ದರ್ಶನ್ ಮನೆ ಮುಂದೆ ಬಿದ್ದ ಮರ : ಮೂರು ದಿನವಾದ್ರು ತೆರವುಗೊಳಿಸದ ಬಿಬಿಎಂಪಿ
Recommended Video
ಮೂರು ದಿನಗಳ ಹಿಂದೆ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ಸಾಕಷ್ಟು ಮರಗಳು ಧರೆಗುರುಳಿವೆ. ಭಾರಿ ಗಾಳಿ ಮಳೆಯಿಂದ ಅವಾಂತರ ಹೆಚ್ಚಾಗಿದ್ದು, ರಾಜರಾಜೇಶ್ವರಿ ನಗರದಲ್ಲಿರುವ ಲೆಂಜಿಂಗ್ ಸ್ಟಾರ್ ದರ್ಶನ್ ಮನೆಯ ಮುಂದೆ ಭೃಹತ್ ಮರವೊಂದು ಬಿದ್ದಿದೆ.
ಅದೃಷ್ಟವಶಾತ್ ಮನೆಯಿಂದ ಕೊಂಚ ದೂರ ಕಾಂಪೌಂಡ್ ಮೇಲೆ ಬಿದ್ದಿರುವುದರಿಂದ ಮನೆಗೆ ಯಾವುದೆ ರೀತಿಯ ಹಾನಿಯಾಗಿಲ್ಲ. ಆದ್ರೆ ಮರ ಬಿದ್ದು ಮೂರು ದಿನವಾದ್ರು ಇನ್ನು ಕೂಡ ಮರವನ್ನು ತೆರವುಗೊಳಿಸಿಲ್ಲ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ದಿವ್ಯಾ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಸಾಕಷ್ಟು ಕಡೆ ಬಿದ್ದ ಮರವನ್ನು ಕೆಲವೇ ಕ್ಷಣಗಳಲ್ಲಿ ತೆರವು ಗೊಳಿಸಲಾಗಿದೆ. ಆದ್ರೆ ದರ್ಶನ್ ಮನೆ ಮುಂದೆ ಬಿದ್ದ ಮರವನ್ನು ಇನ್ನು ತೆರವುಗೊಳಿದೆ ಹಾಗೆ ಬಿಟ್ಟಿರುವುದನ್ನ ನೋಡಿದ್ರೆ ಇದು ರಾಜಕೀಯ ಉದ್ದೇಶ ಏನಾದ್ರು ಇದಿಯಾ ಎನ್ನುವ ಅನುಮಾನ ಅನೇಕರನ್ನು ಕಾಡುತ್ತಿದೆ.
ಆದ್ರೆ ಮರ ತೆರವುಗೊಳಿಸದೆ ಇದ್ದಿದ್ದರಿಂದ ದರ್ಶನ್ ದಿನ ಮನೆಯಿಂದ ಓಡಾಡಲು, ಕಾರನ್ನು ಹೊರತೆಗೆಯಲು ಸಾಧ್ಯವಾಗುತ್ತಿಲ್ಲವಂತೆ. ಈ ಮರವನ್ನು ತೆಗೆಲು ಇನ್ನಷ್ಟು ದಿನಗಳು ಬೇಕಾಗುತ್ತಪ್ಪ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ.


Click it and Unblock the Notifications











