Don't Miss!
- News ಮಳೆ.. ಮಳೆ.. ಗುಡುಗು ಸಹಿತ ಭರ್ಜರಿ ಮಳೆಗೆ ತತ್ತರಿಸಿದ ಕರ್ನಾಟಕ!
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓಡ
- Finance Bengaluru Traffic Police: ಬೆಂಗಳೂರಿನ ಈ ರಸ್ತೆ ಸಂಚಾರ ಮಾರ್ಗ ಬದಲಾವಣೆ, ವಿವರ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ವಾರ ಎರಡೇ ಸಿನಿಮಾ: ಆದ್ರೆ, ಕಾಂಪಿಟೇಶನ್ ಜಾಸ್ತಿ
ಸ್ಯಾಂಡಲ್ ವುಡ್ ನಲ್ಲಿ ಪ್ರತಿ ವಾರ ನಾಲ್ಕೈದು ಚಿತ್ರಗಳು ಬಿಡುಗಡೆಯಾಗ್ತಿದ್ವು. ಆದ್ರೆ, ಈ ವಾರ ಬರಿ ಎರಡು ಸಿನಿಮಾ ತೆರೆಗೆ ಬರ್ತಿದೆ. ಹಾಗಿದ್ದರೂ ಕಾಂಪಿಟೇಶನ್ ಮಾತ್ರ ಕಮ್ಮಿಯಿಲ್ಲ. ಯಾಕಂದ್ರೆ, ಪ್ರತಿ ಬಾರಿಯೂ ನಮ್ಮ ಚಿತ್ರಗಳ ಜೊತೆಯೇ ಪೈಪೋಟಿ ನಡೆಸುತ್ತಿದ್ದ ಕನ್ನಡ ಸಿನಿಮಾಗಳು ಈ ವಾರ ಪರಭಾಷೆ ಚಿತ್ರಗಳ ಜೊತೆ ಫೈಟ್ ಮಾಡಲಿದೆ.
ಹೌದು, ಕನ್ನಡದಲ್ಲಿ ಲೂಸ್ ಮಾದ ಯೋಗೇಶ್ ಅಭಿನಯದ 'ಲಂಬೋದರ' ಮತ್ತು ಹೊಸಬರ 'ಗಿಣಿ ಹೇಳಿದ ಕಥೆ' ಬಿಡುಗಡೆಯಾಗುತ್ತಿದೆ. ಎರಡು ಚಿತ್ರಗಳು ತಮ್ಮದೇ ಆದ ಡಿಫ್ರೆಂಟ್ ಕಥೆ, ವಿಭಿನ್ನ ಮನರಂಜನೆ ಮೂಲಕ ಪ್ರೇಕ್ಷಕರೆದುರು ಬರ್ತಿದೆ.
'ಗಿಣಿ ಹೇಳಿದ ಕಥೆ'ಯನ್ನ ನೀವು ಈ ವಾರ ನೋಡಬಹುದು
ಈ ಎರಡು ಚಿತ್ರಗಳು ಈಗ ಪರಭಾಷೆಯ ಚಿತ್ರಗಳು ಎದುರು ಗೆಲ್ಲಬೇಕಿದೆ. ಎಸ್, ಈ ವಾರ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಪೇಟಾ', ಅಜಿತ್ ಅಭಿನಯದ 'ವಿಶ್ವಾಸಂ' ಹಾಗೂ ಬಾಲಕೃಷ್ಣ ಅಭಿನಯದ 'ಎನ್.ಟಿ.ಆರ್' ಚಿತ್ರಗಳು ತೆರೆಗೆ ಬರ್ತಿವೆ.
ಗೆಲುವಿನ ವಿಶ್ವಾಸದಲ್ಲಿ ಈ ವಾರ 'ಲಂಬೋದರ'ನ ಆಗಮನ
ಸಹಜವಾಗಿ ಕರ್ನಾಟಕದಲ್ಲಿ ಈ ಮೂರು ಚಿತ್ರಗಳಿಗೆ ಹೆಚ್ಚಿನ ಥಿಯೇಟರ್ ಸಿಗಲಿದೆ. ಪ್ರಚಾರವೂ ಸಿಕ್ಕಿದೆ. ಹಾಗಾಗಿ, ಈ ಚಿತ್ರಗಳು ಎದುರು 'ಗಿಣಿ ಹೇಳಿದ ಕಥೆ' ಮತ್ತು 'ಲಂಬೋದರ' ದಿಟ್ಟೆದೆಯಿಂದ ನಿಲ್ಲಬೇಕಿದೆ.
ಎಂತದ ದೊಡ್ಡ ಸಿನಿಮಾ ಅಥವಾ ಎಂತಹ ಸ್ಟಾರ್ ಸಿನಿಮಾ ಬಂದ್ರು, ಕಥೆ ಚಿತ್ರಕಥೆ ಚೆನ್ನಾಗಿದ್ರೆ ಕನ್ನಡ ಸಿನಿಮಾ ಹಿಟ್ ಆಗುತ್ತೆ, ಹೆಚ್ಚು ದಿನ ಚಿತ್ರಮಂದಿರದಲ್ಲಿ ಉಳಿಯುತ್ತೆ ಎನ್ನುವುದಕ್ಕೆ ಈ ಹಿಂದೆ ಹಲವು ಉದಾಹರಣೆಗಳಿವೆ. ಬಹುಶಃ ಗಿಣಿ ಮತ್ತು ಲಂಬೋದರನ ವಿಷ್ಯದಲ್ಲೂ ಇದೇ ಆಗಲಿ ಎಂಬುದಷ್ಟೇ ಕನ್ನಡ ಪ್ರೇಮಿಗಳು ಆಸೆ.