Don't Miss!
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- News RCB: ಆರ್ಸಿಬಿ ಫ್ರಾಂಚೈಸ್ನಿಂದ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬ್ರೇಕಿಂಗ್ ನ್ಯೂಸ್; 'ಕರ್ವ' ಚಿತ್ರದಲ್ಲಿ 'ಹೀಗೂ ಉಂಟೇ.!'
ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಚಲನ ಹುಟ್ಟುಹಾಕಿರುವ 'ಕರ್ವ' ಚಿತ್ರದ ಬಗ್ಗೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಒಂದು ಎಕ್ಸ್ ಕ್ಲೂಸಿವ್ ಸುದ್ದಿಯನ್ನ ನಿಮಗಾಗಿ ಹೊತ್ತು ತಂದಿದೆ.
ಕರ್ನಾಟಕದ ಜನಪ್ರಿಯ ಸುದ್ದಿ ವಾಹಿನಿ 'ಟಿವಿ9' ನಲ್ಲಿ ಪ್ರಸಾರವಾಗುವ 'ಹೀಗೂ ಉಂಟೇ.!' ಕಾರ್ಯಕ್ರಮವನ್ನ ನೀವೆಲ್ಲಾ ನೋಡಿದ್ದೀರಾ ತಾನೇ..?
ಭೂತ, ಪ್ರೇತ, ನಂಬಿಕೆ, ಅಪನಂಬಿಕೆ, ದೇವರು, ಅಗೋಚರ ಶಕ್ತಿಗಳ ಸುತ್ತ ಹುಟ್ಟಿಕೊಳ್ಳುವ ವಿಶಿಷ್ಟ ಬಗೆಯ ಘಟನೆಗಳನ್ನು ತಿಳಿಸುವ ಕಾರ್ಯಕ್ರಮ 'ಹೀಗೂ ಉಂಟೇ.!'. ತರ್ಕಕ್ಕೆ ನಿಲುಕದ, ವೈಜ್ಞಾನಿಕ ತಳಹದಿಯಲ್ಲಿ ಉತ್ತರ ಕಂಡುಕೊಳ್ಳದ ವಿಸ್ಮಯಕಾರಿ ಘಟನೆಗಳನ್ನು ಕಾರ್ಯಕ್ರಮದ ನಿರ್ಮಾಪಕ ವೈ.ಎ.ನಾರಾಯಣಸ್ವಾಮಿ ಪ್ರತಿ ವಾರ ನಿಮ್ಮ ಮುಂದೆ ತರುತ್ತಾರೆ.
ಈಗ 'ಹೀಗೂ ಉಂಟೇ.!' ಕಾರ್ಯಕ್ರಮದ ಬಗ್ಗೆ ನಾವು ಇಷ್ಟೆಲ್ಲಾ ಪೀಠಿಕೆ ಹಾಕುತ್ತಿರುವುದಕ್ಕೂ ಒಂದು ಕಾರಣ ಇದೆ. ಅದೇನಪ್ಪಾ ಅಂದ್ರೆ, 'ಕರ್ವ' ಚಿತ್ರದ ಕಥೆಗೂ 'ಹೀಗೂ ಉಂಟೇ.!' ಕಾರ್ಯಕ್ರಮಕ್ಕೂ ಲಿಂಕ್ ಇದೇ. ಆ ಲಿಂಕ್ ಏನು ಅನ್ನೋದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಆದ್ರೆ, 'ಕರ್ವ' ಚಿತ್ರದಲ್ಲಿ 'ಹೀಗೂ ಉಂಟೇ.!' ಕಾರ್ಯಕ್ರಮ ನಡೆಯಲಿದೆ. [ಮೀಟರ್ ಇರುವವರಿಗೆ ಮತ್ತೊಂದು ಕೊಡುಗೆ 'ಕರ್ವ'.!]
'ಕರ್ವ' ಚಿತ್ರದಲ್ಲಿ 'ಹೀಗೂ ಉಂಟೇ.!' ಕಾರ್ಯಕ್ರಮದ ನಿರ್ಮಾಪಕ ವೈ.ಎ.ನಾರಾಯಣಸ್ವಾಮಿ ಕೂಡ ಅಭಿನಯಿಸಿದ್ದಾರೆ. ಅದರ ಎಕ್ಸ್ ಕ್ಯೂಸಿವ್ ಫೋಟೋ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಲಭ್ಯವಾಗಿದೆ.
'6-5=2' ಚಿತ್ರದ ನಂತರ ನಿರ್ಮಾಪಕ ಕೃಷ್ಣಚೈತನ್ಯ ನಿರ್ಮಿಸುತ್ತಿರುವ ಚಿತ್ರ 'ಕರ್ವ'. ದೇವರಾಜ್, ತಿಲಕ್, ರೋಹಿತ್ ಮುಖ್ಯ ಭೂಮಿಕೆಯಲ್ಲಿರುವ 'ಕರ್ವ' ಚಿತ್ರಕ್ಕೆ ನವ ಪ್ರತಿಭೆ ನವನೀತ್ ಆಕ್ಷನ್ ಕಟ್ ಹೇಳಿದ್ದಾರೆ. ['ಕರ್ವ' ಚಿತ್ರದಲ್ಲಿ ಡೈನಾಮಿಕ್ ಸ್ಟಾರ್ ದೇವರಾಜ್ ಗೆ ಏನು ಕೆಲಸ?]