Don't Miss!
- Automobiles Bajaj: ಯುವಕರ ಮನಗೆದ್ದಿರುವ ಪಲ್ಸರ್ ಬೈಕ್ಗಳಿವು, ಬೆಲೆ ರೂ.2 ಲಕ್ಷದೊಳಗೆ.. 50 ಕಿ.ಮೀಗಿಂತ ಹೆಚ್ಚಿನ ಮೈಲೇಜ್
- Finance ಬೆಂಗಳೂರಿನ ರಿಯಲ್ ಎಸ್ಟೇಟ್ ಸಂಸ್ಥೆ ಕಾಂಕಾರ್ಡ್ನಿಂದ 100 ಕೋಟಿಗೆ 4.5 ಎಕರೆ ಭೂಮಿ ಸ್ವಾಧೀನ
- Technology Poco: ಭಾರತದಲ್ಲಿ ಶೀಘ್ರವೇ ಲಾಂಚ್ ಆಗಲಿದೆ ಪೊಕೊದ ಈ ಫೋನ್; ಫೀಚರ್ಸ್ ಲೀಕ್
- News Bengaluru-Mysuru Expressway Toll fee: ಏಪ್ರಿಲ್ 1ರಿಂದ ಹೆದ್ದಾರಿ ಟೋಲ್ ಶುಲ್ಕ ಹೆಚ್ಚಳ.!-ಯಾವ್ಯಾವ ವಾಹನಗಳಿಗೆ ಎಷ್ಟು?
- Sports Hardik Pandya: ಸ್ವತಃ ಮುಂಬೈ ಇಂಡಿಯನ್ಸ್ ಫ್ಯಾನ್ಸ್ನಿಂದಲೂ ಹಾರ್ದಿಕ್ ಪಾಂಡ್ಯ ಟ್ರೋಲ್!
- Lifestyle ಒಂದು ಸೌತೆಕಾಯಿ ಹಾಕಿ ಮಾಡಿ ಮೊಸರು ಹುಳಿ..! ಸಿಕ್ಕಾಪಟ್ಟೆ ರುಚಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಟ್ವೀಟ್ ಆಫ್ ದಿ ಡೇ: ಯಾರ್ ಯಾರು ಏನು ಟ್ವೀಟ್ ಮಾಡಿದ್ದಾರೆ.?
ಸಿನಿಮಾ ತಾರೆಯರು ಈಗೀಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರೀಯರಾಗಿದ್ದಾರೆ. ತಮ್ಮ ಸಿನಿಮಾ ಮತ್ತು ಖಾಸಗಿ ಜೀವನದ ಬೆಳವಣಿಗೆಗಳನ್ನ, ಆಗುಹೋಗುಗಳನ್ನು ಅಭಿಮಾನಿಗಳಿಗೆ ನೇರವಾಗಿ ಮುಟ್ಟಿಸುತ್ತಿದ್ದಾರೆ.
ಯಾರಿಗಾದರೂ ಏನಾದರು ಹೇಳಬೇಕು ಎನಿಸಿದ್ರೆ, ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳುತ್ತಾರೆ. ಕೆಲವೊಮ್ಮೆ ಕೆಲವರ ಅಭಿಪ್ರಾಯಗಳು ವಿವಾದ ಹುಟ್ಟಿಹಾಕಿರುವುದು ಉಂಟು.
ಈ ದಿನ ಯಾವ ನಟ-ನಟಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಏನು ಟ್ವೀಟ್ ಮಾಡಿದ್ದಾರೆ, ಯಾವ ವಿಷ್ಯದ ಬಗ್ಗೆ ಮಾತನಾಡಿದ್ದಾರೆ, ಯಾವ ಫೋಟೋ ಪೋಸ್ಟ್ ಮಾಡಿದ್ದಾರೆ ಎಂಬುದನ್ನ ''ಟ್ವೀಟ್ ಆಫ್ ದಿ ಡೇ'' ವಿಶೇಷ ಸ್ಟೋರಿಯಲ್ಲಿ ನೋಡಬಹುದು. ಮುಂದೆ ಓದಿ.....
