Don't Miss!
- Lifestyle ಹೊಟ್ಟೆಯೇ ಇಲ್ಲದೆ ಬದುಕಿದ್ದ ನತಾಶಾ ದಿಡ್ಡಿ ನಿಧನ...! ಈಕೆ ಯಾರು ಗೊತ್ತಾ?
- Finance ಸುಗಮ, ಸುರಕ್ಷಿತ ಸಂಚಾರಕ್ಕಾಗಿ ವಿಶೇಷ ಅಭಿಯಾನ ಆರಂಭಿಸಿದ ಬೆಂಗಳೂರು ಸಂಚಾರಿ ಪೊಲೀಸ್
- News ಮಗಳ ಹತ್ಯೆ ಬಗ್ಗೆ ತಂದೆ ನಿರಂಜನ್ ಹಿರೇಮಠ ಪ್ರತಿಕ್ರಿಯೆ: ಒಂದು ಟ್ವೀಟ್ಗೆ ಸಿಎಂ ಜವಾಬ್ದಾರಿ ಮುಗಿಯಿತೇ?: ಮಾಜಿ ಸಿಎಂ
- Automobiles ಹಲವು ಆಯ್ಕೆಗಳಲ್ಲಿ ಸಿಗಲಿದೆ 5 ಡೋರ್ ಥಾರ್: ಸುದ್ದಿ ತಿಳಿದು ನಿಟ್ಟುಸಿರು ಬಿಟ್ಟ ಮಹೀಂದ್ರಾ ಫ್ಯಾನ್ಸ್!
- Sports ಟಿ20 ವಿಶ್ವಕಪ್ 2024: ಟೀಮ್ ಇಂಡಿಯಾಗೆ ದೊಡ್ಡ ಚಿಂತೆಯಾದ ಈ ಆರಂಭಿಕನ ಫಾರ್ಮ್
- Technology iPhone: ಐಫೋನ್ 16 ಸರಣಿಯ ಕ್ಯಾಮೆರಾ ಫೀಚರ್ಸ್ ಲೀಕ್! ಏನೆಲ್ಲಾ ವಿಶೇಷತೆ ಇವೆ?..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ವಾರ ಎರಡೇ ಸಿನಿಮಾ: ಆದ್ರೆ, ಕಾಂಪಿಟೇಶನ್ ಜಾಸ್ತಿ
ಸ್ಯಾಂಡಲ್ ವುಡ್ ನಲ್ಲಿ ಪ್ರತಿ ವಾರ ನಾಲ್ಕೈದು ಚಿತ್ರಗಳು ಬಿಡುಗಡೆಯಾಗ್ತಿದ್ವು. ಆದ್ರೆ, ಈ ವಾರ ಬರಿ ಎರಡು ಸಿನಿಮಾ ತೆರೆಗೆ ಬರ್ತಿದೆ. ಹಾಗಿದ್ದರೂ ಕಾಂಪಿಟೇಶನ್ ಮಾತ್ರ ಕಮ್ಮಿಯಿಲ್ಲ. ಯಾಕಂದ್ರೆ, ಪ್ರತಿ ಬಾರಿಯೂ ನಮ್ಮ ಚಿತ್ರಗಳ ಜೊತೆಯೇ ಪೈಪೋಟಿ ನಡೆಸುತ್ತಿದ್ದ ಕನ್ನಡ ಸಿನಿಮಾಗಳು ಈ ವಾರ ಪರಭಾಷೆ ಚಿತ್ರಗಳ ಜೊತೆ ಫೈಟ್ ಮಾಡಲಿದೆ.
ಹೌದು, ಕನ್ನಡದಲ್ಲಿ ಲೂಸ್ ಮಾದ ಯೋಗೇಶ್ ಅಭಿನಯದ 'ಲಂಬೋದರ' ಮತ್ತು ಹೊಸಬರ 'ಗಿಣಿ ಹೇಳಿದ ಕಥೆ' ಬಿಡುಗಡೆಯಾಗುತ್ತಿದೆ. ಎರಡು ಚಿತ್ರಗಳು ತಮ್ಮದೇ ಆದ ಡಿಫ್ರೆಂಟ್ ಕಥೆ, ವಿಭಿನ್ನ ಮನರಂಜನೆ ಮೂಲಕ ಪ್ರೇಕ್ಷಕರೆದುರು ಬರ್ತಿದೆ.
'ಗಿಣಿ ಹೇಳಿದ ಕಥೆ'ಯನ್ನ ನೀವು ಈ ವಾರ ನೋಡಬಹುದು
ಈ ಎರಡು ಚಿತ್ರಗಳು ಈಗ ಪರಭಾಷೆಯ ಚಿತ್ರಗಳು ಎದುರು ಗೆಲ್ಲಬೇಕಿದೆ. ಎಸ್, ಈ ವಾರ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಪೇಟಾ', ಅಜಿತ್ ಅಭಿನಯದ 'ವಿಶ್ವಾಸಂ' ಹಾಗೂ ಬಾಲಕೃಷ್ಣ ಅಭಿನಯದ 'ಎನ್.ಟಿ.ಆರ್' ಚಿತ್ರಗಳು ತೆರೆಗೆ ಬರ್ತಿವೆ.
ಗೆಲುವಿನ ವಿಶ್ವಾಸದಲ್ಲಿ ಈ ವಾರ 'ಲಂಬೋದರ'ನ ಆಗಮನ
ಸಹಜವಾಗಿ ಕರ್ನಾಟಕದಲ್ಲಿ ಈ ಮೂರು ಚಿತ್ರಗಳಿಗೆ ಹೆಚ್ಚಿನ ಥಿಯೇಟರ್ ಸಿಗಲಿದೆ. ಪ್ರಚಾರವೂ ಸಿಕ್ಕಿದೆ. ಹಾಗಾಗಿ, ಈ ಚಿತ್ರಗಳು ಎದುರು 'ಗಿಣಿ ಹೇಳಿದ ಕಥೆ' ಮತ್ತು 'ಲಂಬೋದರ' ದಿಟ್ಟೆದೆಯಿಂದ ನಿಲ್ಲಬೇಕಿದೆ.
ಎಂತದ ದೊಡ್ಡ ಸಿನಿಮಾ ಅಥವಾ ಎಂತಹ ಸ್ಟಾರ್ ಸಿನಿಮಾ ಬಂದ್ರು, ಕಥೆ ಚಿತ್ರಕಥೆ ಚೆನ್ನಾಗಿದ್ರೆ ಕನ್ನಡ ಸಿನಿಮಾ ಹಿಟ್ ಆಗುತ್ತೆ, ಹೆಚ್ಚು ದಿನ ಚಿತ್ರಮಂದಿರದಲ್ಲಿ ಉಳಿಯುತ್ತೆ ಎನ್ನುವುದಕ್ಕೆ ಈ ಹಿಂದೆ ಹಲವು ಉದಾಹರಣೆಗಳಿವೆ. ಬಹುಶಃ ಗಿಣಿ ಮತ್ತು ಲಂಬೋದರನ ವಿಷ್ಯದಲ್ಲೂ ಇದೇ ಆಗಲಿ ಎಂಬುದಷ್ಟೇ ಕನ್ನಡ ಪ್ರೇಮಿಗಳು ಆಸೆ.