Don't Miss!
- Finance ಬೆಂಗಳೂರು-ತುಮಕೂರು ನಮ್ಮ ಮೆಟ್ರೋ ಯೋಜನೆ: ಬರಲಿವೆ 19 ಎತ್ತರದ ನಿಲ್ದಾಣಗಳು
- News ಬೆಳಗಾವಿಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಲಕ್ಷ್ಮಿ ಹೆಬ್ಬಾಳ್ಕರ್ಗೆ ಸಮನ್ಸ್ ಜಾರಿ
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Automobiles Tata Nexon: ಟಾಟಾ ನೆಕ್ಸಾನ್ ಹೊಸ ರೂಪಾಂತರಗಳು ಬಿಡುಗಡೆ, ರೂ.10 ಲಕ್ಷ ಬೆಲೆ.. ಆಕರ್ಷಕ ವೈಶಿಷ್ಟ್ಯಗಳು
- Sports Riyan Parag: 'ಗಾಯದಿಂದ ಮೂರು ದಿನ ಒದ್ದಾಡಿ ಹೋಗಿದ್ದೆ': ರಿಯಾನ್ ಪರಾಗ್
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅವಮಾನ ಮಾಯ ಮಾಡಿದ ಅಣ್ಣಾವ್ರ ಕಥೆ ಹೇಳಿದ ಟಿ.ಎನ್ ಸೀತಾರಾಂ
ಆ ದಿನಗಳಲ್ಲಿ ರಾಜಕುಮಾರ್ ರವರು ಕನ್ನಡದ ಮನಸ್ಸು ಗಳನ್ನು ಅಕ್ಷರಶಃ ಆಳುತ್ತಿದ್ದರು.. ನನಗೆ ಅವರನ್ನು ಮಾತನಾಡಿಸಿ ಸಾಧ್ಯವಾದರೆ ಅವರ ಜತೆ ಒಂದು ಫೋಟೋ ತೆಗೆಸಿಕೊಳ್ಳಬೇಕೆಂಬ ಆಸೆ ನನ್ನ ಹೈಸ್ಕೂಲ್ ದಿನಗಳಿಂದ ಇದ್ದು, ಆ ಆಸೆ ಈಡೇರದೆ ಕಮರಿ ಹೋಗಿತ್ತು.. ಆ ದಿನಗಳಲ್ಲಿ ನನ್ನ ಮಾಯಾಮೃಗ ಮುಗಿದಿತ್ತು..ನಾನು ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದೆ....ಆ ಅವಮಾನ ಕಾಡುತ್ತಿತ್ತು..
ನಂತರ ಕೆಲವು ದಿನಕ್ಕೆ ಈಟಿವಿ ಶುರುವಾಯಿತು.... ಆ ಸಮಯದಲ್ಲಿ ಒಂದು ರಾತ್ರಿ 9 ಗಂಟೆ ಸಮಯದಲ್ಲಿ ಚೆನ್ನ ಫೋನ್ ಮಾಡಿದರು. ಚೆನ್ನ ರಾಜ್ ಕುಮಾರ್ ರವರ ಅತ್ಯಂತ ಆತ್ಮೀಯ ವ್ಯಕ್ತಿ, ಸೆಕ್ರೆಟರಿ, ಎಲ್ಲಾ.. ನನಗೆ ಗೊತ್ತಿದ್ದ ಮನುಷ್ಯ..
"ಅಣ್ಣ ಇಲ್ಲೊಬ್ಬರು ನಿಮ್ಮ ಹತ್ತಿರ ಮಾತನಾಡಬೇಕಂತೆ" ಎಂದರು
"ಯಾರು"
ಎಂದೆ.
ನೋಡಿದರೆ
ಮಾತನಾಡುತ್ತಿದ್ದುದು
ಸ್ವತಹ
ರಾಜಕುಮಾರ್
ರವರು.
ಟಿ.ಎನ್ ಸೀತಾರಾಮ್ ಎಂದರೆ ಸಾವಯವ ಕೃಷಿಕ
"ನಮಸ್ಕಾರ...
...ನಿಮ್ಮ
ಧಾರಾವಾಹಿಗಳ
ಅಭಿಮಾನಿ...ನಿಮ್ಮ
ಮಾಯಾಮೃಗವಂತೂ
ನಾವು
ಒಂದು
ದಿನ
ಬಿಟ್ಟಿಲ್ಲ..."
