Don't Miss!
- News 'ಚೆಂಬು' ಜಾಹೀರಾತಿನ ಮೂಲಕ ಮೋದಿ ಸರ್ಕಾರದ ವಿರುದ್ದ ನೇರ ದಾಳಿಗಿಳಿದ ಕಾಂಗ್ರೆಸ್
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಒಂದು ಹಾಡಿಗೆ ಚಿ.ಉದಯಶಂಕರ್ ಪಡೆಯುತ್ತಿದ್ದ ಸಂಭಾವನೆ ಕೇವಲ 200 ರೂಪಾಯಿ!
Recommended Video
ಇಂದು ಕನ್ನಡ ಚಿತ್ರರಂಗದ ಸಾಹಿತ್ಯ ರತ್ನ ಚಿ.ಉದಯಶಂಕರ್ ಅವರ ಹುಟ್ಟುಹಬ್ಬದ ಸವಿನೆನಪು. ಸಾವಿರಾರು ಹಾಡುಗಳನ್ನು ಬರೆದ ಈ ಸರಸ್ವತಿ ಪುತ್ರನ ಜನ್ಮದಿನ ಅಂಗವಾಗಿ ಅವರ ಬಗ್ಗೆ ಕೆಲವು ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೇವೆ.
ಚಿ.ಉದಯಶಂಕರ್ ಪೆನ್ ಹಿಡಿದು ಕುಳಿತರೆ ಬರೆದು ಬರೆದು ಕೊಡುತ್ತಿದ್ದರಂತೆ. ಯಾವಾಗಲೂ ಒಂದು ಸಣ್ಣ ಪೇಪರ್ ತುಂಡಿನಲ್ಲಿ ಅವರು ಬರೆಯುತ್ತಿದ್ದರಂತೆ. ಅವರು ಕೊಟ್ಟ ಹಾಡಿನಲ್ಲಿ ಯಾವುದನ್ನು ಇಟ್ಟುಕೊಳ್ಳಬೇಕು ಯಾವುದನ್ನು ಬಿಡಬೇಕು ಅಂತ ನಿರ್ದೇಶಕರಿಗೆ ಗೊತ್ತಾಗುತಿರಲಿಲ್ಲವಂತೆ. ಅದ್ಬುತ ಸಾಲುಗಳನ್ನು ಹೊಂದಿರುವ ಸಾಹಿತ್ಯದಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ನಿರ್ದೇಶಕರಿಗೆ ತಿಳಿಯದಾಗುತ್ತಿಂತೆ.
ಅಣ್ಣಾವ್ರ 'ಭಾಗ್ಯವಂತರು' ಸಿನಿಮಾ ಹುಟ್ಟಿದ ರೋಚಕ ಕಥೆ ಹೇಳಿದ ಭಾರ್ಗವ
ಉದಯ ಶಂಕರ್ ಹಾಡಿಗಳನ್ನು ಅತಿ ವೇಗವಾಗಿ ಬರೆಯುತ್ತಿದ್ದರು. ''ಆಡಿಸಿ ನೋಡು ಬೀಳಿಸಿ ನೋಡು..'' ಹಾಡನ್ನು ಕೇವಲ 5 ನಿಮಿಷದಲ್ಲಿ, ''ನಲಿವ ಗುಲಾಬಿ ಹೂವೆ..'' ಹಾಡನ್ನು 10 ನಿಮಿಷದಲ್ಲಿ ಬರೆದಿದ್ದರಂತೆ. ನಿರ್ಮಾಪಕರೊಬ್ಬರು ಒಂದು ನಮಗೆ ಮಲ್ಲಿಗೆ ಹೂವಿನ ರೀತಿಯ ಒಂದು ಸುಂದರ ಹಾಡನ್ನು ಬರೆದು ಕೊಡಿ ಎಂದಾಗ ಕ್ಷಣದಲ್ಲಿಯೇ 'ಆಹಾ.. ಮೈಸೂರು ಮಲ್ಲಿಗೆ...' ಹಾಡನ್ನು ರಚಿಸಿದರಂತೆ. ಈಗ ಒಂದು ಹಾಡು ಬರೆದು ಕೊಟ್ಟರೆ ನೀವು ಕೇಳಿದನ್ನು ಕೋಡುತ್ತೇವೆ ಎಂದಾಗ ಪಟ್ ಅಂತ ಪೆನ್ ಹಿಡಿದು 'ಏನೇ ಕೇಳು ಕೊಡುವೆ ನಿನಗೆ ನಾನಿಗ..' ಹಾಡನ್ನು ಬರೆದರಂತೆ.
ಇನ್ನು ಸಾವಿರಾರು ಸೂಪರ್ ಹಿಟ್ ಹಾಡುಗಳನ್ನು ಬರೆದ ಚಿ.ಉದಯಶಂಕರ್ ಒಂದು ಹಾಡಿಗೆ ಎಷ್ಟು ಸಂಭಾವನೆ ಪಡೆಯುತ್ತಿದ್ದರು ಎನ್ನುವ ಕುತೂಹಲ ಎಲ್ಲರಿಗೆ ಇರುತ್ತದೆ. ಅಷ್ಟು ದೊಡ್ಡ ಸಾಹಿತಿ ಆಗಿದ್ದ ಅವರು ಒಂದು ಹಾಡಿಗೆ ತೆಗೆದುಕೊಳ್ಳುತ್ತಿದ್ದು ಕೇವಲ 200 ರೂಪಾಯಿ ಅಂತೆ. ದೊಡ್ಡ ಸಿನಿಮಾವಾದರೂ 200 ರೂಪಾಯಿ ಪಡೆದು ಹಾಡು ಬರೆಯುತ್ತಿದ್ದರಂತೆ ಉದಯ ಶಂಕರ್.