Don't Miss!
- News ಆರಂಭದಲ್ಲೇ ಬಿಜೆಪಿ- ಜೆಡಿಎಸ್ ದೋಸ್ತಿಯಲ್ಲಿ ಬಿರುಕು: ವಿಜಯೇಂದ್ರ ಏನಂದ್ರು?
- Lifestyle ಕೊನೆಗೂ ಬೆಂಗಳೂರಿಗೆ ಮಳೆ ಭಾಗ್ಯ..! ಹವಾಮಾನ ಇಲಾಖೆ ಸೂಚಿಸಿದ ದಿನಾಂಕವಿದು..!
- Automobiles Self-Driving Car: ಭಾರತೀಯರು ಅಸಮಾನ್ಯರು... ಬೊಲೆರೋದಲ್ಲಿ ಭವಿಷ್ಯ ಬದಲಿಸುವ ತಂತ್ರಜ್ಞಾನ!
- Sports Viral look: IPL 2024 ಆರಂಭಕ್ಕೂ ಮುನ್ನ ಸಾಮಾಜಿಕ ತಾಣದಲ್ಲಿ ಸಂಚಲನ ಮೂಡಿಸಿರುವ ವಿರಾಟ್ ಕೊಹ್ಲಿ Trendy look
- Technology Lava: ಭಾರತದಲ್ಲಿ ಸುನಾಮಿ ಎಬ್ಬಿಸಲಿದೆ ಲಾವಾ O2! ನಿರೀಕ್ಷಿತ ಫೀಚರ್ಸ್ ಬಗ್ಗೆ ತಿಳಿಯಿರಿ
- Finance ಬೆಂಗಳೂರಿನ ಮೇಘನಾ ಫುಡ್ಸ್ ಹೋಟೆಲ್ ಮಳಿಗೆಗಳ ಮೇಲೆ ಐಟಿ ದಾಳಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಉಡುಂಬಾ'ನ ಹಾಡುಗಳು ಆರ್ಭಟ ಆರಂಭ
'ಗೂಳಿಹಟ್ಟಿ' ಖ್ಯಾತಿಯ ಪವನ್ ಶೌರ್ಯ ಮತ್ತೊಂದು ಆಕ್ಷನ್ ಎಂಟರ್ ಟೈನ್ಮೆಂಟ್ ಮೂಲಕ ಮತ್ತೆ ಸದ್ದು ಮಾಡ್ತಿದ್ದಾರೆ. ಈಗಾಗಲೇ ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಗಳಿಂದ ವಿಶೇಷವೆನಿಸಿಕೊಂಡಿರುವ 'ಉಡುಂಬಾ' ಸಿನಿಮಾ ಈಗ ಆಡಿಯೋ ಬಿಡುಗಡೆ ಮಾಡಿದೆ.
ಚಾಮರಾಜಪೇಟೆಯಲ್ಲಿರುವ ಕನ್ನಡ ಚಲನಚಿತ್ರ ಕಲಾವಿದರ ಭವನದಲ್ಲಿ ನಿನ್ನೆ ಸಂಜೆ (ಸೋಮವಾರ) 'ಉಡುಂಬಾ' ಚಿತ್ರ ಧ್ವನಿ ಸುರಳಿ ರಿಲೀಸ್ ಮಾಡಲಾಯಿತು. ನೂರಾರು ಅಭಿಮಾನಿಗಳು, ಚಿತ್ರತಂಡ, ಇದಕ್ಕೆ ಸಾಕ್ಷಿಯಾಯಿತು.
