Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಎಕ್ಕಸಕ' ಏಕಕಾಲಕ್ಕೆ 11 ಚಿತ್ರಮಂದಿರಗಳಲ್ಲಿ ರಿಲೀಸ್
ರಂಗಭೂಮಿಯ ಹೆಸರಾಂತ ತಂಡವಾಗಿರುವ ಮಂಗಳೂರಿನ ಲಕುಮಿ ಕಲಾವಿದರು ಮತ್ತು ಶ್ರೀ ಲಲಿತೆ ಕಲಾವಿದರು ಇದರ ಸಂಸ್ಥಾಪಕ ಹಾಗೂ ಲೀಡ್ಸ್ ಗ್ರೂಪ್ ಆಫ್ ಕಂಪನೀಸ್ನ ಲಯನ್ ಕಿಶೋರ್ ಡಿ. ಶೆಟ್ಟಿ ನಿರ್ಮಾಣದಲ್ಲಿ, ಕೆ. ಸೂರಜ್ ಶೆಟ್ಟಿ ರಚಿಸಿ ನಿರ್ದೇಶನ ಮಾಡಿದ ಲಕುಮಿ ಸಿನಿ ಕ್ರಿಯೇಶನ್ಸ್ರವರ "ಎಕ್ಕಸಕ" ತುಳು ಸಿನಿಮಾದ ಬಿಡುಗಡೆ ಸಮಾರಂಭ ಶುಕ್ರವಾರ (ಮೇ.1) ಬೆಳಿಗ್ಗೆ ನಗರದ ಜ್ಯೋತಿ ಚಿತ್ರ ಮಂದಿರದಲ್ಲಿ ಜರಗಿತು.
ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ಜನಪದ ವಿದ್ವಾಂಸ ಡಾ.ಬಿ.ಎ. ವಿವೇಕ್ ರೈ ಅವರು ದೀಪ ಪ್ರಜ್ವನಗೊಳಿಸುವ ಮೂಲಕ "ಎಕ್ಕಸಕ" ತುಳು ಸಿನಿಮಾವನ್ನು ಬಿಡುಗಡೆಗೊಳಿಸಿದರು. ತುಳು ಚಿತ್ರರಂಗದ 44 ವರ್ಷಗಳ ಇತಿಹಾಸದಲ್ಲಿ ಇತ್ತೀಚಿನ 2-3 ವರ್ಷಗಳಲ್ಲಿ ತುಳು ಚಿತ್ರಗಳ ಸಂಖ್ಯೆ ಬಹಳ ಹೆಚ್ಚಾಗಿದೆ. ತುಳು ಚಿತ್ರರಂಗದಲ್ಲಿ ಇದೊಂದು ಉತ್ತಮ ಬೆಳವಣಿಯಾಗಿದ್ದು, ತುಳು ಭಾಷೆ, ತುಳು ಸಂಸ್ಕೃತಿಗಳ ಮೇಲೆ ಬೆಳಕು ಚೆಲ್ಲುವ ಕೆಲಸವಾಗುತ್ತಿದೆ ಎಂದು ಹೇಳಿದ ಡಾ.ಬಿ.ಎ. ವಿವೇಕ್ ರೈ ಅವರು ಎಕ್ಕಸಕ ಚಿತ್ರದ ಯಶಸ್ಸಿಗೆ ಶುಭಾ ಹಾರೈಸಿದರು. [ಐದು ಕೇಂದ್ರಗಳಲ್ಲಿ 'ಚಾಲಿಪೋಲಿಲು' ಹಾಫ್ ಸೆಂಚುರಿ]
ಸಾಹಿತಿ
ಸೀತಾರಾಮ್
ರೈ,
ಚಲನಚಿತ್ರ
ನಿರ್ಮಾಪಕ
ಸಂಜೀವ
ದಂಡಕೇರಿ,
ದ.ಕ.ಜಿಲ್ಲಾ
ತುಳು
ಸಾಹಿತ್ಯ
ಅಕಾಡೆಮಿಯ
ಮಾಜಿ
ಅಧ್ಯಕ್ಷ
ಉಮನಾಥ
ಕೋಟ್ಯಾನ್,
ದ.ಕ.ಜಿಲ್ಲಾ
ಕನ್ನಡ
ಸಾಹಿತ್ಯ
ಪರಿಷತ್
ಅಧ್ಯಕ್ಷ
ಎಸ್.ಪ್ರದೀಪ್
ಕುಮಾರ್
ಕಲ್ಕೂರ,
ಮಂಗಳೂರು
ಮಹಾನಗರ
ಪಾಲಿಕೆ
ಸದಸ್ಯ
ಆಶೋಕ್
ಡಿ.ಕೆ,
ದ.ಕ.ಜಿಲ್ಲಾ
ಕಾರ್ಯನಿರತ
ಪತ್ರಕರ್ತರ
ಸಂಘದ
ಅಧ್ಯಕ್ಷ
ಜಗನಾಥ
ಶೆಟ್ಟಿ
ಬಾಳ,
ಚಾಲಿಪೊಲಿಲು
ಚಿತ್ರದ
ನಿರ್ಮಾಪಕ
ಪ್ರಕಾಶ್
ಪಾಂಡೇಶ್ವರ್,
ಕಲಾಪೋಷಕ
ಮೋಹನ್
ರೈ
ಕರ್ನೂರು,
ಶ್ರೀಮತಿ
ಕವಿತಾ
ಶಾಸ್ತ್ರಿ
ಮೊದಲಾದವರು
ಅತಿಥಿಗಳಾಗಿದ್ದರು.
ನಿರ್ಮಾಪಕರಾದ ಲಯನ್ ಚಂದ್ರಹಾಸ್ ಶೆಟ್ಟಿ, ಲಯನ್ ಗಿರೀಶ್ ಶೆಟ್ಟಿ, ಚಿತ್ರದ ನಿರ್ದೇಶಕರಾದ ಕೆ. ಸೂರಜ್ ಶೆಟ್ಟಿ, ಹಾಡುಗಳಿಗೆ ಸಾಹಿತ್ಯ ಬರೆದಿರುವ ಮಯೂರ್ ಆರ್. ಶೆಟ್ಟಿ, ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಕಲಾವಿದರಾದ ಹಿತೇಶ್ ನಾಯ್ಕ್ ಮತ್ತು ಸೋನಲ್ ಮೊಂತೆರೋ, ಸಹನಟರಾದ ಅರವಿಂದ್ ಬೋಳಾರ್, ಶೋಭಾರಾಜ್ ಮುಂತಾದವರು ಉಪಸ್ಥಿತರಿದ್ದರು. (ಫಿಲ್ಮಿಬೀಟ್ ಕನ್ನಡ)