|
ಎಚ್ಚರಿಕೆ ಕೊಟ್ಟ ದಾಸ
ದರ್ಶನ್ ತೂಗುದೀಪ ಎಂಬ ನಕಲಿ ಖಾತೆ ಬಳಸಿ, ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಬಗ್ಗೆ ಅವಹೇಳನ ಮಾಡಲಾಗಿತ್ತು. ಇಂತವರಿಗೆ ಚಾಲೆಂಜಿಂಗ್ ಸ್ಟಾರ್ ಎಚ್ಚರಿಕೆ ಕೊಟ್ಟಿದ್ದಾರೆ. ''Con- ಸೈಬರ್ ಕ್ರೈಂ ಡಿಪಾರ್ಟ್ಮೆಂಟ್ ಈ ರೀತಿ ಸೋಶಿಯಲ್ ಮೀಡಿಯಾ ದುರ್ಬಳಕೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈ ಕೊಳ್ಳುವುದಾಗಿ ಹೇಳಿದ್ದಾರೆ. ದಯಮಾಡಿ ಯಾರೂ ಇಂತಹ ಕೆಲಸಗಳಲ್ಲಿ ತೊಡಗಬೇಡಿ ಎಂದು ಕಳಕಳಿಯ ವಿನಂತಿ''- ದಾಸ ದರ್ಶನ್
ತನ್ನ ಹೆಸರು ಬಳಸಿ ಕೆಟ್ಟ ಕೆಲಸ ಮಾಡಿದವರಿಗೆ ಡಿ ಬಾಸ್ ವಾರ್ನಿಂಗ್
|
ಮನೆ ವಿನ್ಯಾಸದ ಖುಷಿ ಹಂಚಿಕೊಂಡ ಜಗ್ಗೇಶ್
ಜಗ್ಗೇಶ್ ಅವರ ಮನೆಯ ಒಳ ವಿನ್ಯಾಸ ಬದಲಾಗಿದ್ದು, ಈ ಬಗ್ಗೆ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ''ಪರಿಮಳನ ಚಿಂತನೆಯಿಂದ ಬದಲಾದ ನಮ್ಮ ಮನೆಯ ಒಳಾಂಗಣ..ನನಗೆ ನನ್ನ ಮನೆಯೇ ಮಂತ್ರಾಲಯ.. ಶುಭರಾತ್ರಿ..ಸವಿಗನಸು.. '' - ಜಗ್ಗೇಶ್, ನಟ
In pics: ಜಗ್ಗೇಶ್ ಮನೆಯೊಳಗೆ ಬದಲಾಯ್ತು ವಿನ್ಯಾಸ
|
ಅಣ್ಣನ ಚಿತ್ರಕ್ಕೆ ವಿಶ್ ಮಾಡಿದ ಧ್ರುವ
ಚಿರಂಜೀವಿ ಸರ್ಜಾ ಅಭಿನಯದ ಅಮ್ಮ ಐ ಲವ್ ಯೂ ಸಿನಿಮಾ ಇದೇ ವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಈ ಚಿತ್ರಕ್ಕೆ ಮತ್ತು ಸಹೋದರನಿಗೆ ನಟ ಧ್ರುವ ಸರ್ಜಾ ಟ್ವಿಟ್ಟರ್ ಮೂಲಕ ಶುಭಕೋರಿದ್ದಾರೆ.
|
ಉಪ್ಪಿಗೆ ಚಾಲೆಂಜ್ ಹಾಕಿದ ಕಿಚ್ಚ
ಕಿಚ್ಚ ಸುದೀಪ್ 'ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು' ಎನ್ನುವ ಸವಾಲನ್ನ ನಟ ಉಪೇಂದ್ರ ಅವರಿಗೆ ನೀಡಿದ್ದು, ''ನೀವು ಸದಾ ಫಿಟ್ ಆಗೇ ಇರ್ತೀರಾ. ಆದ್ರೆ, ಬೇರೆಯವರಿಗೆ ನೀವು ಪ್ರೇರಣೆಯಾಗುತ್ತೀರಾ'' ಎಂದು ಚಾಲೆಂಜ್ ನೀಡಿದ್ದಾರೆ.
ಚಿತ್ರರಂಗದವರಿಗೆ ಹೊಸ ಸವಾಲು ಹಾಕಿದ ಕಿಚ್ಚ ಸುದೀಪ್
|
ಫೋಟೋ ಹಂಚಿಕೊಂಡ ಉಪ್ಪಿ
ಪ್ರಜಾಕೀಯ ಹೆಸರಿನಲ್ಲಿ ಕೆಲವು ಯುವಕರು ರಸ್ತೆಯಲ್ಲಿ ಆಗಿರುವ ಗುಂಡಿಗಳನ್ನ ಸ್ವಯಂ ಪ್ರೇರಿತವಾಗಿ ಮುಚ್ಚುತ್ತಿರುವ ಫೋಟೋವನ್ನ ಉಪೇಂದ್ರ ಶೇರ್ ಮಾಡಿದ್ದಾರೆ.
|
ಅನಾಹುತದ ಬಗ್ಗೆ ಸ್ಪಷ್ಟನೆ ನೀಡಿದ ದೀಪಿಕಾ
ನಟಿ ದೀಪಿಕಾ ಪಡುಕೋಣೆ ನವಾಸವಾಗಿರುವ ಅಪಾರ್ಟ್ಮೆಂಟ್ ನಲ್ಲಿ ಇಂದು ಬೆಂಕಿ ಅವಘಡ ಸಂಭವಿಸಿದೆ. ಆದ್ರೆ, ದೀಪಿಕಾ ಮನೆಯಲ್ಲಿ ಇರಲಿಲ್ಲ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ''ನಾನು ಸುರಕ್ಷಿತವಾಗಿದ್ದೇನೆ. ಎಲ್ಲರಿಗೂ ಧನ್ಯವಾದಗಳು. ಬೆಂಕಿಯಲ್ಲಿ ಸಿಲುಕಿಕೊಂಡಿರುವವರು ಸುರಕ್ಷಿತವಾಗಲಿ ಎಂದು ಬೇಡಿಕೊಳ್ಳೊಣ'' ಎಂದಿದ್ದಾರೆ.