ಚಿತ್ರದ ನಾಯಕ ಪವನ್ ಶೌರ್ಯ, ನಾಯಕಿ ಚಿರಾಶ್ರೀ ಅಂಚನ್, ನಿರ್ದೇಶಕ ಶಿವರಾಜ್, ಸಂಗೀತ ನಿರ್ದೇಶಕ ವಿನೀತ್ ರಾಜ್ ಮೆನನ್, ನಿರ್ಮಾಪಕರಾದ ಹನುಮಂತ ರಾವ್, ವೆಂಕಟರೆಡ್ಡಿ ಹಾಗೂ ಸಹ ನಿರ್ಮಾಪಕ ಮಾನಸ ಮಹೇಶ್, ಯುವ ನಿರ್ದೇಶಕರಾದ 'ಬಹುದ್ಧೂರ್' ಚೇತನ್ ಕುಮಾರ್, 'ಅಲೆಮಾರಿ' ಖ್ಯಾತಿಯ ಸಂತು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, 'ಮುದ್ದು ಮನಸೇ' ಖ್ಯಾತಿಯ ವಿನೀತ್ ರಾಜ್ ಮ್ಯುಸಿಕ್ ಕಂಪೋಸ್ ಮಾಡಿದ್ದಾರೆ. ಚೇತನ್ ಕುಮಾರ್, 'ಅಲೆಮಾರಿ' ಖ್ಯಾತಿಯ 'ಸಂತು' ಹಾಗೂ ಲೋಕೇಶ್ ಕೃಷ್ಣ ಸಾಹಿತ್ಯ ಬರೆದಿದ್ದಾರೆ.
ಈ ಐದು ಹಾಡಿನಲ್ಲಿ ಎರಡು ರೊಮ್ಯಾಂಟಿಕ್ ಹಾಡುಗಳಿದ್ದು, ಎರಡು ಭರ್ಜರಿ ಮಾಸ್ ಸಾಂಗ್ ಇದೆ. ಇನ್ನೊಂದು ಐಟಂ ಸಾಂಗ್ ಇದೆ. ಈ ಐಟಂ ಹಾಡಿನಲ್ಲಿ 'ಬಿಗ್ ಬಾಸ್' ಖ್ಯಾತಿಯ ಸಂಜನಾ ಹೆಜ್ಜೆ ಹಾಕಿದ್ದಾರೆ. ಒಂದಕ್ಕಿಂತ ಒಂದು ಹಾಡುಗಳು ವಿಭಿನ್ನ ಮತ್ತು ಹೊಸತನದಿಂದ ಕೂಡಿದ್ದು, 'ಉಡುಂಬಾ' ಚಿತ್ರದ ಹಾಡುಗಳನ್ನ ಆನಂದ್ ಆಡಿಯೋ ಸಂಸ್ಥೆ ಖರೀದಿಸಿದೆ.
ಇನ್ನುಳಿದಂತೆ 'ಉಡುಂಬಾ' ಪಕ್ಕಾ ಮಾಸ್ ಮನರಂಜನೆಯ ಸಿನಿಮವಾಗಿದ್ದು, ನಾಯಕ ಪವನ್ ಶೌರ್ಯ ಘರ್ಜಿಸಲಿದ್ದಾರೆ ಎನ್ನುವುದಕ್ಕೆ ಟ್ರೈಲರ್ ಸಾಕ್ಷಿಯಾಗಿದೆ. ಇನ್ನು 'ಹುಲಿರಾಯ' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಚಿರಶ್ರೀ, ಇದಕ್ಕೂ ಮೊದಲು 'ಪವಿತ್ರ', 'ರೊಟ್ಟಿ ರಂಭಾ' ಎಂಬ ತುಳು ಸಿನಿಮಾ ಮಾಡಿದ್ದರು. ಇದೀಗ, ತಮಿಳು ಮತ್ತು ತೆಲುಗು ಭಾಷೆಯಲ್ಲೂ ಅಭಿನಯಿಸುತ್ತಿದ್ದಾರೆ.
ಇನ್ನುಳಿದಂತೆ ಶರತ್ ಲೋಹಿತಾಶ್ವ ಚಿತ್ರದ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಿರ್ದೇಶಕ ಶಿವರಾಜ್ ಗೆ ಇದು ಚೊಚ್ಚಲ ಸಿನಿಮಾ. ನಿರ್ಮಾಪಕರಿಗೂ ಇದು ಮೊದಲ ಪ್ರಾಜೆಕ್ಟ್. ಎಸ್ ಹಲೇಶ್ ಅವರ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ.