Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತುಳು ಚಿತ್ರರಂಗಕ್ಕೂ ವಕ್ಕರಿಸಿದ ಆನ್ ಲೈನ್ ಲೀಕ್ ಪೆಡಂಭೂತ
ಕರಾವಳಿ ಜನತೆ ಕಾತರದಿಂದ ಕಾಯುತ್ತಿರುವ ಬಹುನಿರೀಕ್ಷಿತ ತುಳುಚಿತ್ರ "ದಬಕ್ ದಬಾ ಐಸಾ"ಗೂ ರಜನೀಕಾಂತ್ ಅವರ ಕಬಾಲಿ ಸಿನಿಮಾದ ಪರಿಸ್ಥಿತಿ ಬಂದೊದಗಿದೆ. ಯಾಕೆಂದರೆ ಚಿತ್ರ ಬಿಡುಗಡೆಗೆ ಇನ್ನೇನು ಎರಡೇ ವಾರ ಬಾಕಿ ಇದೆ ಅನ್ನುವಾಗಲೇ, ಚಿತ್ರ ಅನ್ ಲೈನ್ ನಲ್ಲಿ ಸೋರಿಕೆ ಆಗಿದೆ.
ಆನ್ ಲೈನ್ ನಲ್ಲಿ ಚಿತ್ರ ಸೋರಿಕೆ ಬಗ್ಗೆ ಈಗಾಗಲೇ ಬೆಂಗಳೂರು ಚಲನಚಿತ್ರ ಮಂಡಳಿ, ಉರ್ವ ಪೊಲೀಸ್ ಠಾಣೆ, ಕಾರ್ಕಳ ನಗರ ಠಾಣೆ ಹಾಗೂ ಮಂಗಳೂರಿನ ಸೈಬರ್ ಕ್ರೈಂ ಸೆಲ್ ಗಳಿಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.[ಕೋಸ್ಟಲ್ ವುಡ್ ಗೆ ಕೋಲ್ಮಿಂಚಾಗುತ್ತಾ 'ದಬಕ್ ದಬಾ ಐಸಾ']
ಪ್ರಕರಣದ ಗಂಭೀರತೆಯನ್ನು ಅರಿತ ಪೊಲೀಸ್ ನಗರ ಆಯುಕ್ತ ಚಂದ್ರಶೇಖರ್ ಅವರು ಆರೋಪಿಗಳ ಪತ್ತೆಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದು, ಪೊಲೀಸರು ಆರೋಪಿಗಳ ತಲಾಶೆಯಲ್ಲಿ ತೊಡಗಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಮೊಬೈಲ್ ಅಂಗಡಿ, ಸೈಬರ್ ಸೆಂಟರ್, ಕಾಲೇಜ್ ಇತ್ಯಾದಿಗಳಿಗೆ ದಾಳಿ ನಡೆಸುವ ಸಂಭವವಿದೆ.[ಬಾಕ್ಸಾಫೀಸಿನಲ್ಲೂ ಮುಗ್ಗರಿಸಿ, ತುಳು ಹಾಡನ್ನೂ ಕದ್ದ ಪ್ರಿನ್ಸ್ ತೆಲುಗು ಚಿತ್ರ]
8 ವರ್ಷ ಜೈಲು, ಲಕ್ಷಗಟ್ಟಲೆ ದಂಡ
ದಾಳಿಯ ವೇಳೆ ಚಿತ್ರದ ನಕಲಿ ಸಿ.ಡಿ, ಮೊಬೈಲ್, ಕಂಪ್ಯೂಟರ್ ಗಳಲ್ಲಿ ಈ ಚಿತ್ರ ಪತ್ತೆಯಾದರೆ ಅವರ ಮೊಬೈಲ್, ಕಂಪ್ಯೂಟರ್ ಗಳನ್ನು ವಶಪಡಿಸಿಕೊಂಡು ಆರೋಪಿ ಗಳಿಗೆ 8 ವರ್ಷ ಶಿಕ್ಷೆ ನೀಡಲು ಸಾಧ್ಯವಿದೆ. ಅಲ್ಲದೆ ಆರೋಪಿಗಳಿಗೆ ಜಾಮೀನಿಗೂ ಅವಕಾಶ ನೀಡದೆ ಆ ಚಿತ್ರ ಯಾರ ಬಳಿ ಇದೆಯೋ ಅವರೇ ಚಿತ್ರದ ಸಂಪೂರ್ಣ ಬಜೆಟನ್ನು ತುಂಬಿಸಬೇಕಾಗುತ್ತದೆ.[ದಾಂಪತ್ಯ ಜೀವನದ ಹೊಸ್ತಿಲಲ್ಲಿ ತುಳು ನಟ ಅರ್ಜುನ್ ಕಾಪಿಕಾಡ್]
ಇಂಥದ್ದೊಂದು ಅವಕಾಶ ಸೈಬರ್ ಕ್ರೈಂ ಅಡಿಯಲ್ಲಿ ಬರುತ್ತದೆ ಎಂದು ಸೈಬರ್ ಕ್ರೈಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರ ಹಿಂದೆ ಶಾಮೀಲಾದ ಯಾರೇ ಇದ್ದರೂ ಅವರೆಲ್ಲರನ್ನೂ ಸೈಬರ್ ಕ್ರೈಂನಡಿ ಕಠಿಣ ಶಿಕ್ಷೆಗೊಳಪಡಿಸುವುದು ಖಚಿತ ಎಂದು ಪೊಲೀಸರು ತಿಳಿಸಿದ್ದಾರೆ.
ನಟ ಕಮ್ ನಿರ್ದೇಶಕ ದೇವದಾಸ್ ಕಾಪಿಕಾಡ್ ಖಂಡನೆ
ಚಿತ್ರ ಸೋರಿಕೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ನಟ ಕಮ್ ನಿರ್ದೇಶಕ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಅವರು ಆರೋಪಿಗಳ ಕೃತ್ಯವನ್ನು ಖಂಡಿಸಿದ್ದಾರೆ.
"ಚಿತ್ರ ಸೋರಿಕೆ ಮಾಡಿರುವುದನ್ನು ತುಳುವರಾದ ನಾವೆಲ್ಲಾ ಒಟ್ಟಾಗಿ ಖಂಡಿಸಬೇಕಾಗಿದೆ. ಇದೆಲ್ಲಾ ತುಳು ಭಾಷೆಯನ್ನು ಕೊಲ್ಲುವ ಕೃತ್ಯವಾಗಿದ್ದು, ತುಳು ಸಿನಿಪ್ರಿಯರು ಇದಕ್ಕೆ ತಕ್ಕ ಪಾಠ ಕಲಿಸುತ್ತಾರೆ" ಎಂದು ಹೇಳಿಕೆ ನೀಡಿದ್ದಾರೆ.[ತುಳುನಾಡಿನಲ್ಲೇ ತುಳು ಸಿನೆಮಾ ಪ್ರದರ್ಶನಕ್ಕೆ ಕಂಟಕ]
"ತುಳುವರು ತಮ್ಮ ಮೆಚ್ಚಿನ ತುಳು ಚಿತ್ರವನ್ನು ಮೊಬೈಲ್ ನಲ್ಲಿ ವೀಕ್ಷಿಸುವ ಜಾಯಮಾನದವರಲ್ಲ. ಇಂತಹ ಕೃತ್ಯಗಳಿಗೆ ಈ ಹಿಂದೆಯೂ ಅವರು ಅವಕಾಶ ನೀಡದೆ ಥಿಯೇಟರ್ಗಳಲ್ಲೇ ಚಿತ್ರ ವೀಕ್ಷಿಸಿ ಉದಾರತೆಯನ್ನು ಮೆರೆದಿದ್ದಾರೆ". ಎಂದು ದೇವದಾಸ್ ಕಾಪಿಕಾಡ್ ತಿಳಿಸಿದ್ದಾರೆ.
ಜಯಕಿರಣ ಫಿಲಂಸ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಪ್ರಕಾಶ್ ಪಾಂಡೇಶ್ವರ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದಿದ್ದು, ಆಗಸ್ಟ್ 5 ರಂದು ಇಡೀ ಕರಾವಳಿಯಾದ್ಯಂತ ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ.