Don't Miss!
- News ಬೆಂಗಳೂರು ನಮ್ಮ ಮೆಟ್ರೋ ಬೆಳಗ್ಗೆ 03:35ಕ್ಕೆ ಆರಂಭ: ಏಕೆ? ಕಾರಣ ಇಲ್ಲಿದೆ
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಡಿಯೋ ವೈರಲ್: ನಡುರಸ್ತೆಯಲ್ಲಿ ಕನ್ನಡ ನಟಿಯ ಹೊಡೆದಾಟ
Recommended Video
ತುಳು ಮತ್ತು ಕನ್ನಡ ಎರಡು ಭಾಷೆಯಲ್ಲಿ ಅಭಿನಯಿಸುತ್ತಿರುವ ನಟಿ ಶೋಭಿತಾ ನಡು ರಸ್ತೆಯಲ್ಲಿ ಹೊಡೆದಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರುವಾಯಿ ಬಳಿ ಈ ಘಟನೆ ನಡೆದಿದೆ. ಕಾರಿನಲ್ಲಿ ಸೈಡ್ ಕೊಡುವ ವಿಚಾರಕ್ಕೆ ಪ್ರಾರಂಭವಾದ ಜಗಳ ತಾರಕ್ಕೇರಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ.
ಶೋಭಿತಾ ಇದ್ದ ಕಾರು ಮತ್ತು ಎದುರಿನಿಂದ ಬಂದ ಕಾರಿನವರ ನಡುವೆ ಹೊಡೆದಾಟ ನಡೆದಿದೆ. ಕಾರು ಸೈಡ್ ಕೊಟ್ಟಿಲ್ಲ ಎಂದು ವಿಚಾರದಿಂದ ಪ್ರಾರಂಭವಾದ ವಾದವಿವಾದ ನಂತರ ಜೋರಾಗಿದೆ. ಇಬ್ಬರು ಕಾರಿನವರು ಕೆಳಗಿದು ಜೋರು ಜೋರಾಗಿ ಜಗಳವಾಡಲು ಪ್ರಾರಂಭಿಸಿದ್ದಾರೆ. ಜಗಳ ಮಿತಿ ಮೀರುತ್ತಿದ್ದಂತೆ ಹೊಡೆದಾಟಕ್ಕೆ ಇಳಿದ್ದಾರೆ.
ನಾಯಕ ನಟನ ಕಿರಿಕ್ : ನಟಿ ಮೇಲೆ ಹಲ್ಲೆ ನಡೆಸಿದ ನಟ
ನಂತರ ಶೋಭಿತಾ ಕಾರಿನ ಎದುರು ಕಾರಿನವರು ಶೋಭಿತಾ ಮಲೆ ಹಲ್ಲೆ ಮಾಡಿದ್ದಾರೆ. ಶೋಭಿತಾ ಜೋರಾಗಿ ಕಿರುಚಾಡುತ್ತಿದ್ದಂತೆ ಎದುರು ಕಾರಿನವರು ಶೋಭಿತಾರನ್ನು ಮಧ್ಯರಸ್ತೆಯಲ್ಲಿಯೆ ಎಳೆದು ಜೋರಾಗಿ ಕಾರಿನ ಬಳಿ ತಳ್ಳಿದ್ದಾರೆ. ನಂತರ ಇಬ್ಬರು ಯಾರಿಗೇನು ಕಮ್ಮಿ ಇಲ್ಲ ಎನ್ನುವ ಹಾಗೆ ಸರಿಯಾಗೆ ಹೊಡೆದಾಡಿಕೊಂಡಿದ್ದಾರೆ.
ಅಲ್ಲಿದ್ದ ಗ್ರಾಮಸ್ಥರು ಇಬ್ಬರ ಬೀದಿ ಜಗಳ ಬಿಡಿಸಲು ಪ್ರಯತ್ನ ಪಟ್ಟರು ಇಬ್ಬರ ನಡುವಿನ ಕಿತ್ತಾಟ ನಿಲ್ಲಿಸಲು ಸಾಧ್ಯವಾಗಿಲ್ಲ. ನಂತರ ಅವರೇ ತಣ್ಣಗಾಗಿ ಎಲ್ಲಿಂದ ಹೊರಟು ಹೋಗುತ್ತಾರೆ. ಎದುರು ಕಾರಿನವರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ನಡುರಸ್ತೆಯಲ್ಲಿ ಕನ್ನಡ ಮತ್ತು ತುಳು ಚಿತ್ರದ ನಟಿ ಶೋಭಿತಾ ಹೊಡೆದಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
— Kannada Filmibeat (@FilmibeatKa) February 12, 2020
#Tulu | #Shobitha | #Fighting pic.twitter.com/GI9EXpvjy2
ನಟಿ ಶೋಭಿತಾ ತುಳು ಚಿತ್ರರಂಗದಲ್ಲಿ ಅಭಿನಯಿಸುತ್ತಿದ್ದಾರೆ. ತುಳು ಸಿನಿಮಾಗಳ ಜೊತೆಗೆ ಕನ್ನಡ ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ. 'ಸಿಡಿದೆದ್ದಗಂಡು' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕು ಕಾಲಿಟ್ಟಿದ್ದಾರೆ. ಶ್ರೀ ವಿಷ್ಣು ಅಭಿನಯದ ಚಿತ್ರದಲ್ಲಿ ಶೋಭಿತಾ ನಾಯಕಿಯಾಗಿ ಮಿಂಚಿದ್ದಾರೆ. 'ಸಿಡಿದೆದ್ದಗಂಡು' ವಿಠಲ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾ.