Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಿ. ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ವಿವಾದದ ಸರಮಾಲೆಗೆ ಮತ್ತೊಂದು ಸೇರ್ಪಡೆ
ಬಾಲಿವುಡ್ ಚಿತ್ರೋದ್ಯಮದಲ್ಲಿ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಹೆಸರಾಗಿರುವ ಆಮೀರ್ ಖಾನ್, ತುಂಬಾ ಚ್ಯೂಸಿಯಾಗಿ ಸಿನಿಮಾ ಮಾಡುವವರು.
ವರ್ಷಕ್ಕೆ ಒಂದೋ, ಎರಡೋ ಸಿನಿಮಾ ಮಾಡುವ ಆಮೀರ್ ಖಾನ್, ತಮ್ಮ ಸಿನಿಮಾದಲ್ಲಿ ಸಮಾಜಕ್ಕೆ ಏನಾದರೂ ಸಂದೇಶ ಇರಬೇಕೆಂದು ಬಯಸುವವರು.
ಶ್ರೀರಾಮ, ಸೀತೆ, ಪೋರ್ನ್: ಸುಖಾಸುಮ್ಮನೆ ಹೊಸ ವಿವಾದ ಮೈಗೆಳೆದುಕೊಂಡ ಪ್ರಕಾಶ್ ರೈ
ಅವರ ಕೆಲವೊಂದು ಸಿನಿಮಾಗಳು ಅನಾವಶ್ಯಕವಾಗಿ ದೊಡ್ದ ವಿವಾದವನ್ನು ಹುಟ್ಟುಹಾಕಿದ್ದುಂಟು. 2010ರಿಂದ ಈಚೆಗೆ, ಆಮೀರ್ ಮಾಡಿರುವ ಸಿನಿಮಾ ಕೇವಲ ಹನ್ನೊಂದು.
Flashback, 'ಕಸ್ತೂರಿ ನಿವಾಸ' ಕ್ಲೈಮ್ಯಾಕ್ಸ್: ಇಕ್ಕಟ್ಟಿನಲ್ಲಿ ಸಿಲುಕಿದ್ದ ರಾಜಕುಮಾರ್
ಆಮೀರ್ ಖಾನ್ ಅವರ ಇದುವರೆಗಿನ ವೃತ್ತಿ ಬದುಕಿನಲ್ಲಿನ ಕೆಲವೊಂದು ನಿರ್ಧಾರಗಳು, ಸಿನಿಮಾಗಳು ದೊಡ್ದ ವಿವಾದಕ್ಕೆ ಕಾರಣವಾಗಿದ್ದವು. ಅಂತಹ ವಿವಾದದ ಸಾಲಿಗೆ, ಅವರ ಇನ್ನೊಂದು ಸಿನಿಮಾ ಸೇರ್ಪಡೆಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ:
ಯಾವುದೇ ಪ್ರಶಸ್ತಿ ಸಮಾರಂಭದಲ್ಲಿ ಆಮೀರ್ ಖಾನ್ ಭಾಗವಹಿಸುವುದು ಕಮ್ಮಿ
ಯಾವುದೇ ಪ್ರಶಸ್ತಿ ಸಮಾರಂಭದಲ್ಲಿ ಆಮೀರ್ ಖಾನ್ ಭಾಗವಹಿಸುವುದು ಕಮ್ಮಿ. ಪ್ರತೀ ಬಾರಿಯೂ, ಯಾಕೆ ಸಮಾರಂಭದಲ್ಲಿ ಭಾಗವಹಿಸಿಲ್ಲ ಎನ್ನುವ ಪ್ರಶ್ನೆಗೆ, "ಬಾಲಿವುಡ್ ಪ್ರಶಸ್ತಿಗಳನ್ನು ನಾನು ಗೌರವಿಸುವುದಿಲ್ಲ. ಹಾಗಾಗಿ, ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಲು ನಾನು ಅರ್ಹನಲ್ಲ" ಎನ್ನುವ ಉತ್ತರ ಆಮೀರ್ ಖಾನ್ ಅವರಿಂದ ಬರುತ್ತಿತ್ತು. ಇದು, ಬಾಲಿವುಡ್ ಚಿತ್ರೋದ್ಯಮದಲ್ಲಿ ವಿವಾದಕ್ಕೆ ಕಾರಣವಾಗಿತ್ತು,
ಪ್ರತಿಷ್ಠಿತ Madame Tussauds
ಪ್ರತಿಷ್ಠಿತ Madame Tussaudsನಲ್ಲಿ ಮೇಣದ ಪ್ರತಿಮೆಯ ಅವಕಾಶವನ್ನೂ ಆಮೀರ್ ಖಾನ್ ನಿರಾಕರಿಸಿದ್ದರು. ಅದಕ್ಕೆ ಅವರು ಕೊಟ್ಟ ಸಮರ್ಥನೆ ಹೀಗಿತ್ತು, " ಇದು ನನಗೆ ಮುಖ್ಯ ಎಂದು ಅನಿಸುವುದಿಲ್ಲ. ಜನರು ಬಯಸಿದರೆ ನನ್ನ ಸಿನಿಮಾಗಳನ್ನು ನೋಡುತ್ತಾರೆ. ಎಷ್ಟೊಂದು ವಿಚಾರಗಳನ್ನು ನನ್ನಿಂದ ನಿಭಾಯಿಸಲೂ ಸಾಧ್ಯವಿಲ್ಲ".
ನರ್ಮದಾ ಬಚಾವ್ ಆಂದೋಲನ್
ಏಪ್ರಿಲ್ 2006ರಲ್ಲಿ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ನರ್ಮದಾ ಬಚಾವ್ ಆಂದೋಲನ್ ನಲ್ಲಿ ಆಮೀರ್ ಖಾನ್ ಭಾಗವಹಿಸಿದ್ದರು. ಈ ವೇಳೆ ಆಮೀರ್ ಖಾನ್ ಆಡಿದ ಹೇಳಿಕೆ, ತೀವ್ರ ಚರ್ಚೆಗೆ ಗುರಿಯಾಗಿತ್ತು. ಆ ವೇಳೆ ಬಿಡುಗಡೆಯಾದ ಅವರ ಸಿನಿಮಾ 'ಫನಾ' ಪ್ರತಿಭಟನೆಯ ಬಿಸಿಯನ್ನು ಎದುರಿಸಬೇಕಾಯಿತು.
ವೃತ್ತಿ ಬದುಕಿನಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದ್ದದ್ದು ಅವರ ಸಿನಿಮಾ 'ಪಿಕೆ'
ಅವರ ವೃತ್ತಿ ಬದುಕಿನಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದ್ದದ್ದು ಅವರ ಸಿನಿಮಾ 'ಪಿಕೆ'. ಬೆತ್ತಲೆಯಾಗಿ, ರೈಲ್ವೇ ಟ್ರ್ಯಾಕ್ ನಲ್ಲಿ, ಟ್ರಾನ್ಸಿಸ್ಟರ್ ಹಿಡಿದು ನಿಂತ ಅವರ ಸಿನಿಮಾ ಪೋಸ್ಟರ್ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇನ್ನು, ಈ ಚಿತ್ರ ಬಿಡುಗಡೆಯಾದ ನಂತರ, ಚಿತ್ರದಲ್ಲಿ ಹಿಂದೂ ದೇವತೆಗಳನ್ನು ಮತ್ತು ಆಚರಣೆಗಳನ್ನು 'ಗೇಲಿ' ಮಾಡುವ ಮೂಲಕ ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸಲಾಗಿದೆ ಎಂದು ಪ್ರತಿಭಟನೆ ವ್ಯಕ್ತವಾದವು.
ಫೆಬ್ರವರಿ 2015 ರಲ್ಲಿ ನಡೆದ ಕಾರ್ಯಕ್ರಮ
ಫೆಬ್ರವರಿ 2015 ರಲ್ಲಿ ನಡೆದ ಕಾರ್ಯಕ್ರಮವೊಂದನ್ನು (ಎಐಬಿ ನಾಕೌಟ್) 'ಮೌಕಿಕ ಹಿಂಸಾಚಾರ' ಎಂದು ಆಮೀರ್ ಖಾನ್ ಕರೆದಿದ್ದರು. "ವಾಕ್ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ನಂಬುವವನು ನಾನು. ಆದರೆ, ನಾವೆಲ್ಲಾ ಸಾಮಾಜಿಕ ಬದುಕಿನಲ್ಲಿ ಇರುವವರು, ನಮಗೆ ನಿರ್ದಿಷ್ಟ ಜವಾಬ್ದಾರಿ ಇರುತ್ತದೆ". ಈ ಕಾರ್ಯಕ್ರಮದಲ್ಲಿ ಕರಣ್ ಜೋಹರ್, ಅರ್ಜುನ್ ಕಪೂರ್, ಸಮ್ಮುಖದಲ್ಲೇ ಆಮೀರ್ ಕಿಡಿಕಾರಿದ್ದರು.
‘ಫಾರೆಸ್ಟ್ ಗಂಪ್’ ಸಿನಿಮಾದ ರಿಮೇಕ್ ‘ಲಾಲ್ ಸಿಂಗ್ ಛಡ್ಡಾ
ಈ ವಿವಾದದ ಗೊಂಚಲಿಗೆ ಇನ್ನೊಂದು ಸೇರ್ಪಡೆಯಾಗಿದೆ. ಹಾಲಿವುಡ್ನ ‘ಫಾರೆಸ್ಟ್ ಗಂಪ್' ಸಿನಿಮಾದ ರಿಮೇಕ್ ‘ಲಾಲ್ ಸಿಂಗ್ ಛಡ್ಡಾ' , ಆಮೀರ್ ಖಾನ್ ಅವರ ಮುಂಬರುವ ಸಿನಿಮಾ. ಈ ಚಿತ್ರದಲ್ಲಿ ಅಯೋಧ್ಯೆ, ಬಾಬ್ರಿ ಮಸೀದಿ, ಆಪರೇಷನ್ ಬ್ಲೂಸ್ಟಾರ್ ಮುಂತಾದ ವಿಚಾರಗಳಿಗೆ ಸಂಬಂಧಿಸಿದಂತೆ ದೃಶ್ಯಗಳಿವೆ ಎನ್ನುವ ವಿಷಯ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.