Don't Miss!
- News ಕಾಂಗ್ರೆಸ್ ಜನರಿಗೆ ಹೋಲ್ಸೆಲ್ ಮೋಸ ಮಾಡುತ್ತಿದೆ: ಮಾಜಿ ಸಿಎಂ
- Sports ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅವಾರ್ಡ್ಸ್ನಲ್ಲಿ ವಿರಾಟ್ ಕೊಹ್ಲಿಯ 50ನೇ ಏಕದಿನ ಶತಕ!
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕಬೀರ್ ಸಿಂಗ್' ಚಿತ್ರದ ಎಫೆಕ್ಟ್: ಹುಡುಗಿಯನ್ನು ಕೊಂದ ಟಿಕ್ ಟಾಕ್ ಸ್ಟಾರ್
ಶಾಹೀದ್ ಕಪೂರ್ ನಟಿಸಿದ್ದ ಸೂಪರ್ ಹಿಟ್ 'ಕಬೀರ್ ಸಿಂಗ್' ಚಿತ್ರವನ್ನ ಬಹಳ ಇಷ್ಟ ಪಟ್ಟಿದ್ದ ಉತ್ತರ ಪ್ರದೇಶದ ಟಿಕ್ ಟಾಕ್ ಖ್ಯಾತಿಯ ಜಾನಿದಾದಾ, ತಾನು ಪ್ರೀತಿಸಿದ ಹುಡುಗಿಯನ್ನ ಕೊಂದಿರುವ ಪ್ರಕರಣ ಬೆಳಕಿಗೆ ಬಂದಿದೆ.
ತಾನು ಪ್ರೀತಿಸುತ್ತಿದ್ದ ಹುಡುಗಿ ಮದುವೆಯಾಗಲು ನಿರಾಕರಿಸಿ, ಇನ್ನೊಬ್ಬ ವ್ಯಕ್ತಿಯ ಜೊತೆ ವಿವಾಹವಾಗಲು ಸಜ್ಜಾಗಿದ್ದರು. ಈ ವಿಷಯ ತಿಳಿದ ಜಾನಿದಾದಾ, 'ನನಗೆ ಸಿಗದವರು, ಬೇರೆ ಯಾರಿಗೂ ಸಿಗಬಾರದು' ಎಂಬ ಕಾರಣಕ್ಕಾಗಿ ಆಕೆಯನ್ನ ಕೊಂದಿದ್ದಾರೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
Recommended Video
ಹುಡುಗಿಯನ್ನ ಕೊಲೆ ಮಾಡಿ ತಲೆ ತಪ್ಪಿಸಿಕೊಂಡು ತಿರುಗಾಡುತ್ತಿದ್ದ ಜಾನಿದಾದಾ ಅಲಿಯಾಸ್ ಅಶ್ವಿನ್ ಕುಮಾರ್, ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನುಮಾನಾಸ್ಪದವಾಗಿ ಸಾವಿಗೀಡಾದ ಖ್ಯಾತ ಪಾಪ್ ಗಾಯಕಿ
ಕೊಲೆಯಾದ ಯುವತಿ ಹೆಸರು ನಿಖಿತಾ ಶರ್ಮಾ ಎಂದು ತಿಳಿದುಬಂದಿದೆ. ಇನ್ನು ಜಾನಿ ದಾದಾ ಅವರ ಬಗ್ಗೆ ತನಿಖೆ ನಡೆಸಿದಾಗ, ಆತ ಕಬೀರ್ ಸಿಂಗ್ ಚಿತ್ರದಿಂದ ಬಹಳಷ್ಟು ಪ್ರಭಾವಿತನಾಗಿದ್ದನು ಎಂಬುದು ತಿಳಿದುಬಂದಿದೆ. ಕಬೀರ್ ಸಿಂಗ್ ಸಿನಿಮಾದ ಆ ನಾಯಕನ ಪಾತ್ರದಿಂದ ಸ್ಪೂರ್ತಿ ಪಡೆದುಕೊಂಡಿದ್ದ ಜಾನಿ ದಾದಾ ಹಲವು ಟಿಕ್ ಟಾಕ್ ವಿಡಿಯೋಗಳನ್ನ ಮಾಡಿದ್ದನಂತೆ.
ಕಬೀರ್ ಸಿಂಗ್ ಚಿತ್ರಕ್ಕೆ ಎದುರಾಯ್ತು ಕಂಟಕ: ದೂರು ದಾಖಲು
ಕೊನೆಯದಾಗಿ, ಕಬೀರ್ ಸಿಂಗ್ ಚಿತ್ರದ ಫೇಮಸ್ ಡೈಲಾಗ್ 'ನನಗೆ ಸಿಗದವರು, ಬೇರೆ ಯಾರಿಗೂ ಸಿಗಬಾರದು' ಎಂಬ ವಿಡಿಯೋವನ್ನ ಮಾಡಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಈ ಕೊಲೆಯಾಗಿರುವುದಕ್ಕೂ, ಆ ವಿಡಿಯೋ ಮಾಡಿರುವುದಕ್ಕೂ ಸಂಬಂಧವಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಕಬೀರ್ ಸಿಂಗ್ ಚಿತ್ರದ ನಿರ್ದೇಶಕ ಸಂದೀಪ್ ವಂಗಾ ಪ್ರತಿಕ್ರಿಯಿಸಿದ್ದು, ''ಆ ಯುವತಿಗೆ ಮತ್ತು ಅವರ ಕುಟುಂಬಕ್ಕೆ ನಾನು ಕ್ಷಮೆ ಕೇಳುತ್ತೇನೆ. ಸಿನಿಮಾಗಳನ್ನ ಯಾರೂ ಕೆಟ್ಟ ಉದ್ದೇಶದಿಂದ ಮಾಡುವುದಿಲ್ಲ. ಕೊಲೆ ಮಾಡುವುದನ್ನ ಕಬೀರ್ ಸಿಂಗ್ ಸಿನಿಮಾ ಬೆಂಬಲಿಸುವುದಿಲ್ಲ'' ಎಂದಿದ್ದಾರೆ.