Don't Miss!
- News ಹುಬ್ಬಳ್ಳಿ ನೇಹಾ ಕೊಲೆ ಪ್ರಕರಣ: ಸಿದ್ದರಾಮಯ್ಯ ಸರ್ಕಾರವೇ ನೇರ ಹೊಣೆ ಎಂದ ಬಿಜೆಪಿ ಶಾಸಕ
- Lifestyle ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮುಕ್ತ ವಿವಿ ಪಿಎಚ್ ಡಿ ಪ್ರವೇಶ ಪರೀಕ್ಷೆ ಬರೆದ ಉಮಾಶ್ರೀ
ಕಲಾವಿದೆ ಕಮ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಅವರಿಗೆ ರಾಜ್ಯಶಾಸ್ತ್ರದ ಬಗ್ಗೆ ಎಲ್ಲಿಲ್ಲದ ಆಸಕ್ತಿ. ಅವರು ಈಗಾಗಲೆ ರಾಜ್ಯಶಾಸ್ತ್ರದಲ್ಲಿ ಎಂ.ಎ ಪದವಿಯನ್ನೂ ಪೂರೈಸಿದ್ದಾರೆ. ಈಗ ಅದೇ ವಿಷಯದಲ್ಲಿ ಪಿಎಚ್ ಡಿ ಮಾಡುವ ಸಲುವಾಗಿ ಪ್ರವೇಶ ಪರೀಕ್ಷೆ ಬರೆದಿದ್ದಾರೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರದ ಪಿಎಚ್ ಡಿ ಪ್ರವೇಶ ಪರೀಕ್ಷೆಗೆ ಹಾಜರಾಗುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು. ಮೈಸೂರಿನಲ್ಲಿ ಒಂದು ಕಡೆ ದಸರಾ ಸಂಭ್ರಮ ಇನ್ನೊಂದು ಕಡೆ ಉಮಾಶ್ರೀ ಅವರಿಗೆ ಪ್ರವೇಶ ಪರೀಕ್ಷೆ ಸವಾಲು.
ಇಬ್ಬರು ಗಣ್ಯರು ಪ್ರವೇಶ ಪರೀಕ್ಷೆ ಬರೆದದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಕರ್ನಾಟಕ ಮುಕ್ತ ವಿವಿ ಕುಲಪತಿ ಪ್ರೊ.ಎಂ.ಜಿ.ಕೃಷ್ಣನ್ ಮಾತನಾಡುತ್ತಾ, ಅವರೆಲ್ಲಿ ಮುಜುಗಕ್ಕೆ ಈಡಾಗುತ್ತಾರೋ ಎಂಬ ಕಾರಣಕ್ಕೆ ಅವರಿಗೆ ಶುಭ ಹಾರೈಸಲಿಲ್ಲ. ಪರೀಕ್ಷಾ ಕೊಠಡಿಗೆ ಹೋಗಿ ವೀಕ್ಷಿಸಿ ಬಂದೆ. ಪರೀಕ್ಷೆ ಮುಗಿದ ಬಳಿಕ ಅವರನ್ನು ಮಾತನಾಡಿಸಿದ್ದಾಗಿ ಹೇಳಿದ್ದಾರೆ.
ಈ ಹಿಂದೊಮ್ಮೆ ಪರೀಕ್ಷೆ ಬರೆದಿದ್ದಾಗ ಹೇಗೆ ಬರೆದಿರಿ? ಎಂದು ಕೇಳಿದ್ದಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ 36 ವರ್ಷಗಳ ನಂತರ ಎಂ.ಎ ಪರೀಕ್ಷೆಯನ್ನು ಬರೆಯುತ್ತಿದ್ದೇನೆ. ಆಗ ಎಸ್ಸೆಸ್ಸಿಲ್ಸಿ ಪರೀಕ್ಷೆಯಲ್ಲಿ ಶೇ.35ರಷ್ಟು ಅಂಕ ಪಡೆದು ಪಾಸಾಗಿದ್ದೆ. ಈಗ ಎಂ.ಎ ಪಾಸುಗುತ್ತೇನೆ ಎಂಬ ಗ್ಯಾರಂಟಿ ಇಲ್ಲ ಎಂದಿದ್ದರು!
ಸ್ನಾತಕೋತ್ತರ ಪದವಿಯನ್ನು ಮುಗಿಸಬೇಕು ಎಂದು ಹಲವಾರು ದಂಡಯಾತ್ರೆಗಳನ್ನು ಮಾಡಿದ್ದೇನೆ. ಮೂರು ಬಾರಿ ಪರೀಕ್ಷಾ ಶುಲ್ಕ ಕಟ್ಟಿ ಸಂಸಾರ, ರಾಜಕೀಯ ಬಾಧ್ಯತೆಗಳಿಂದ ಪರೀಕ್ಷೆಯನ್ನು ಬರೆಯಲಾಗಲಿಲ್ಲ.ಈ ಸಲ ಹೇಗಾದರೂ ಮಾಡಿ ಬರೆಯಲೇಬೇಕು ಎಂದು ತೀರ್ಮಾನಿಸಿದ ಕಾರಣ ಪರೀಕ್ಷೆ ಬರೆದೆ ಎಂದಿದ್ದರು.
'ಭಾರತೀಯ ರಾಜಕೀಯ ಚಿಂತನೆ' ಪತ್ರಿಕೆ ಬರೆದಾಗ ಅವರು ಹೇಳಿದ್ದು ಇನ್ನೂ ಮಜವಾಗಿತ್ತು, ನನ್ನನ್ನು ಗಾಂಧಿ, ಗೋಕಲೆ, ತಿಲಕ್ ಮತ್ತು ವಿವೇಕಾನಂದನೇ ಕಾಪಾಡಬೇಕು. ಪರೀಕ್ಷೆಗೆ ಕೇವಲ ಒಂದು ವಾರದಿಂದ ತಯಾರಿ ನಡೆಸಿದ್ದೆ. ಚೆನ್ನಾಗಿ ಓದಿಕೊಂಡಿದ್ದೇನೆ ಆದರೆ ಹಾಳಾದ್ದು ಒಂದೂ ನೆನಪಿರಲ್ಲ ಎಂದು ಹೇಳಿ ಚಕಿತಗೊಳಿಸಿದ್ದರು ಉಮಾಶ್ರೀ! (ಏಜೆನ್ಸೀಸ್)