ಈ ವಾರ ಎರಡೇ ಸಿನಿಮಾ: ಆದ್ರೆ, ಕಾಂಪಿಟೇಶನ್ ಜಾಸ್ತಿ
ಸ್ಯಾಂಡಲ್ ವುಡ್ ನಲ್ಲಿ ಪ್ರತಿ ವಾರ ನಾಲ್ಕೈದು ಚಿತ್ರಗಳು ಬಿಡುಗಡೆಯಾಗ್ತಿದ್ವು. ಆದ್ರೆ, ಈ ವಾರ ಬರಿ ಎರಡು ಸಿನಿಮಾ ತೆರೆಗೆ ಬರ್ತಿದೆ. ಹಾಗಿದ್ದರೂ ಕಾಂಪಿಟೇಶನ್ ಮಾತ್ರ ಕಮ್ಮಿಯಿಲ್ಲ. ಯಾಕಂದ್ರೆ, ಪ್ರತಿ ಬಾರಿಯೂ ನಮ್ಮ ಚಿತ್ರಗಳ ಜೊತೆಯೇ ಪೈಪೋಟಿ ನಡೆಸುತ್ತಿದ್ದ ಕನ್ನಡ ಸಿನಿಮಾಗಳು ಈ ವಾರ ಪರಭಾಷೆ ಚಿತ್ರಗಳ ಜೊತೆ ಫೈಟ್ ಮಾಡಲಿದೆ.
ಹೌದು, ಕನ್ನಡದಲ್ಲಿ ಲೂಸ್ ಮಾದ ಯೋಗೇಶ್ ಅಭಿನಯದ 'ಲಂಬೋದರ' ಮತ್ತು ಹೊಸಬರ 'ಗಿಣಿ ಹೇಳಿದ ಕಥೆ' ಬಿಡುಗಡೆಯಾಗುತ್ತಿದೆ. ಎರಡು ಚಿತ್ರಗಳು ತಮ್ಮದೇ ಆದ ಡಿಫ್ರೆಂಟ್ ಕಥೆ, ವಿಭಿನ್ನ ಮನರಂಜನೆ ಮೂಲಕ ಪ್ರೇಕ್ಷಕರೆದುರು ಬರ್ತಿದೆ.
ಈ ಎರಡು ಚಿತ್ರಗಳು ಈಗ ಪರಭಾಷೆಯ ಚಿತ್ರಗಳು ಎದುರು ಗೆಲ್ಲಬೇಕಿದೆ. ಎಸ್, ಈ ವಾರ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಪೇಟಾ', ಅಜಿತ್ ಅಭಿನಯದ 'ವಿಶ್ವಾಸಂ' ಹಾಗೂ ಬಾಲಕೃಷ್ಣ ಅಭಿನಯದ 'ಎನ್.ಟಿ.ಆರ್' ಚಿತ್ರಗಳು ತೆರೆಗೆ ಬರ್ತಿವೆ.

ಸಹಜವಾಗಿ ಕರ್ನಾಟಕದಲ್ಲಿ ಈ ಮೂರು ಚಿತ್ರಗಳಿಗೆ ಹೆಚ್ಚಿನ ಥಿಯೇಟರ್ ಸಿಗಲಿದೆ. ಪ್ರಚಾರವೂ ಸಿಕ್ಕಿದೆ. ಹಾಗಾಗಿ, ಈ ಚಿತ್ರಗಳು ಎದುರು 'ಗಿಣಿ ಹೇಳಿದ ಕಥೆ' ಮತ್ತು 'ಲಂಬೋದರ' ದಿಟ್ಟೆದೆಯಿಂದ ನಿಲ್ಲಬೇಕಿದೆ.
ಎಂತದ ದೊಡ್ಡ ಸಿನಿಮಾ ಅಥವಾ ಎಂತಹ ಸ್ಟಾರ್ ಸಿನಿಮಾ ಬಂದ್ರು, ಕಥೆ ಚಿತ್ರಕಥೆ ಚೆನ್ನಾಗಿದ್ರೆ ಕನ್ನಡ ಸಿನಿಮಾ ಹಿಟ್ ಆಗುತ್ತೆ, ಹೆಚ್ಚು ದಿನ ಚಿತ್ರಮಂದಿರದಲ್ಲಿ ಉಳಿಯುತ್ತೆ ಎನ್ನುವುದಕ್ಕೆ ಈ ಹಿಂದೆ ಹಲವು ಉದಾಹರಣೆಗಳಿವೆ. ಬಹುಶಃ ಗಿಣಿ ಮತ್ತು ಲಂಬೋದರನ ವಿಷ್ಯದಲ್ಲೂ ಇದೇ ಆಗಲಿ ಎಂಬುದಷ್ಟೇ ಕನ್ನಡ ಪ್ರೇಮಿಗಳು ಆಸೆ.


Click it and Unblock the Notifications











