Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶೀರ್ಷಿಕೆ ವಿವಾದದಲ್ಲಿ ಭಟ್ರ 'ದನ ಕಾಯೋನು'
ಯೋಗರಾಜ್ ಭಟ್ ಮತ್ತು ದುನಿಯಾ ವಿಜಯ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ 'ದನ ಕಾಯೋನು' ಚಿತ್ರದ ಮುಹೂರ್ತ ನಿನ್ನೆಯಷ್ಟೇ ನೆರವೇರಿದೆ. ಇನ್ನಷ್ಟೇ ಶೂಟಿಂಗ್ ಶುರು ಮಾಡಬೇಕಿರುವ 'ದನ ಕಾಯೋನು' ಚಿತ್ರದ ಹಣೆಬರಹ ಇದೀಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಂಗಳದಲ್ಲಿದೆ.
ಟೈಟಲ್ ವಿವಾದದಲ್ಲಿ ಯೋಗರಾಜ್ ಭಟ್ ನಿರ್ದೇಶನದ 'ದನ ಕಾಯೋನು' ಚಿತ್ರ ಸಿಲುಕಿಕೊಂಡಿದೆ. ವರ್ಷದ ಹಿಂದೆಯೇ 'ದನ ಕಾಯೋನು' ಅನ್ನುವ ಟೈಟಲ್ ನ ಸಲೀ ಉಲ್ಲಾ ಖಾನ್ ಅನ್ನುವವರು ರಿಜಿಸ್ಟರ್ ಮಾಡಿಸಿದ್ದರು.
ಅವರಿಂದ ಯಾವುದೇ ಪರ್ಮಿಷನ್ ಪಡೆಯದೇ, ಟೈಟಲ್ ಅನೌನ್ಸ್ ಮಾಡಿ ಮುಹೂರ್ತ ಕೂಡ ಮುಗಿಸಿದ್ದಾರೆ ಭಟ್ರು. ಮಾಧ್ಯಮಗಳ ಮುಖಾಂತರ ವಿಷಯ ತಿಳಿದು, ಸಲೀ ಉಲ್ಲಾ ಖಾನ್, ಫಿಲ್ಮ್ ಚೇಂಬರ್ ಮೆಟ್ಟಿಲೇರಿ ದೂರು ದಾಖಲಿಸಿದ್ದಾರೆ. [ದನ ಕಾಯೋನ್ಹಿಂದೆ ಹೊರಟ ನಟಿ ಪ್ರಿಯಾಮಣಿ]
ಸಲೀ ಉಲ್ಲಾ ಖಾನ್ ನೀಡಿರುವ ದೂರಿನ ಆಧಾರದ ಮೇಲೆ ವಾಣಿಜ್ಯ ಮಂಡಳಿ ಅಧ್ಯಕ್ಷ ಥಾಮಸ್ ಡಿಸೋಜ ಇಂದು ಸಭೆ ನಡೆಸಿದರು. 'ದನ ಕಾಯೋನು' ಚಿತ್ರದ ನಿರ್ಮಾಪಕರಾದ ಕನಕಪುರ ಶ್ರೀನಿವಾಸ್ ಮತ್ತು ಕೆ.ಪಿ.ಶ್ರೀಕಾಂತ್ ಸಭೆಯಲ್ಲಿ ಪಾಲ್ಗೊಂಡರು. ಆದರೆ ಒಮ್ಮತದ ನಿರ್ಧಾರಕ್ಕೆ ಬಾರದೆ ಇರುವ ಕಾರಣ, ಸಭೆಯನ್ನ ನಾಳೆಗೆ ಮುಂದೂಡಲಾಗಿದೆ. [ದನ ಕಾಯುವತ್ತ ನಟ ದುನಿಯಾ ವಿಜಯ್ ಚಿತ್ತ]
ಟೈಟಲ್ ಬಿಟ್ಟುಕೊಡುವುದಕ್ಕೆ ಸಲೀ ಉಲ್ಲಾ ಖಾನ್ ಒಪ್ಪದೇ ಇದ್ದರೆ, ದುನಿಯಾ ವಿಜಿ ದನ ಕಾಯುವ ಕೆಲಸ ಬಿಡಬೇಕಾಗಬಹುದು.