Don't Miss!
- News Bullet train: ಬುಲೆಟ್ ರೈಲು ಸೇವೆ ಆರಂಭದ ಬಗ್ಗೆ ಅಶ್ವಿನಿ ವೈಷ್ಣವ್ ಅವರಿಂದ ಮಹತ್ವದ ಮಾಹಿತಿ
- Automobiles ಭರ್ಜರಿ ಮೈಲೇಜ್ನ ಹೈಬ್ರಿಡ್ ಮಾರುತಿ ಸ್ವಿಫ್ಟ್: ಇವಿ ಕಾರುಗಳನ್ನೂ ಹಿಂದಿಕ್ಕಲಿದೆ ಎಂದ ಭವಿಷ್ಯವಾಣಿ!
- Sports IPL 2024: ಮುಂಬೈ ಇಂಡಿಯನ್ಸ್ಗೆ ಭಾರೀ ಹಿನ್ನಡೆ; ಹಾರ್ಟ್ಬ್ರೇಕ್ ಪೋಸ್ಟ್ ಮಾಡಿದ ಸೂರ್ಯಕುಮಾರ್
- Technology Airtel & Noise: ಇನ್ಮುಂದೆ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಸ್ಮಾರ್ಟ್ವಾಚ್ನದ್ದೇ ಹವಾ! ಟ್ಯಾಪ್-ಟು-ಪೇ ಫೀಚರ್ಸ್..
- Finance ಬಾಬಾ ರಾಮ್ದೇವ್ಗೆ ಖುದ್ದು ಹಾಜರಾಗುವಂತೆ ಖಡಕ್ ಸೂಚನೆ ನೀಡಿದ ಸುಪ್ರೀಂ ಕೋರ್ಟ್
- Lifestyle ಈರುಳ್ಳಿ ಹಾಕದೆ 3 ಪದಾರ್ಥ ಹಾಕಿ 5 ನಿಮಿಷದಲ್ಲಿ ಚಟ್ನಿ ಮಾಡಬಹುದು.! ಇಲ್ಲಿದೆ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕಬೀರ್ ಸಿಂಗ್' ಚಿತ್ರದ ಎಫೆಕ್ಟ್: ಹುಡುಗಿಯನ್ನು ಕೊಂದ ಟಿಕ್ ಟಾಕ್ ಸ್ಟಾರ್
ಶಾಹೀದ್ ಕಪೂರ್ ನಟಿಸಿದ್ದ ಸೂಪರ್ ಹಿಟ್ 'ಕಬೀರ್ ಸಿಂಗ್' ಚಿತ್ರವನ್ನ ಬಹಳ ಇಷ್ಟ ಪಟ್ಟಿದ್ದ ಉತ್ತರ ಪ್ರದೇಶದ ಟಿಕ್ ಟಾಕ್ ಖ್ಯಾತಿಯ ಜಾನಿದಾದಾ, ತಾನು ಪ್ರೀತಿಸಿದ ಹುಡುಗಿಯನ್ನ ಕೊಂದಿರುವ ಪ್ರಕರಣ ಬೆಳಕಿಗೆ ಬಂದಿದೆ.
ತಾನು ಪ್ರೀತಿಸುತ್ತಿದ್ದ ಹುಡುಗಿ ಮದುವೆಯಾಗಲು ನಿರಾಕರಿಸಿ, ಇನ್ನೊಬ್ಬ ವ್ಯಕ್ತಿಯ ಜೊತೆ ವಿವಾಹವಾಗಲು ಸಜ್ಜಾಗಿದ್ದರು. ಈ ವಿಷಯ ತಿಳಿದ ಜಾನಿದಾದಾ, 'ನನಗೆ ಸಿಗದವರು, ಬೇರೆ ಯಾರಿಗೂ ಸಿಗಬಾರದು' ಎಂಬ ಕಾರಣಕ್ಕಾಗಿ ಆಕೆಯನ್ನ ಕೊಂದಿದ್ದಾರೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
Recommended Video
ಹುಡುಗಿಯನ್ನ ಕೊಲೆ ಮಾಡಿ ತಲೆ ತಪ್ಪಿಸಿಕೊಂಡು ತಿರುಗಾಡುತ್ತಿದ್ದ ಜಾನಿದಾದಾ ಅಲಿಯಾಸ್ ಅಶ್ವಿನ್ ಕುಮಾರ್, ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನುಮಾನಾಸ್ಪದವಾಗಿ ಸಾವಿಗೀಡಾದ ಖ್ಯಾತ ಪಾಪ್ ಗಾಯಕಿ
ಕೊಲೆಯಾದ ಯುವತಿ ಹೆಸರು ನಿಖಿತಾ ಶರ್ಮಾ ಎಂದು ತಿಳಿದುಬಂದಿದೆ. ಇನ್ನು ಜಾನಿ ದಾದಾ ಅವರ ಬಗ್ಗೆ ತನಿಖೆ ನಡೆಸಿದಾಗ, ಆತ ಕಬೀರ್ ಸಿಂಗ್ ಚಿತ್ರದಿಂದ ಬಹಳಷ್ಟು ಪ್ರಭಾವಿತನಾಗಿದ್ದನು ಎಂಬುದು ತಿಳಿದುಬಂದಿದೆ. ಕಬೀರ್ ಸಿಂಗ್ ಸಿನಿಮಾದ ಆ ನಾಯಕನ ಪಾತ್ರದಿಂದ ಸ್ಪೂರ್ತಿ ಪಡೆದುಕೊಂಡಿದ್ದ ಜಾನಿ ದಾದಾ ಹಲವು ಟಿಕ್ ಟಾಕ್ ವಿಡಿಯೋಗಳನ್ನ ಮಾಡಿದ್ದನಂತೆ.
ಕಬೀರ್ ಸಿಂಗ್ ಚಿತ್ರಕ್ಕೆ ಎದುರಾಯ್ತು ಕಂಟಕ: ದೂರು ದಾಖಲು
ಕೊನೆಯದಾಗಿ, ಕಬೀರ್ ಸಿಂಗ್ ಚಿತ್ರದ ಫೇಮಸ್ ಡೈಲಾಗ್ 'ನನಗೆ ಸಿಗದವರು, ಬೇರೆ ಯಾರಿಗೂ ಸಿಗಬಾರದು' ಎಂಬ ವಿಡಿಯೋವನ್ನ ಮಾಡಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಈ ಕೊಲೆಯಾಗಿರುವುದಕ್ಕೂ, ಆ ವಿಡಿಯೋ ಮಾಡಿರುವುದಕ್ಕೂ ಸಂಬಂಧವಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಕಬೀರ್ ಸಿಂಗ್ ಚಿತ್ರದ ನಿರ್ದೇಶಕ ಸಂದೀಪ್ ವಂಗಾ ಪ್ರತಿಕ್ರಿಯಿಸಿದ್ದು, ''ಆ ಯುವತಿಗೆ ಮತ್ತು ಅವರ ಕುಟುಂಬಕ್ಕೆ ನಾನು ಕ್ಷಮೆ ಕೇಳುತ್ತೇನೆ. ಸಿನಿಮಾಗಳನ್ನ ಯಾರೂ ಕೆಟ್ಟ ಉದ್ದೇಶದಿಂದ ಮಾಡುವುದಿಲ್ಲ. ಕೊಲೆ ಮಾಡುವುದನ್ನ ಕಬೀರ್ ಸಿಂಗ್ ಸಿನಿಮಾ ಬೆಂಬಲಿಸುವುದಿಲ್ಲ'' ಎಂದಿದ್ದಾರೆ.