Don't Miss!
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಪ್ರತಿಮ ನಟ ಕಮಲ್ ಹಾಸನ್ ನೋವು ಸಿಟ್ಟು ಯಾರ ಮೇಲೆ?
ಬಹುಭಾಷಾ ನಟ, ಸಕಲ ಕಲಾವಲ್ಲಭನ್ ಕಮಲ್ ಹಾಸನ್ ತನ್ನ ಮಹತ್ವಾಕಾಂಕ್ಷೆಯ 'ಉತ್ತಮ ವಿಲನ್' ಚಿತ್ರ ಬಿಡುಗಡೆಗೆ ಮುನ್ನ ಅದ್ಯಾಕೋ ತಮಿಳು ಚಿತ್ರೋದ್ಯಮದ ಬಗ್ಗೆ ನೋವಿನ ಮಾತನ್ನಾಡಿದ್ದಾರೆ.
ಕಮಲ್ ಈ ನೋವಿನ ಹಿಂದೆ ಇರುವ ಕಾರಣ ಹಲವಾರು. ಕಮಲ್ ಹಾಸನ್ ಚಿತ್ರಗಳಿಗೂ ವಿವಾದಕ್ಕೆ ಬಿಡಿಸಲಾರದ ನಂಟು. ಚಿತ್ರದ ಶೀರ್ಷಿಕೆಯಿಂದ ಹಿಡಿದು ಚಿತ್ರಕಥೆಗಳವರೆಗೆ ಕಮಲ್ ಚಿತ್ರಗಳು ಏನಾದರೂ ಕಾಂಟ್ರೋವರ್ಸಿಯಲ್ಲಿ ಸಿಲುಕುತ್ತಿರುವುದು ಕಮಲ್ ನೋವಿಗೆ ಕಾರಣ.
ಉತ್ತಮ ವಿಲನ್ ಚಿತ್ರ ಬಿಡುಗಡೆಗೆ ಮುನ್ನ ಕಮಲ್ ಹಾಸನ್, ನನ್ನನ್ನು ಚಿತ್ರೋದ್ಯಮದಲ್ಲಿ ಸುಖಾಸುಮ್ಮನೆ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆಂಗ್ಲ ದೈನಿಕಗೆ ನೀಡಿದ ಸಂದರ್ಶನದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. (ಉತ್ತಮ ವಿಲನ್ ಕನ್ನಡಕ್ಕೆ ರೀಮೇಕ್ ಆಗುತ್ತಾ)
ಭಾರತೀಯ ಚಿತ್ರರಂಗದ ಕೆಲವೇ ಕೆಲವು ಬಹುಭಾಷಾ ನಟರಲ್ಲಿ ಪ್ರಮುಖರಾದ, ಅಪ್ರತಿಮ ಕಲಾವಿದ ಕಮಲ್ ಹಾಸನ್ ಪ್ರಮುಖ ಭೂಮಿಕೆಯಲ್ಲಿರುವ, ರಮೇಶ್ ಅರವಿಂದ್ ನಿರ್ದೇಶನದ ಉತ್ತಮ ವಿಲನ್ ಚಿತ್ರದ ತೆಲುಗು ಆವೃತ್ತಿ ಏಪ್ರಿಲ್ 10ರಂದು ಬಿಡುಗಡೆಯಾಗಲಿದೆ.
ಕಮಲ್ ಲೇಟೆಸ್ಟ್ ವಿವಾದ
ತಮಿಳು ಚಿತ್ರೋದ್ಯಮದಲ್ಲಿ ಏನಾದರೂ ಕಾರಣ ಹುಡುಕಿ ನನ್ನನ್ನು ಟಾರ್ಗೆಟ್ ಮಾಡುತ್ತಿರುವುದು ಇದೇ ಮೊದಲಲ್ಲ. ಇದು ನಡೆದುಕೊಂಡು ಬರುತ್ತಲೇ ಇದೆ. ಇದನ್ನೆಲ್ಲಾ ಎದುರಿಸಿ ನನ್ನ ಸಿನಿಮಾ ಬದುಕು ಮುಂದುವರಿಯುತ್ತಲೇ ಇದೆ - ಕಮಲ್ ಹಾಸನ್
ಪಾಪನಾಶನಂ
ನನ್ನ ಪಾಪನಾಶನಂ ಚಿತ್ರದ ವಿವಾದ ಕಳೆದ ವಾರದ ವರೆಗೂ ಕೋರ್ಟಿನಲ್ಲಿತ್ತು. ವಿವಾದದಿಂದ ಈಗ ಹೊರ ಬಂದಿದ್ದೇವೆ. ಈ ಚಿತ್ರದ ವಿರುದ್ದ ಕೇಸ್ ಹಾಕಿದವರು ಯಾರು ಎಂದು ನಮಗೆ ತಿಳಿದಿದೆ - ಕಮಲ್ ಹಾಸನ್.
ಮುಂಬೈ ಎಕ್ಸ್ ಪ್ರೆಸ್
ನನ್ನ ಚಿತ್ರವೊಂದಕ್ಕೆ ಮುಂಬೈ ಎಕ್ಸ್ ಪ್ರೆಸ್ ಎಂದು ಶೀರ್ಷಿಕೆ ಇಟ್ಟಿದ್ದಕ್ಕೂ ತಮಿಳುನಾಡಿನಲ್ಲಿ ಭಾರೀ ವಿರೋಧ ವ್ಯಕ್ತವಾಯಿತು. ತಮಿಳು ಹೆಸರು ಇಟ್ಟಿಲ್ಲಾ ಎಂದು ವಿವಾದ ಹುಟ್ಟುಹಾಕಿದರು, ಮುಂಬೈಗೆ ತಮಿಳಿನಲ್ಲಿ ಏನು ಹೆಸರು ಇಡಲು ಸಾಧ್ಯ?
ಸಾಂಡಿಯಾರ್
ಈ ಮೇಲಿನ ಚಿತ್ರದ ಶೀರ್ಷಿಕೆಗೂ ತಕರಾರು ಎತ್ತಿದರು. ಕೆಲವು ತಿಂಗಳ ಹಿಂದೆ, ಬೇರೆ ನಾಯಕನೊಬ್ಬ ಪ್ರಮುಖ ಭೂಮಿಕೆಯಲ್ಲಿ ಈ ಚಿತ್ರ ಇದೇ ಹೆಸರಿನಲ್ಲಿ ಬಿಡುಗಡೆಯಾಯಿತು. (ನಾಯಕಂ, ಪಾಂಡಿತುರೈ, ಕಾಯಲ್ ಪ್ರಮುಖ ಭೂಮಿಕೆಯಲ್ಲಿದ್ದಾರೆ)
ವಿಶ್ವರೂಪಂ
ದೇಶಾದ್ಯಂತ ಭಾರೀ ವಿವಾದ ಹುಟ್ಟುಹಾಕಿದ ಚಿತ್ರ. ಮುಸ್ಲಿಂ ಸಂಘಟನೆಗಳ ತೀವ್ರ ಟೀಕೆಗೆ ಗುರಿಯಾದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಸದ್ದು ಮಾಡಿತ್ತು. ಚಿತ್ರದ ವಿವಾದ ತಾರಕಕ್ಕೇರಿದ್ದಾಗ ಬಾಲಿವುಡ್ ಸಹಿತ ಚಿತ್ರೋದ್ಯಮದ ಹೆಚ್ಚಿನ ಎಲ್ಲಾ ಕಲಾವಿದರು ಕಮಲ್ ಹಾಸನ್ ಪರ ನಿಂತಿದ್ದು ವಿಶೇಷ.