ಹಿಂದಿನ ಕಥೆಯನ್ನು ಪವನ್ ಇದೀಗ ತಿಳಿಸಿದ್ದಾರೆ.
ಅದಿತಿ ಪ್ರಭುದೇವ ಕೈ ತಪ್ಪಿದ 'ಗಾಳಿಪಟ 2' ಸಿನಿಮಾ
2018ರಲ್ಲಿ ಹೈದರಾಬಾದ್ ನಲ್ಲಿ 'ಯೂ ಟರ್ನ್' ಸಿನಿಮಾದ ಚಿತ್ರೀಕರಣದಲ್ಲಿ ಪವನ್ ಬ್ಯುಸಿ ಇದ್ದರು. ಒಂದು ಮುಂಜಾನೆ ಎದ್ದು, ಒಂದು ಸೆಲ್ಫಿ ತೆಗೆದುಕೊಂಡರು. ಈ ಫೋಟೋವನ್ನು ಮೆಸೇಜ್ ಮಾಡುವ ಸಮಯದಲ್ಲಿ ಎಮೋಜಿಯಾಗಿ ಬಳಸಿ ಪ್ರತಿಕ್ರಿಯೆ ನೀಡಿದ್ದರು.
ಈ ಫೋಟೋ ನಿರ್ದೇಶಕ ಯೋಗರಾಜ್ ಕಣ್ಣಿಗೆ ಬಿತ್ತು. ಫೋಟೋ ನೋಡಿ ಸಿಕ್ಕಾಪಟ್ಟೆ ನಕ್ಕ ಯೋಗರಾಜ್ ಭಟ್, 'ಗಾಳಿಪಟ 2' ಚಿತ್ರದಲ್ಲಿ ಪವನ್ ಗಾಗಿಯೇ ಒಂದು ಪಾತ್ರ ಬರೆದರು. ಸುಮ್ಮನೆ ಕ್ಲಿಕಿಸಿದ ಈ ಫೋಟೋ ಒಂದು ಪಾತ್ರದ ಉದಯಕ್ಕೆ ಸ್ಫೂರ್ತಿ ನೀಡಿತ್ತು.
'ಗಾಳಿಪಟ 2' ಸ್ಟಾರ್ ಗಳ ಬದಲಾವಣೆಗೆ ಇದೇ ಕಾರಣವೇ?
ಆ ಫೋಟೋ ನೋಡಿ ನೋಡಿ 'ಗಾಳಿಪಟ 2' ಸಿನಿಮಾದಲ್ಲಿ ಪವನ್ ಗಾಗಿಯೇ ಯೋಗರಾಜ್ ಭಟ್ ಒಂದು ಪಾತ್ರ ಬರೆದರು. ಹೀಗಾಗಿ ಚಿತ್ರದ ತಾರಗಣದಲ್ಲಿ ಏನೇ ಬದಲಾವಣೆ ಆದರೂ, ಪವನ್ ಮಾತ್ರ ಹಾಗೆಯೇ ಉಳಿದುಕೊಂಡಿದ್ದಾರೆ. ಗಣೇಶ್ ಹಾಗೂ ದಿಗಂತ್ ಸಿನಿಮಾದ ಉಳಿದ ನಾಯಕರಾಗಿದ್ದಾರೆ.