Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪುನೀತ್ ರಾಜ್ಕುಮಾರ್ ಹೆಸರಲ್ಲಿ ಪುಷ್ಪೋತ್ಸವ: ಸಚಿವ ಮುನಿರತ್ನ
ಈ ಬಾರಿ ಲಾಲ್ಬಾಗ್ ಪುಷ್ಪೋತ್ಸವವನ್ನು ನಟ ಪುನೀತ್ ರಾಜ್ಕುಮಾರ್ ಹೆಸರಲ್ಲಿ ಆಯೋಜಿಸಲಾಗುವುದು ಎಂದು ತೋಟಗಾರಿಕಾ ಸಚಿವ ಮುನಿರತ್ನ ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿನಡೆಸಿ ಮಾತನಾಡಿದ ಮುನಿರತ್ನ, ''ಆಗಸ್ಟ್ 05 ರಿಂದ ಆಗಸ್ಟ್ 15 ರ ವರೆಗೆ ಸ್ವಾತಂತ್ರ್ತೋತ್ಸವದ ಪ್ರಯುಕ್ತ ಲಾಲ್ಬಾಗ್ನಲ್ಲಿ ಪುಷ್ಪೋತ್ಸವ ಆಯೋಜಿಸಲಾಗುತ್ತಿದ್ದು, ಈ ಬಾರಿ ಪುನೀತ್ ರಾಜ್ಕುಮಾರ್ ಹೆಸರಲ್ಲಿ ಪುಷ್ಪೋತ್ಸವ ನಡೆಯಲಿದೆ'' ಎಂದಿದ್ದಾರೆ.
ಚಿತ್ರಮಂದಿರ, ಚಿತ್ರರಂಗದ ಮೇಲೆ ಹಿಡಿತ ಸಾಧಿಸುವ ಸಿಎಂ ಜಗನ್ ಯೋಜನೆಗೆ ಆರಂಭಿಕ ಹಿನ್ನಡೆ!
ಆಗಸ್ಟ್ 05 ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಪುಷ್ಪೋತ್ಸವವನ್ನು ಉದ್ಘಾಟನೆ ಮಾಡುತ್ತಾರೆ. ಕೋವಿಡ್ ನಿಮಯಗಳ ಅನುಗುಣವಾಗಿಯೇ ಪುಷ್ಪೋತ್ಸವ ನಡೆಯಲಿದೆ. ಪೊಷ್ಪೋತ್ಸವದ ಒಟ್ಟು ಥೀಮ್ ಪುನೀತ್ ರಾಜ್ಕುಮಾರ್ ಅವರ ಸಿನಿಮಾ, ವ್ಯಕ್ತಿತ್ವವನ್ನು ಆಧರಿಸಿರುತ್ತದೆ ಅಲ್ಲದೆ ಅಪ್ಪು ಅವರ ಗಾಜನೂರಿನ ಮನೆಯನ್ನು ಸಹ ಹೂವಿನಿಂದ ಅಲಂಕರಿಸಲಾಗುತ್ತದೆ'' ಎಂದಿದ್ದಾರೆ ಸಚಿವ ಮುನಿರತ್ನ.
ಈ ಬಾರಿ ಸ್ವಾತಂತ್ರ್ಯ ದಿನದ ಬಳಿಕವೂ ಕೆಲವು ದಿನಗಳ ಕಾಲ ಪುಷ್ಪೋತ್ಸವ ಮುಂದುವರೆಯಲಿದೆ. ಭಾರತದ ವಿವಿಧ ವಿಶೇಷ ಹೂವುಗಳ ಜೊತೆಗೆ, ವಿದೇಶದಿಂದಲೂ ಹೂವುಗಳನ್ನು ಈ ಬಾರಿಯ ಪುಷ್ಪೋತ್ಸವಕ್ಕೆ ತರಿಸಲಾಗುತ್ತದೆ ಎಂದು ಮುನಿರತ್ನ ಹೇಳಿದ್ದಾರೆ.
ಇದೇ ವೇಳೆ ರಾಜ್ಯದ ಕೆಲ ಭಾಗಗಳಲ್ಲಿ ಆಗುತ್ತಿರುವ ಮಳೆ ಹಾಗೂ ಅದರಿಂದ ಆಗುತ್ತಿರುವ ತೋಟಗಾರಿಕಾ ಬೆಳೆಗಳಿಗೆ ಆಗುತ್ತಿರುವ ಹಾನಿಯ ಬಗ್ಗೆ ಮಾತನಾಡಿರುವ ಸಚಿವರು, ಅಧಿಕಾರಿಗಳು ಮಾಹಿತಿಯನ್ನು ತರಿಸಿಕೊಳ್ಳುತ್ತಿದ್ದಾರೆ. ದಾಖಲೆ, ಮಾಹಿತಿ ಕ್ರೂಢೀಕರಣ ಆದ ಬಳಿಕ ಏನೇನು, ಎಷ್ಟು ನಷ್ಟವಾಗಿದೆಯೋ ಗಮನಸಿಸಿ ಸರ್ಕಾರವು ಸಹಾಯ ಮಾಡಲಿದೆ. ನಮ್ಮ ಸರ್ಕಾರ ಸದಾ ಕಾಲ ರೈತರ ಪರವಾಗಿ ಇದೆ'' ಎಂದಿದ್ದಾರೆ ಮುನಿರತ್ನ.
ಸರ್ಕಾರ ಈಗಾಗಲೇ ಪುನೀತ್ ರಾಜ್ಕುಮಾರ್ಗೆ ಹಲವು ವಿಧದಲ್ಲಿ ಗೌರವ ಸಲ್ಲಿಸಿದೆ. ಬಿಬಿಎಂಪಿಯು ತನ್ನ ವ್ಯಾಪ್ತಿಯ ಉದ್ದನೆಯ ರಸ್ತೆಗೆ ಪುನೀತ್ ರಾಜ್ ಕುಮಾರ್ ಹೆಸರಿಟ್ಟಿದೆ. ಸರ್ಕಾರದ ಯೋಜನೆಯೊಂದಕ್ಕೂ ಪುನೀತ್ ರಾಜ್ಕುಮಾರ್ ಹೆಸರಿಡುವ ಪ್ರಸ್ತಾವನೆ ಸರ್ಕಾರದ ಮುಂದಿದೆ.
Recommended Video