twitter
    For Quick Alerts
    ALLOW NOTIFICATIONS  
    For Daily Alerts

    ನಿಖಿಲ್ ಕುಮಾರ್ ಸಿನಿಮಾದ ಬಗ್ಗೆ ಟಾಲಿವುಡ್ ವಿಲನ್ ಮಾತು

    By Naveen
    |

    ನಟ ನಿಖಿಲ್ ಕುಮಾರ್ ಅವರ 'ಸೀತಾರಾಮ ಕಲ್ಯಾಣ' ಸಿನಿಮಾ ದಿನೇ ದಿನೇ ಹೈಪ್ ಹೆಚ್ಚಿಸಿಕೊಳ್ಳುತ್ತಿದೆ. ಸಿನಿಮಾದ ಟೀಸರ್ ಯೂ ಟ್ಯೂಬ್ ನಲ್ಲಿ ದಾಖಲೆ ಮಾಡಿದ್ದು, ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಅಂದಹಾಗೆ, ಈ ಸಿನಿಮಾದ ಬಗ್ಗೆ ಇದೀಗ ಟಾಲಿವುಡ್ ವಿಲನ್ ಆದಿತ್ಯ ಮೆನನ್ ಮಾತನಾಡಿದ್ದಾರೆ.

    ಈ ಸಿನಿಮಾದ ಚಿತ್ರೀಕರಣ ಇತ್ತೀಚಿಗಷ್ಟೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿತ್ತು. ಈ ಸಿನಿಮಾದಲ್ಲಿ ತೆಲುಗಿನ ಖಳನಟ ಆದಿತ್ಯ ಮೆನನ್ ಸಹ ನಟಿಸಿದ್ದು, ಚಿತ್ರದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು.

    'ಸೀತಾರಾಮ' ಕೃಪೆಯಿಂದ ನಂಬರ್ 1 ಸ್ಥಾನಕ್ಕೇರಿದ ನಿಖಿಲ್ 'ಸೀತಾರಾಮ' ಕೃಪೆಯಿಂದ ನಂಬರ್ 1 ಸ್ಥಾನಕ್ಕೇರಿದ ನಿಖಿಲ್

    ''ಜಾಗ್ವರ್' ಸಿನಿಮಾದ ನಂತರ ಮತ್ತೆ 'ಸೀತಾರಾಮ ಕಲ್ಯಾಣ' ಚಿತ್ರದಲ್ಲಿ ನಾನು ನಟಿಸುತ್ತಿದ್ದೇನೆ. ಈ ಸಿನಿಮಾದ ಕಥೆ ತುಂಬ ಇಷ್ಟ ಆಯ್ತು. ನಮ್ಮ ಮನೆಯಲ್ಲಿ ನಡೆಯುವಂತಹ ಕಥೆ ಇದು. ಈ ಸಿನಿಮಾ ನಿಮಗೆ ಒಳ್ಳೆಯ ಫೀಲ್ ನೀಡುತ್ತದೆ. ದೊಡ್ಡ ಹಿಟ್ ಆಗುವ ಕಥೆ ಇದು. ಈ ಸಿನಿಮಾದಲ್ಲಿ ಮುಖ್ಯವಾದ ಕಥಾ ಪಾತ್ರ ಮಾಡುತ್ತಿದ್ದೇನೆ. ಕನ್ನಡದಲ್ಲಿ ನನಗೆ ಈ ರೀತಿಯ ಪಾತ್ರ ಹಿಂದೆ ಸಿಕ್ಕಿರಲಿಲ್ಲ.'' ಎಂದ ಅವರು ನಟ ನಿಖಿಲ್ ಬಗ್ಗೆ ಸಹ ಮಾತನಾಡಿದರು.

     tollywood villain adithya menon spoke about Seetharam Kalyana movie

    ''ನಿಖಿಲ್ ಅವರ ಜೊತೆಗೆ 'ಜಾಗ್ವರ್' ಸಿನಿಮಾ ಮಾಡಿದ್ದೆ. ಆದರೆ, ಆ ಸಿನಿಮಾಗೆ ಹೋಲಿಸಿದರೆ ಈ ಸಿನಿಮಾಗೆ ಬಹಳಷ್ಟು ಚೆನ್ನಾಗಿ ನಟಿಸಿದ್ದಾರೆ. ಅವರು ಕನ್ನಡದಲ್ಲಿ ದೊಡ್ಡ ನಟ ಆಗುತ್ತಾರೆ ಎಂಬ ನಂಬಿಕೆ ನನಗೆ ಇದೆ.'' ಎಂದು ನಿಖಿಲ್ ಕುಮಾರ್ ಗೆ ಆದಿತ್ಯ ಮೆನನ್ ಶುಭ ಹಾರೈಸಿದರು.

    ಅಂದಹಾಗೆ, 'ಸೀತಾರಾಮ ಕಲ್ಯಾಣ' ಸಿನಿಮಾವನ್ನು ಎ ಹರ್ಷ ನಿರ್ದೇಶನ ಮಾಡಿದ್ದಾರೆ. ನಿಖಿಲ್ ಜೋಡಿಯಾಗಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ.

    English summary
    Tollywood villain Adithya Menon spoke about Nikhil Kumaraswamy Starrer 'Seetharam Kalyana' movie.
    Sunday, August 12, 2018, 16:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X