ಚೆನ್ನೈ ಬಿಟ್ಟು ಕರ್ನಾಟಕದಲ್ಲೇ ಇರುತ್ತಾರಾ ನಟಿ ಲೀಲಾವತಿ ಮೊಮ್ಮಗ?: ಅಂತಿಮ ದರ್ಶನ ಪಡೆದು ಯುವರಾಜ್ ಹೇಳಿದ್ದೇನು?

ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದ ಚಂದನವನದ ಹಿರಿಯ ನಟಿ ಲೀಲಾವತಿ ಅವರು ನಮ್ಮನ್ನು ಅಗಲಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಕೊನೆಯುಸಿರೆಲೆದಿದ್ದು, ಇಂದು ಅಂತ್ಯಕ್ರಿಯೆ ನಡೆಯಲಿದೆ. ನೆಲಮಂಗಲದ ತೋಟದ ಮನೆಯಿಂದ ಪಾರ್ಥಿವ ಶರೀರವನ್ನು ತಂದು ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿದೆ.

ಅಗಲಿದ ಹಿರಿಯ ಜೀವಕ್ಕೆ ಕನಡಿಗರು ನಮನ ಸಲ್ಲಿಸುತ್ತಿದ್ದಾರೆ. ರಾಜಕೀಯ ಮುಖಂಡರು, ಕಲಾವಿದರು, ಅಭಿಮಾನಿಗಳು ಸೇರಿದಂತೆ ಬಂದು ಬಳಗದವರು ಬರುತ್ತಿದ್ದಾರೆ. ಇದರ ಜೊತೆಗೆ ನಟ ವಿನೋದ್ ರಾಜ್ ಅವರ ಪುತ್ರ ಯುವರಾಜ್ ಚೆನ್ನೈನಿಂದ ಬಂದು ಅಜ್ಜಿಯ ದರ್ಶನ ಪಡೆದಿದ್ದಾರೆ.

This is what vinod raj son yuvraj said after kannada actress Leelavathi Death

ಅಜ್ಜಿಯ ಆಸೆಗಾಗಿ ಚೆನ್ನೈ ಬಿಡುವ ಸೂಚನೆ ಕೊಟ್ಟ ಮೊಮ್ಮಗ ಯುವರಾಜ್

ಲೀಲಾವತಿ ಅವರ ಅಂತಿಮ ದರ್ಶನಕ್ಕೆ ವಿನೋದ್ ರಾಜ್ ಅವರ ಪತ್ನಿ ಅನು ಮತ್ತು ಮಗ ಯುವರಾಜ್ ಚೈನ್ನೈನಿಂದ ಬಂದಿದ್ದಾರೆ. ಈ ವೇಳೆ ಅಂತಿಮ ದರ್ಶನ ಪಡೆದು ಅಜ್ಜಿಯ ಬಗ್ಗೆ ಪ್ರೀತಿಯ ಮಾತನಾಡಿರುವ ಅವರು, ಅಜ್ಜಿಗಾಗಿ, ಅವರ ಕೆಲಸಗಳಿಗಾಗಿ ಕರ್ನಾಟಕದಲ್ಲೇ ಉಳಿಯುವ ಭರವಸೆ ನೀಡಿದ್ದಾರೆ.

ಮೊದಲಿನಿಂದಲೂ ಚೆನ್ನೈನಲ್ಲೇ ಇರುವ ಅವರು, ಅಜ್ಜಿಯ ನಿಧನದ ಬಳಿಕ ಕರ್ನಾಟಕದಲ್ಲಿ ಅವರಿಗೆ ಸಿಗುತ್ತಿರುವ ಪ್ರೋಯ, ಗೌರವ ಕಂಡು ಆಶ್ಚರ್ಯ ಪಟ್ಟಿದ್ದಾರೆ. ಅಲ್ಲದೇ ತಮ್ಮ ಅಜ್ಜಿಯ ಆಸೆಗಳನ್ನು ಈಡೇರಿಸುವ ಸಲುವಾಗಿ ಮತ್ತು ಅವರು ಮಾಡುತ್ತಿದ್ದ ಸಾಮಾಜಿಕ ಕೆಲಸಗಳನ್ನು ಮುಂದುವರೆಸಲು ನಾನು ಇಲ್ಲಿಯೇ ಇರುವುದಾಗಿ ಹೇಳಿದ್ದಾರೆ.

