Don't Miss!
- Sports IPL 2024: RCB vs KKR ಹೆಡ್-ಟು-ಹೆಡ್ ದಾಖಲೆ, ಪಿಚ್ ವರದಿ; ಚಿನ್ನಸ್ವಾಮಿಯಲ್ಲಿ ಗೆಲುವು ಯಾರಿಗೆ?
- Finance ವಿವಿಧ ರಾಜ್ಯಗಳ ನರೇಗಾ ಕಾರ್ಮಿಕರ ವೇತನ ದರ ಪರಿಷ್ಕರಣೆ, ವಿವರ
- News KRS ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ: ಖಡಕ್ ಎಚ್ಚರಿಕೆ ನೀಡಿದ ಹೈಕೋರ್ಟ್
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಸಿರು ಜಾಗೃತಿ ಮೂಡಿಸಿದ ಪವರ್ ಸ್ಟಾರ್ ಹಾಗೂ ಮಿಲ್ಕಿ ಬ್ಯೂಟಿ
Recommended Video
ಏರ್ಪಿಲ್ ತಿಂಗಳು ಶುರುವಾಗುತ್ತಿದ್ದಂತೆ ಬೇಸಿಗೆ ಹೆಚ್ಚಾಗುತ್ತಿದೆ. ಜನರು ನೀರಿನ ಬಗ್ಗೆ ಹಾಗೂ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಆರಂಭಿಸಿದ್ದಾರೆ. ಇದೇ ಸಮಯದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಮಿಲ್ಕಿ ಬ್ಯೂಟಿ ತಮನ್ನಾ ಕೂಡ ಬೆಂಗಳೂರಿನ ಹಸಿರಿನ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಆದರೇ ಈ ಇಬ್ಬರು ಸ್ಟಾರ್ ಗಳು ವಿಭಿನ್ನ ರೀತಿಯಲ್ಲಿ ತಮ್ಮ ಪರಿಸರ ಕಾಳಜಿಯನ್ನ ತೋರಿದ್ದಾರೆ.
ಜಾಹೀರಾತಿಗಾಗಿ ಕೆಂಪೇಗೌಡರ ಹೆಸರನ್ನ ಬಳಕೆ ಮಾಡಿಕೊಂಡಿದ್ದಾರೆ ಎಂದು ಬೇಸರ ಮಾಡಿಕೊಂಡಿದ್ದ ಬೆಂಗಳೂರು ಜನಕ್ಕೆ ಪೋತಿಸ್ ಅಂಗಡಿ ಮಾಲೀಕರು ಬೆಂಗಳೂರನ್ನ ಹಾಗೂ ತಮ್ಮ ಮನೆಯ ಸುತ್ತಾ ಮುತ್ತಲಿನ ಪರಿಸರವನ್ನ ಉಳಿಸಿಕೊಳ್ಳಲು ಸುಂದರ ಅವಕಾಶವನ್ನು ನೀಡಿದ್ದಾರೆ.
ಪೋತಿಸ್ ಅಂಗಡಿ ಬರಿ ವ್ಯಾಪಾರಕ್ಕೆ ಮಾತ್ರವಲ್ಲ ಪರಿಸರ ಕಾಳಜಿಗೂ ಎನ್ನುವ ಮಾತನ್ನು ಪುನೀತ್ ರಾಜ್ ಕುಮಾರ್ ನಟಿ ತಮನ್ನಾ ತಮ್ಮದೇ ಸ್ಟೈಲ್ ನಲ್ಲಿ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಪೋತಿಸ್ ನಲ್ಲಿ ಬಟ್ಟೆ ಕೊಂಡುಕೊಂಡ ಪ್ರತಿಯೊಬ್ಬರಿಗೂ ಒಂದು ಗಿಡವನ್ನ ನೀಡಲು ನಿರ್ಧಾರ ಮಾಡಿದ್ದಾರೆ.
ಹೂ ಹಾಗೂ ಹಣ್ಣಿನ ಗಿಡಗಳು ಮತ್ತು ನೆರಳು ನೀಡುವಂತಹ ಸಸ್ಯಗಳನ್ನ ನೀಡುತ್ತಿದ್ದಾರೆ. ಇದಕ್ಕಾಗಿ ಮಾಡಿರುವ ಹೊಸ ಜಾಹೀರಾತಿನಲ್ಲಿ ಪವರ್ ಸ್ಟಾರ್ ಹಾಗೂ ತಮನ್ನಾ ಅಭಿನಯ ಮಾಡಿದ್ದಾರೆ. ಹಳೆಯ ಜಾಹೀರಾತು ನೋಡಿ ಬೇಸರಗೊಂಡ ಅಭಿಮಾನಿಗಳು ಪರಿಸರ ಜಾಗೃತಿ ಮಾಡುತ್ತಿರುವ ಜಾಹೀರಾತನ್ನು ನೋಡಿ ಫುಲ್ ಖುಷ್ ಆಗಿದ್ದಾರೆ.