Don't Miss!
- News ಮಳೆ.. ಮಳೆ.. ಗುಡುಗು ಸಹಿತ ಭರ್ಜರಿ ಮಳೆಗೆ ತತ್ತರಿಸಿದ ಕರ್ನಾಟಕ!
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓಡ
- Finance Bengaluru Traffic Police: ಬೆಂಗಳೂರಿನ ಈ ರಸ್ತೆ ಸಂಚಾರ ಮಾರ್ಗ ಬದಲಾವಣೆ, ವಿವರ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ತುರ್ತು ನಿರ್ಗಮನ': ಮತ್ತೆ ಬಂದ್ರು ಸುನೀಲ್, ಸಂಯುಕ್ತ ಹೆಗ್ಡೆ
'ತುರ್ತು ನಿರ್ಗಮನ' ಕನ್ನಡ ಸಿನಿಮಾದ ಟೀಸರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಸಿನಿಮಾದ ಟೀಸರ್ ತುಂಬ ಇಂಟ್ರೆಸ್ಟಿಂಗ್ ಆಗಿದೆ.
ನಟ ಸುನೀಲ್ ರಾವ್ ಸಿನಿಮಾದ ನಾಯಕನಾಗಿದ್ದಾರೆ. ದೊಡ್ಡ ಗ್ಯಾಪ್ ನಂತರ ಮತ್ತೆ ಬೆಳ್ಳಿ ಪರದೆ ಮೇಲೆ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಪಾತ್ರಕ್ಕೆ ತಕ್ಕ ಹಾಗೆ ಇದ್ದಾರೆ ಎನ್ನುವ ಕಾರಣಕ್ಕೆ ಸುನೀಲ್ ರನ್ನು ಆಯ್ಕೆ ಮಾಡಲಾಗಿದೆಯಂತೆ. ವರ್ಷಗಳ ನಂತರ ಸಂಯುಕ್ತ ಹೆಗ್ಡೆ ಕೂಡ ಮತ್ತೆ ಎಂಟ್ರಿ ನೀಡಿದ್ದು, ಚಿತ್ರದ ನಾಯಕಿಯಾಗಿದ್ದಾರೆ.
ರಾಬರ್ಟ್-ಕೋಟಿಗೊಬ್ಬನ ಜೊತೆ ಕಿಚ್ಚು ಹಚ್ಚಿದ ಸಲಗ, ಶೋಕಿವಾಲ
ಈ ಸಿನಿಮಾದ ವಿಷಯವೇ ತುಂಬ ಕುತೂಹಲಕಾರಿಯಾಗಿದೆ. ಚಿತ್ರದ ನಾಯಕನ ಪಾತ್ರ ಸಾಯುವ ಕೊನೆಯ 3 ದಿನದಲ್ಲಿ ಏನೆಲ್ಲ ಮಾಡಬಹುದು ಎನ್ನುವುದು ಕಥೆಯಾಗಿದೆ. ಇದರ ಜೊತೆಗೆ ಮೂರು ದಿನದ ಬದುಕು ಎನ್ನುವ ಫಿಲಾಸಫಿಯನ್ನು ಕೂಡ ಹೇಳಿದ್ದಾರೆ.
ಹೇಮಂತ್ ಕುಮಾರ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ 'ಗೋದಿ ಬಣ್ಣ ಸಾಧಾರಣ ಮೈ ಕಟ್ಟು' ಸಿನಿಮಾದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಜೊತೆಗೆ ಜಾಹಿರಾತು, ಕಿರುಚಿತ್ರಗಳ ಮೂಲಕ ಗಮನ ಸೆಳೆದಿದ್ದರು.
ರಾಜ್ ಬಿ ಶೆಟ್ಟಿ, ಸುಧಾರಾಣಿ, ಅಚ್ಚುತ್ ಕುಮಾರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿ ಅಜಿತ್ ಕುಮಾರ್ ಸಂಕಲನ, ಧೀರೆಂದ್ರ ದೊಸ್ ಸಂಗೀತ, ಪ್ರಯಾಗ್ ಮುಕುಂದನ್ ಕ್ಯಾಮರಾ ವರ್ಕ್ ಸಿನಿಮಾದಲ್ಲಿ ಇದೆ. ಫೆಬ್ರವರಿಯಲ್ಲಿ ಸಿನಿಮಾ ಬಿಡುಗಡೆ ಮಾಡಲು ತಯಾರಿ ನಡೆಯುತ್ತಿದೆ.