This is what vinod raj son yuvraj said after kannada actress Leelavathi Death

ಚೆನ್ನೈನಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಮೊಮ್ಮಗ ಯುವರಾಜ್‌ಗೆ ನಟಿ ಲೀಲಾವತಿ ಅವರ ಸಾಧನೆಗಳ ಬಗ್ಗೆ ಅಷ್ಟು ತಿಳಿದಿರಲಿಲ್ಲವಂತೆ. ಈಗ ಅವರ ಬಗ್ಗೆ, ಅವರ ಸಾಧನೆಗ ಅರಿವಾಗುತ್ತಿದ್ದು, ಜನರು ತೋರುತ್ತಿರುವ ಗೌರ, ಪ್ರೀತಿ ಕಂಡು ಮೂಕವಿಸ್ಮಿರಾಗಿದ್ದಾರೆ. ಹೀಗಾಗಿಯೇ ಇಲ್ಲಿಯೇ ಇರುವ ಸುಳಿವು ನೀಡಿದ್ದಾರೆ.

ತಾಯಿಯೇ ಸರ್ವಸ್ವ ಎಂದು ಬದುಕುತ್ತಿದ್ದ ನಟ ವಿನೋದ್ ರಾಜ್ ಈಗ ನಿಜಕ್ಕೂ ಒಂಟಿಯಾಗಿದ್ದಾರೆ. ಅವರಿಗೆ ಕುಟುಂಬದ ಆಸರೆ ನಿಜಕ್ಕೂ ಬೇಕಿದೆ. ತಂದೆಗೆ ಹೆಗಲಾಗಿ ನಿಲ್ಲುವ ಕೆಲಸ ಯುವರಾಜ್ ಮಾಡಬೇಕಿದೆ. ಇದೇ ಕಾರಣಕ್ಕೆ ನನ್ನ ತಂದೆ ಬೆಂಬಲವಾಗಿ ನಾನು ಇಲ್ಲಿಯೇ ಇರುತ್ತೇನೆ ಎಂದಿದ್ದಾರೆ. ಮದುವೆಯಾಗಿಲ್ಲ ಎಂದು ಕೊಂಡಿದ್ದ ವಿನೋದ್ ರಾಜ್ ಅವರ ಫ್ಯಾಮಿಲಿ ಫೋಟೋವನ್ನು ನಿರ್ದೇಶಕ ಪ್ರಕಾಶ್ ರಾಜ್ ಮೇಹು ಈ ಹಿಂದೆ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿ ಎಲ್ಲರನ್ನು ದಂಗುಬಡಿಸಿದ್ದರು.

ಲೀಲಾವತಿ ಅಂತ್ಯಕ್ರಿಯೆ

ನಟಿ ಲೀಲಾವತಿ ಅವರ ಪಾರ್ಥಿವ ಶರೀರವನ್ನು ನೆಲಮಂಗಲದಿಂದ ತಂದು ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ನೆಲಮಂಗಲದ ಸೋಲದೇವನಹಳ್ಳಿಗೆ ವಾಪಸ್ ತೆಗೆದುಕೊಂಡು ಹೋಗಿ ಅವರ ನೆಚ್ಚಿನ ತೋಟದ ಮನೆಯ ಬಳಿ ಅಂತ್ಯಕ್ರಿಯೆ ನಡೆಸಲಾಗುತ್ತದೆ.

More from Filmibeat

English summary
Vinod raj son yuvraj talks about grandmother Leelavathi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X