Don't Miss!
- News ಲೋಕಸಭಾ ಚುನಾವಣೆ: ಮತದಾನದ ದಿನ Rapidoದಿಂದ ಉಚಿತ ಸೇವೆ, ಯಾರಿಗೆ ಲಭ್ಯ..?
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Sports 2024ರ ಟಿ20 ವಿಶ್ವಕಪ್ ರಾಯಭಾರಿಯಾಗಿ ಒಲಿಂಪಿಕ್ ಐಕಾನ್ ಉಸೇನ್ ಬೋಲ್ಟ್ ನೇಮಕ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿಖಿಲ್ ಕುಮಾರ್ ಸಿನಿಮಾದ ಬಗ್ಗೆ ಟಾಲಿವುಡ್ ವಿಲನ್ ಮಾತು
ನಟ ನಿಖಿಲ್ ಕುಮಾರ್ ಅವರ 'ಸೀತಾರಾಮ ಕಲ್ಯಾಣ' ಸಿನಿಮಾ ದಿನೇ ದಿನೇ ಹೈಪ್ ಹೆಚ್ಚಿಸಿಕೊಳ್ಳುತ್ತಿದೆ. ಸಿನಿಮಾದ ಟೀಸರ್ ಯೂ ಟ್ಯೂಬ್ ನಲ್ಲಿ ದಾಖಲೆ ಮಾಡಿದ್ದು, ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಅಂದಹಾಗೆ, ಈ ಸಿನಿಮಾದ ಬಗ್ಗೆ ಇದೀಗ ಟಾಲಿವುಡ್ ವಿಲನ್ ಆದಿತ್ಯ ಮೆನನ್ ಮಾತನಾಡಿದ್ದಾರೆ.
ಈ ಸಿನಿಮಾದ ಚಿತ್ರೀಕರಣ ಇತ್ತೀಚಿಗಷ್ಟೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿತ್ತು. ಈ ಸಿನಿಮಾದಲ್ಲಿ ತೆಲುಗಿನ ಖಳನಟ ಆದಿತ್ಯ ಮೆನನ್ ಸಹ ನಟಿಸಿದ್ದು, ಚಿತ್ರದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು.
'ಸೀತಾರಾಮ' ಕೃಪೆಯಿಂದ ನಂಬರ್ 1 ಸ್ಥಾನಕ್ಕೇರಿದ ನಿಖಿಲ್
''ಜಾಗ್ವರ್' ಸಿನಿಮಾದ ನಂತರ ಮತ್ತೆ 'ಸೀತಾರಾಮ ಕಲ್ಯಾಣ' ಚಿತ್ರದಲ್ಲಿ ನಾನು ನಟಿಸುತ್ತಿದ್ದೇನೆ. ಈ ಸಿನಿಮಾದ ಕಥೆ ತುಂಬ ಇಷ್ಟ ಆಯ್ತು. ನಮ್ಮ ಮನೆಯಲ್ಲಿ ನಡೆಯುವಂತಹ ಕಥೆ ಇದು. ಈ ಸಿನಿಮಾ ನಿಮಗೆ ಒಳ್ಳೆಯ ಫೀಲ್ ನೀಡುತ್ತದೆ. ದೊಡ್ಡ ಹಿಟ್ ಆಗುವ ಕಥೆ ಇದು. ಈ ಸಿನಿಮಾದಲ್ಲಿ ಮುಖ್ಯವಾದ ಕಥಾ ಪಾತ್ರ ಮಾಡುತ್ತಿದ್ದೇನೆ. ಕನ್ನಡದಲ್ಲಿ ನನಗೆ ಈ ರೀತಿಯ ಪಾತ್ರ ಹಿಂದೆ ಸಿಕ್ಕಿರಲಿಲ್ಲ.'' ಎಂದ ಅವರು ನಟ ನಿಖಿಲ್ ಬಗ್ಗೆ ಸಹ ಮಾತನಾಡಿದರು.
''ನಿಖಿಲ್ ಅವರ ಜೊತೆಗೆ 'ಜಾಗ್ವರ್' ಸಿನಿಮಾ ಮಾಡಿದ್ದೆ. ಆದರೆ, ಆ ಸಿನಿಮಾಗೆ ಹೋಲಿಸಿದರೆ ಈ ಸಿನಿಮಾಗೆ ಬಹಳಷ್ಟು ಚೆನ್ನಾಗಿ ನಟಿಸಿದ್ದಾರೆ. ಅವರು ಕನ್ನಡದಲ್ಲಿ ದೊಡ್ಡ ನಟ ಆಗುತ್ತಾರೆ ಎಂಬ ನಂಬಿಕೆ ನನಗೆ ಇದೆ.'' ಎಂದು ನಿಖಿಲ್ ಕುಮಾರ್ ಗೆ ಆದಿತ್ಯ ಮೆನನ್ ಶುಭ ಹಾರೈಸಿದರು.
ಅಂದಹಾಗೆ, 'ಸೀತಾರಾಮ ಕಲ್ಯಾಣ' ಸಿನಿಮಾವನ್ನು ಎ ಹರ್ಷ ನಿರ್ದೇಶನ ಮಾಡಿದ್ದಾರೆ. ನಿಖಿಲ್ ಜೋಡಿಯಾಗಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ.