Don't Miss!
- Technology Itel: ಐಟೆಲ್ ಸೂಪರ್ ಗುರು 4G ಫೋನ್ ಲಾಂಚ್! ಯುಪಿಐ ಬೆಂಬಲ
- News ರಜನಿಕಾಂತ್, ವಿಜಯ್ ಸೇತುಪಥಿ, ಧನುಷ್.. ಯಾರೆಲ್ಲಾ ವೋಟ್ ಹಾಕಿದ್ರು?
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Automobiles Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
- Finance ಆಪ್ ಸ್ಟೋರ್ನಿಂದ ವಾಟ್ಸಾಪ್, ಥ್ರೆಡ್ ತೆಗೆದುಹಾಕಿದ ಆಪಲ್!
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದರ್ಶನ್ - ತರುಣ್ ಸುಧೀರ್ ಸಿನಿಮಾಗೆ ನಿರ್ಮಾಪಕರು ಸಿಕ್ಕರು
Recommended Video
ಕಿಚ್ಚ ಸುದೀಪ್ ಅವರ 'ಹೆಬ್ಬುಲಿ' ಸಿನಿಮಾವನ್ನು ನಿರ್ಮಾಣ ಮಾಡಿದ್ದ ನಿರ್ಮಾಪಕ ಉಮಾಪತಿ ಅದರ ನಂತರ 'ರಾಮಾ ರಾಮಾ ರೇ' ಖ್ಯಾತಿಯ ಡಿ.ಸತ್ಯ ಪ್ರಕಾಶ್ ಅವರ ಹೊಸ ಸಿನಿಮಾಗೆ ಬಂಡವಾಳ ಹಾಕಲು ಮುಂದಾಗಿದ್ದರು. ಇದರ ಜೊತೆಗೆ ದರ್ಶನ್ ಅವರ ಒಂದು ಸಿನಿಮಾವನ್ನು ಸಹ ನಿರ್ಮಾಪಕ ಉಮಾಪತಿ ಪ್ರೊಡ್ಯೂಸ್ ಮಾಡುತ್ತಾರೆ ಎನ್ನುವ ಸುದ್ದಿ ಇತ್ತು. ಆದರೆ ಈಗ ಅದು ಪಕ್ಕಾ ಆಗಿದೆ.
'ಕರಿಯ' ಸಿನಿಮಾದ ನಂತರ ದರ್ಶನ್ ಅವರಿಗೆ ಮತ್ತೊಮ್ಮೆ ಜೋಗಿ ಪ್ರೇಮ್ ನಿರ್ದೇಶನ ಮಾಡುತ್ತಾರೆ ಎನ್ನುವ ಮಾತಿತ್ತು. ಅದೇ ಚಿತ್ರವನ್ನು ಉಮಾಪತಿ ನಿರ್ಮಾಣ ಮಾಡಬೇಕಿತ್ತು. ಈ ಸಿನಿಮಾಗೆ 'ಆಂಜನೇಯ' ಎಂಬ ಹೆಸರು ಇಟ್ಟಿದ್ದಾರೆ ಎಂಬ ಗಾಸಿಪ್ ಇತ್ತು. ಆದರೆ ಈಗ ಪ್ಲಾನ್ ಬದಲಾಗಿದೆ. ಉಮಾಪತಿ ಈಗ ಜೋಗಿ ಪ್ರೇಮ್ ಬದಲು ನಿರ್ದೇಶಕ ತರುಣ್ ಸುಧೀರ್ ಅವರ ಸಿನಿಮಾಗೆ ಬಂಡವಾಳ ಹಾಕಲಿದ್ದಾರೆ.
'ಚೌಕ' ಸಿನಿಮಾದ ದೊಡ್ಡ ಯಶಸ್ಸಿನ ನಂತರ ತರುಣ್ ಸುಧೀರ್, ದರ್ಶನ್ ಜೊತೆಗೆ ಸಿನಿಮಾ ಮಾಡಲಿದ್ದಾರೆ. 'ಚೌಕ' ಸಿನಿಮಾದಲ್ಲಿ ವಿಶೇಷ ಪಾತ್ರ ಮಾಡಿದ್ದ ದರ್ಶನ್ ಅವರಿಗೆ ಮತ್ತೆ ತರುಣ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ದರ್ಶನ್ ಅವರ 53ನೇ ಸಿನಿಮಾವಾಗಿದೆ. ದರ್ಶನ್ ಅವರ ಈ ಸಿನಿಮಾ ಸದ್ಯದಲ್ಲಿಯೇ ಸೆಟ್ಟೆರಲಿದೆ. ಉಳಿದಂತೆ, ಸದ್ಯ 'ಕುರುಕ್ಷೇತ್ರ' ಸಿನಿಮಾದ ಡಬ್ಬಿಂಗ್ ನಲ್ಲಿ ದರ್ಶನ್ ಬಿಜಿ ಇದ್ದಾರೆ. ಅದರ ಜೊತೆ ಜೊತೆಗೆ 'ಯಜಮಾನ' ಸಿನಿಮಾದ ಚಿತ್ರೀಕರಣ ಬೇರೆ ನಡೆಯುತ್ತಿದೆ. ನಿರ್ಮಾಪಕ ಸಂದೇಶ್ ನಾಗರಾಜ್ ಬ್ಯಾನರ್ ನಲ್ಲಿ ಕೂಡ ದರ್ಶನ್ ಒಂದು ಸಿನಿಮಾ ಮಾಡುತ್ತಾರೆ.
ದರ್ಶನ್ ಹೊಸ ಚಿತ್ರದ ಸತ್ಯ ಬಿಚ್ಚಿಟ್ಟ ತರುಣ್ ಸುಧೀರ್