Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿಯಮ ಮೀರಿ ರೆಸಾರ್ಟ್ ಓಪನ್: ದೂರಿನ ಕುರಿತು ಅಕುಲ್ ಬಾಲಾಜಿ ಹೇಳಿದ್ದೇನು?
ಕೊರೊನಾ ವೈರಸ್ ಸೋಂಕು ತಡೆಯಲು ವಿದಿಸಿರುವ ಲಾಕ್ಡೌನ್ನ ನಿಯಮಗಳನ್ನು ಉಲ್ಲಂಘಿಸಿ ತಮ್ಮ ರೆಸಾರ್ಟ್ ತೆರೆದು ಅಲ್ಲಿ ಮದುವೆ ಚಟುವಟಿಕೆಗೆ ಅವಕಾಶ ನೀಡಿದ್ದಕ್ಕೆ ನಟ, ಕಿರುತೆರೆ ನಿರೂಪಕ ಅಕುಲ್ ಬಾಲಾಜಿ ವಿರುದ್ಧ ದೂರು ದಾಖಲಾಗಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಲಗುಮೇನಹಳ್ಳಿ ಸಮೀಪದಲ್ಲಿ ಅಕುಲ್ ಬಾಲಾಜಿ ಒಡೆತನದ ಸನ್ಶೈನ್ ಬೈ ಜೇಡ್ ರೆಸಾರ್ಟ್ ಇದೆ.
Recommended Video
ರೆಸಾರ್ಟ್ನಲ್ಲಿ ಶನಿವಾರ ರಾತ್ರಿಯಿಂದ ಮದುವೆ ತಯಾರಿಯೊಂದು ಆರಂಭವಾಗಿತ್ತು. ಲಾಕ್ಡೌನ್ ನಿಯಮದ ಪ್ರಕಾರ ರೆಸಾರ್ಟ್ಗಳನ್ನು ತೆರೆಯುವಂತಿಲ್ಲ. ಅಲ್ಲದೆ, ಯಾವುದೇ ಸಮಾರಂಭಕ್ಕೆ ಸ್ಥಳೀಯ ಆಡಳಿತ ಹಾಗೂ ಪೊಲೀಸರಿಂದ ಅನುಮತಿ ಪಡೆಯುವುದು ಕಡ್ಡಾಯ. ಆದರೆ ಇವುಗಳನ್ನು ಉಲ್ಲಂಘಿಸಲಾಗಿದೆ ಎಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದಕ್ಕೆ ಅಕುಲ್ ಬಾಲಾಜಿ ಸ್ಪಷ್ಟೀಕರಣ ನೀಡಿದ್ದಾರೆ. ಮುಂದೆ ಓದಿ...
ಖಾಸಗಿ ಸಂಸ್ಥೆಯ ನಿರ್ವಹಣೆ
'ಎಂಟು ತಿಂಗಳ ಹಿಂದೆ ನಾನು ಖಾಸಗಿ ಆತಿಥ್ಯ ಸಂಸ್ಥೆಯೊಂದಕ್ಕೆ ರೆಸಾರ್ಟ್ಅನ್ನು ಬಿಟ್ಟುಕೊಟ್ಟಿದ್ದೆ. ನನಗೆ ಈ ಬುಕ್ಕಿಂಗ್ ಬಗ್ಗೆ ತಿಳಿದಿರಲಿಲ್ಲ. ಆದರೆ ನಾನು ಸ್ಪಷ್ಟನೆ ಪಡೆಯಲು ಕರೆ ಮಾಡಿದಾಗ ಮದುವೆ ತಯಾರಿ ನಡೆಸಿದ್ದ ಗುಂಪು ಪೂರ್ವಾನುಮತಿ ಪಡೆದಿದೆ ಎಂಬುದನ್ನು ತಿಳಿಸಿದ್ದಾರೆ' ಎಂಬುದಾಗಿ ಅಕುಲ್ ಹೇಳಿದ್ದಾರೆ.
ನಟ, ನಿರೂಪಕ ಅಕುಲ್ ಬಾಲಾಜಿ ವಿರುದ್ಧ ದೂರು ದಾಖಲು
ನಮ್ಮಲ್ಲಿ ಅನುಮತಿ ಪಡೆದಿಲ್ಲ
'ಆದರೆ ಇನ್ನಷ್ಟು ಕೆದಕಿದಾಗ ಗೊತ್ತಾಗಿದ್ದು, ಅವರು ಅನುಮತಿ ಪಡೆದಿರುವುದು ಸಮೀಪದ ಫೈವ್ ಸ್ಟಾರ್ ಹೋಟೆಲ್ಗೆ ಹೊರತು ನಮ್ಮ ರೆಸಾರ್ಟ್ಗೆ ಅಲ್ಲ ಎಂದು. ಹೀಗಾಗಿ ಕೂಡಲೇ ಅಲ್ಲಿಂದ ಜಾಗ ಖಾಲಿ ಮಾಡುವಂತೆ ನಾವು ಸೂಚಿಸಿದ್ದೆವು' ಎಂದಿದ್ದಾರೆ.
ನನ್ನ ವಿರುದ್ಧ ಎಫ್ಐಆರ್ ಆಗಿಲ್ಲ
'ಇದರ ಬಳಿಕವೇ ಅದರಲ್ಲಿನ ನನ್ನ ಪಾತ್ರದ ಬಗ್ಗೆ ಹಾಗೂ ನನ್ನ ಕಡೆಯಿಂದ ಯಾವುದೇ ತಪ್ಪಾಗಿಲ್ಲ ಪೊಲೀಸರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಎಫ್ಐಆರ್ನಲ್ಲಿ ನನ್ನ ಹೆಸರು ಇರುವುದಿಲ್ಲ, ಬದಲಾಗಿ ಆತಿಥ್ಯ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ನನಗೆ ಭರವಸೆ ನೀಡಲಾಗಿದೆ' ಎಂದು ಅವರು ಸ್ಪಷ್ಟೀಕರಣ ನೀಡಿದ್ದಾಗಿ ಪತ್ರಿಕೆಯೊಂದು ವರದಿ ಮಾಡಿದೆ.
ಇಬ್ಬರ ವಿರುದ್ಧ ದೂರು
ಲಗುಮೇನಹಳ್ಳಿ ಬಳಿಯಲ್ಲಿನ ಸನ್ಶೈನ್ ರೆಸಾರ್ಟ್ನಲ್ಲಿ ಶನಿವಾರ ರಾತ್ರಿ 10 ಗಂಟೆಯಿಂದ ಸುಮಾರು 20 ಮಂದಿ ಏಕಾಏಕಿ ಬಂದು ಮದುವೆ ತಯಾರಿ ನಡೆಸುತ್ತಿದ್ದಾರೆ ಎಂದು ಮಂಜುನಾಥ್ ಎಂಬುವವರು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಅಕುಲ್ ಬಾಲಾಜಿ ಮತ್ತು ರೆಸಾರ್ಟ್ನ ಶ್ರೀನಿವಾಸಮಣಿಯಂ ವಿರುದ್ಧ ದೂರು ದಾಖಲಿಸಿದ್ದರು.