Don't Miss!
- News Gold Price: ಇಂದು ಮತ್ತಷ್ಟು ಹೆಚ್ಚಾದ ಬಂಗಾರದ ಬೆಲೆ: ಬೆಳ್ಳಿಯೂ ಬಲು ದುಬಾರಿ
- Technology AI Camera: ಎಐ ಕ್ಯಾಮೆರಾ ಆಯ್ಕೆ ಇರುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳಿವು! ಬೆಲೆ ಎಷ್ಟು ?
- Sports IPL 2024: RCB vs KKR ಹೆಡ್-ಟು-ಹೆಡ್ ದಾಖಲೆ, ಪಿಚ್ ವರದಿ; ಚಿನ್ನಸ್ವಾಮಿಯಲ್ಲಿ ಗೆಲುವು ಯಾರಿಗೆ?
- Finance ವಿವಿಧ ರಾಜ್ಯಗಳ ನರೇಗಾ ಕಾರ್ಮಿಕರ ವೇತನ ದರ ಪರಿಷ್ಕರಣೆ, ವಿವರ
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರಮಂದಿರ ಭರ್ತಿ ಆದೇಶದ ಮೊದಲ ದಿನ: ಉಡುಪಿ ಥಿಯೇಟರ್ಗಳಲ್ಲಿ ಪ್ರೇಕ್ಷಕರಿಗೆ ಬರ
ಉಡುಪಿಯಲ್ಲಿ ಬಹುತೇಕ ಥಿಯೇಟರುಗಳು ಇಂದಿನಿಂದ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿವೆ. ಕಳೆದ 11 ತಿಂಗಳಿಂದ ಬಂದ್ ಆಗಿದ್ದ ಥಿಯೇಟರ್ ಗಳು ಪೂರ್ಣ ಪ್ರಮಾಣದಲ್ಲಿ ತೆರೆದಿದ್ದರೂ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಗರದ ಕಲ್ಪನಾ ಚಿತ್ರಮಂದಿರದಲ್ಲಿ ಪ್ರಜ್ವಲ್ ದೇವರಾಜ್ ಅಭಿನಯದ 'ಇನ್ಸ್ಪೆಕ್ಟರ್ ವಿಕ್ರಂ' ಸಿನೆಮಾ ಬಿಡುಗಡೆ ಮಾಡಲಾಗಿದೆ, ಆದರೆ ಸಿನಿಮಾ ನೋಡಲು ಮೊದಲ ಶೋ ಗೆ ಬಂದಿದ್ದು ಕೇವಲ 40 ಜನ.
ಇನ್ನು ಅಲಂಕಾರ್ ಚಿತ್ರ ಮಂದಿರದಲ್ಲಿವಿನೋದ್ ಪ್ರಭಾಕರ್ ನಟನೆಯ 'ಶ್ಯಾಡೋ' ಸಿನೆಮಾ ಬಿಡುಗಡೆ ಮಾಡಲಾಗಿದೆ. ಚಿತ್ರಕ್ಕೆ ಸ್ಟೇ ಬಂದಿರುವುದರಿಂದ ಮಾರ್ನಿಂಗ್ ಶೋ ರದ್ಧಾಗಿದೆ. ಹೀಗಾಗಿ ಜನಕ್ಕೆ ನಿರಾಶೆಯಾಗಿದೆ. ಸುದೀಪ್ ,ದರ್ಶನ್ , ಯಶ್ ಶಿವರಾಜ್ ಕುಮಾರ್, ಪುನೀತ್, ಧೃವ ಸರ್ಜಾ ಚಿತ್ರಗಳು ಬಂದರೆ ಥಿಯೇಟರ್ ನತ್ತ ಜನ ಬರುತ್ತಾರೆ ಅನ್ನುವುದು ಚಿತ್ರಮಂದಿರದ ಮಾಲೀಕರ ಅಭಿಪ್ರಾಯ.
Recommended Video
ಕೋವಿಡ್ ನಿಯಮಾವಳಿಯಂತೆ ಶುಚಿತ್ವ ಮತ್ತು ಮಾಸ್ಕ್ ಕಡ್ಡಾಯ ಮುಂದುವರೆದಿದೆ. ಚಿತ್ರಮಂದಿರಗಳಲ್ಲಿ ಕೊರೋನಾ ಪೂರ್ವದಲ್ಲಿದ್ದಂತೆ ಪ್ರೇಕ್ಷಕರಿಗೆ ಸಿನೆಮಾ ನೋಡಲು ಅವಕಾಶವಿದ್ದರೂ, ಸಿನೆಮಾ ಪ್ರಿಯರು ಮಾತ್ರ ಕೊರೋನಾ ಕಾಲದ ಮನಸ್ಥಿತಿಯಲ್ಲೇ ಇದ್ದು, ಚಿತ್ರಮಂದಿರಗಳತ್ತ ಬರಲು ಇನ್ನೂ ಮನಸು ಮಾಡಿಲ್ಲ.