Don't Miss!
- News Lok Sabha Election 2024: ಮತದಾರರನ್ನು ಆಕರ್ಷಿಸಲು ಚುನಾವಣಾ ಆಯೋಗದ ವಿಭಿನ್ನ ಪ್ರಯತ್ನ
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಜ್ ಕುಟುಂಬಕ್ಕೆ ಅಲ್ಲು ಅರ್ಜುನ್ ತೋರಿದ ಗೌರವ ಇದು
ಡಾ.ರಾಜ್ ಕುಮಾರ್ ಅವರ ಕುಟುಂಬ ಅಂದರೆ ಕನ್ನಡಿಗರಿಗೆ ಅದೇನೋ ಪ್ರೀತಿ. ಅಂತಹ ಮಹಾನ್ ವ್ಯಕ್ತಿ ಮತ್ತು ಅವರ ಇಡೀ ಕುಟುಂಬ ಕಂಡರೆ ಇತರೆ ಚಿತ್ರರಂಗದ ಗಣ್ಯರಿಗೂ ಅಪಾರ ಗೌರವ. ಅಂತವರ ಪೈಕಿ ಟಾಲಿವುಡ್ ನಟ ಅಲ್ಲು ಅರ್ಜುನ್ ಕೂಡ ಒಬ್ಬರು.
'ರಾಜಕುಮಾರ'ನ 100ನೇ ದಿನದ ಸಂಭ್ರಮಕ್ಕೆ ಭರ್ಜರಿ ತಯಾರಿ
ಅಲ್ಲು ಅರ್ಜುನ್ ನಿನ್ನೆ (ಜೂನ್ 22) ಬೆಂಗಳೂರಿಗೆ ಬಂದಿದ್ದರು. ತಮ್ಮ 'ಡಿಜೆ' ಸಿನಿಮಾದ ಪ್ರಮೋಷನ್ ಗಾಗಿ ಬಂದಿದ್ದ ಅಲ್ಲು ಅರ್ಜುನ್ ರಾಜ್ ಕುಟುಂಬಕ್ಕೆ ತೊರಿಸಿದ ಗೌರವ ಎಲ್ಲರೂ ಮೆಚ್ಚಿಕೊಳ್ಳುವಂಥದ್ದು. 'ಡಿಜೆ' ಸಿನಿಮಾದ ಸುದ್ದಿಗೋಷ್ಠಿಯಲ್ಲಿ ನಡೆದ ಈ ಘಟನೆ ಅಲ್ಲು ಅರ್ಜುನ್, ರಾಜ್ ಕುಟುಂಬದ ಮೇಲೆ ಇಟ್ಟಿದ್ದ ಗೌರವವನ್ನು ಸಾರಿ ಸಾರಿ ಹೇಳಿತು. ಮುಂದೆ ಓದಿ...
ಅಲ್ಲು ಅರ್ಜುನ್ ಗುಣಗಾನ
ಬೆಂಗಳೂರಿನಲ್ಲಿ ನಡೆದ 'ಡಿಜೆ' ಚಿತ್ರದ ಸುದ್ದಿಗೋಷ್ಠಿಯಲ್ಲಿ ಅಲ್ಲು ಅರ್ಜುನ್ ರಾಜ್ ಕುಮಾರ್ ಕುಟುಂಬದ ಬಗ್ಗೆ ಮಾತನಾಡಿದರು. ಜೊತೆಗೆ ಪಾರ್ವತಮ್ಮ ಅವರ ನಿಧನ ಹಿನ್ನಲೆ ಮೌನಾಚರಣೆ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ನಡೆದಿದ್ದೇನು.?
ಸುದ್ದಿಗೋಷ್ಠಿ ಶುರುವಿನಲ್ಲಿ ನಿರೂಪಕಿ 'ಡಿಜೆ' ಚಿತ್ರದ ಬಗ್ಗೆ ಪ್ರಶ್ನೆ ಹೇಳಿದರು. ಆಗ ಅಲ್ಲು ಅರ್ಜುನ್ ಮೊದಲು ರಾಜ್ ಕುಮಾರ್ ಕುಟುಂಬವನ್ನು ನೆನಪು ಮಾಡಿಕೊಂಡರು. ವಿಶೇಷ ಅಂದ್ರೆ ಸಹ ಸ್ವತಃ ಅವರೇ ಕಾರ್ಯಕ್ರಮದಲ್ಲಿದ್ದ ಎಲ್ಲರಿಗೂ ಮೌನಾಚರಣೆ ಮಾಡಿ ಅಂತ ಹೇಳಿದರು.
ಎಲ್ಲರೂ ಬೆರಗಾದರು
'ಡಿ.ಜೆ' ಚಿತ್ರದ ಕಾರ್ಯಕ್ರಮ ಶುರುವಾದಾಗ ಆಯೋಜಕರಾಗಲಿ ಅಥವಾ ಬೇರೆ ಯಾರೂ ಸಹ ಅಲ್ಲು ಅರ್ಜುನ್ ಗೆ ಹೇಳಿ ಮಾಡಿಸಲಿಲ್ಲ. ಚಿತ್ರದ ಬಗ್ಗೆ ಮಾತನಾಡುವುದಕ್ಕೆ ತಮ್ಮ ಬಳಿ ಮೈಕ್ ಬಂದ ತಕ್ಷಣ ಅಲ್ಲು ಅರ್ಜುನ್ ಎಲ್ಲರಿಗೂ ತಾವೇ ಹೇಳಿ ಮೌನಾಚರಣೆ ಮಾಡಿಸಿದರು.
ಒಳ್ಳೆಯ ನಂಟು
ರಾಜ್ ಕುಮಾರ್ ಕುಟುಂಬಕ್ಕೆ ಮತ್ತು ಅಲ್ಲು ಅರ್ಜುನ್ ಅವರ ಕುಟುಂಬಕ್ಕೆ ಒಳ್ಳೆಯ ನಂಟು ಇದೆ. ಅಲ್ಲದೆ ಅಲ್ಲು ಅರ್ಜುನ್ ತಮ್ಮ ವಿವಾಹದ ಸಂದರ್ಭದಲ್ಲಿ ತಾವೇ ರಾಜ್ ನಿವಾಸಕ್ಕೆ ತೆರಳಿ ಇಡೀ ಕುಟುಂಬವನ್ನು ಮದುವೆಗೆ ಆಹ್ವಾನಿಸಿದ್ದರು.
ಅಪ್ಪು ಅಂದ್ರೆ ಇಷ್ಟ
ಪುನೀತ್ ರಾಜ್ ಕುಮಾರ್ ಅವರ ಡ್ಯಾನ್ಸ್, ಫೈಟ್ ಅಂದರೆ ಅಲ್ಲು ಅರ್ಜುನ್ ಗೆ ಬಹಳ ಇಷ್ಟ. ಇದನ್ನು ಅವರೇ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಜೊತೆಗೆ 'ಜಾಕಿ' ಸಿನಿಮಾದ ತೆಲುಗು ಆಡಿಯೋ ಬಿಡುಗಡೆ ಮಾಡಿದ್ದು ಸಹ ಅಲ್ಲು ಅರ್ಜುನ್.
ಸರಳತೆ ಬಗ್ಗೆ ಮೆಚ್ಚುಗೆ
ಡಾ.ರಾಜ್ ಕುಮಾರ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಇಡೀ ಕುಟುಂಬದ ಸರಳತೆಯನ್ನು ಅಲ್ಲು ಅರ್ಜುನ್ ಬಹಳ ಮೆಚ್ಚಿಕೊಳ್ಳುತ್ತಾರೆ. ಒಂದು ಸೂಪರ್ ಸ್ಟಾರ್ ಕುಟುಂಬವಾಗಿದ್ದರೂ ಇಷ್ಟು ಸರಳವಾಗಿ ಇರುತ್ತಾರೆ ಅದಕ್ಕೆ ನಾನು ಆ ಕುಟುಂಬಕ್ಕೆ ಅಪಾರ ಗೌರವ ಕೊಡುತ್ತೇನೆ ಎನ್ನುತ್ತಾರೆ.