ಎಂದು
ಹೇಳುತ್ತಿದ್ದಂತೆ
ನನ್ನ
ಗಂಟಲು
ಒಣಗಿ,ಎದೆ
ಹೊಡೆದು
ಕೊಳ್ಳಲು
ಆರಂಭಿಸಿತು...
'ಈಗ
ನಾವು
ನಮ್ಮ
ಬ್ಯಾನರ್
ನ
ಅಡಿಯಲ್ಲಿ
ಒಂದು
ಧಾರಾವಾಹಿ
ಈಟಿವಿ
ಗೆ
ಮಾಡಬೇಕೆಂದು
ತೀರ್ಮಾನ
ವಾಗಿದೆ...ನಾಳೆ
ಭಾನುವಾರ
ಚಿತ್ರೀಕರಣ
ಆರಂಭ....ತಾವು
ಮುಖ್ಯ
ಅತಿಥಿಗಳಾಗಿ
ಬಂದು
ಕ್ಯಾಮರಾ
ಆನ್
ಮಾಡಬೇಕು."
ಎಂದರು.ಅನಿರೀಕ್ಷಿತವಾಗಿ
ಬಂದ
ಈ
ಸಂತೋಷದಿಂದಾಗಿ
ನನಗೆ
ಮಾತೇ
ಹೊರಡಲಿಲ್ಲ.
ಅದನ್ನು
ಅವರು
ತಪ್ಪು
ತಿಳಿದರು.
ಟಿಎನ್ ಸೀತಾರಾಮ್ ಒಂದು 'ಜೀವಂತ ದಂತಕತೆ'..!
"ನಿಮಗೆ
ಅವತ್ತು
ಬಿಡುವಿಲ್ಲ
ಅಂದರೆ
ಹೇಳಿ.ನಿಮಗೆ
ಅನುಕೂಲವಾದ
ದಿನಕ್ಕೆ
ಚಿತ್ರೀಕರಣವನ್ನು
ಮುಂದೂಡುತ್ತೇವೆ
"
ಎಂದರು.ನನಗೆ
ನಾಚಿಕೆ
ಆಯಿತು."ಇಲ್ಲ
ಸಾರ್...(
ಸಾರ್
ಅನ್ನಬೇಕೋ,
ಅಣ್ಣಾವ್ರೇ
ಅನ್ನಬೇಕೋ
ಎಂಬ
ಗೊಂದಲ)...ಬಿಡುವಾಗಿದ್ದೇನೆ
ಬರುತ್ತೇನೆ"
ಎಂದು
ಹೇಳಿಬಿಟ್ಟೆ.
ಅವತ್ತೆಲ್ಲ
ನನಗೆ
ಅನುಮಾನ..
ಬೇರೆಯವರಿಗೆ
ಹೇಳಲುಹೋಗಿ
ನನಗೆ
ಹೇಳಿರಬಹುದೇ
ಎಂದು.
ಭಾನುವಾರ ಗೀತಾ, ಅಶ್ವಿನಿ ಜತೆ ಹೋದೆ.ಅವರ ಮನೆಯ ಎಲ್ಲರೂ ಇದ್ದರು..ಅವರಂಥ ಸೌಜನ್ಯದ ಮೂರ್ತಿ ಯನ್ನು ನಾನು ನೋಡೇ ಇರಲಿಲ್ಲ.. ನಾನು ಹೋಗುವುದಕ್ಕೆ ಕಾಯುತ್ತಿದ್ದರು.ಹಾರ ಹಾಕಿದರು.ಅದೇ ಗೀತಾ ಕೈಲಿ ಚಿತ್ರದಲ್ಲಿ ಇರುವ ಹಾರ. ನಾನು ಸೋತಿದ್ದರ ಅವಮಾನ ನಂತರ ಮಾಯವಾಯಿತು.
(ಟಿಎನ್ ಸೀತಾರಾಂ ಅವರ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪ್ರಕಟ ಮಾಡಿಕೊಂಡಿರುವ ಸಾಲುಗಳನ್ನ ಯಥಾವತ್ತಾಗಿ ಇಲ್ಲಿ ಪ್ರಕಟಿಸಲಾಗಿದೆ)