Don't Miss!
- News Neha Hiremath: ಸಿದ್ದರಾಮಯ್ಯ ಹೇಳಿಕೆಗೆ ಕಾಂಗ್ರೆಸ್ ಕಾರ್ಪೊರೇಟರ್ ನೇಹಾ ತಂದೆ ಆಕ್ರೋಶ
- Sports IPL 2024: ಐಪಿಎಲ್ನಲ್ಲಿ ಉಮೇಶ್ ಯಾದವ್ ಅವರ ವಿಶೇಷ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Finance ಇಳಿಕೆ ಕಂಡ ನೆಸ್ಲೆ ಇಂಡಿಯಾ ಷೇರು: ಸೆರೆಲಾಕ್ನಲ್ಲಿ ಸಕ್ಕರೆ ಬಗ್ಗೆ ಸಂಸ್ಥೆಯ ಸ್ಪಷ್ಟನೆ ಏನು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿರೀಕ್ಷೆ ಹುಸಿ: ಚಿತ್ರಮಂದಿರಗಳ ತೆರೆಯಲು ಅವಕಾಶ ಇಲ್ಲ
ಆಗಸ್ಟ್ 1 ರಿಂದ ಚಿತ್ರಮಂದಿರಗಳು ತೆರೆಯಲು ಅವಕಾಶ ನೀಡಲಾಗುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ.
Recommended Video
ಕೇಂದ್ರ ಸರ್ಕಾರ ಬುಧವಾರ ಹೊರಡಿಸಿದ ಅನ್ಲಾಕ್ 3.0 ನಿಯಮಾವಳಿಗಳ ಅನುಸಾರ ಚಿತ್ರಮಂದಿರಗಳು ಇನ್ನೂ ತೆರೆಯುವಂತಿಲ್ಲ.
ಸತತ ಐದು ತಿಂಗಳಿಗೂ ಹೆಚ್ಚು ಕಾಲದಿಂದ ಚಿತ್ರಮಂದಿರಗಳು ಬಾಗಿಲು ಮುಚ್ಚಿವೆ. ಮೂರನೇ ಹಂತದ ಅನ್ಲಾಕ್ ವೇಳೆಗೆ ಚಿತ್ರಮಂದಿರಗಳ ತೆರವಿಗೆ ಅನುಮತಿ ನೀಡಲಾಗುತ್ತದೆ ಎಂದು ಬಹುಮಂದಿ ನಿರೀಕ್ಷೆ ಇರಿಸಿದ್ದರು. ಆದರೆ ಅದು ಹುಸಿಯಾಗಿದೆ.
ಗೃಹ ಇಲಾಖೆಗೆ ಶಿಫಾರಸ್ಸು ನೀಡಲಾಗಿತ್ತು
ಆಗಸ್ಟ್ 31 ರ ಒಳಗೆ ಚಿತ್ರಮಂದಿರಗಳನ್ನು ತೆರೆಯಲು ಅಡ್ಡಿಯಿಲ್ಲವೆಂಬ ಶಿಫಾರಸ್ಸನ್ನು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಇಲಾಖೆಯು ಕೇಂದ್ರ ಗೃಹ ಇಲಾಖೆ ನೀಡಿತ್ತು. ಇದೇ ಶಿಫಾರಸ್ಸಿನ ಆಧಾರದ ಮೇಲೆ ಚಿತ್ರಮಂದಿರಗಳು ತೆರೆಯುತ್ತವೆಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು.
ಕಠಿಣ ನಿಯಮ ಹೇರುವ ನಿರೀಕ್ಷೆ ಇತ್ತು
ಸಾಲುಗಳ ನಡುವೆ ಅಂತರ ಬಿಟ್ಟು, ಸೀಟುಗಳ ನಡುವೆ ಅಂತರ ಬಿಟ್ಟು ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ನೀಡಲಾಗುತ್ತದೆ ಎಂದೇ ಬಹುತೇಕರ ನಿರೀಕ್ಷೆ ಆಗಿತ್ತು. ಆದರೆ ಕೇಂದ್ರ ಸರ್ಕಾರವು ಚಿತ್ರಮಂದಿರ ಮಾಲೀಕರ ನಿರೀಕ್ಷೆ ಹುಸಿ ಮಾಡಿದೆ.
ಆಗಸ್ಟ್ ಅಂತ್ಯದ ವರೆಗೆ ನಿರೀಕ್ಷೆ
ಇನ್ನು ಚಿತ್ರಮಂದಿರಗಳನ್ನು ತೆರೆಯಲು ಬಹುತೇಕ ಆಗಸ್ಟ್ ಅಂತ್ಯದ ವರೆಗೆ ಕಾಯಲೇ ಬೇಕಾಗಿದೆ. ಆ ವೇಳೆಗೆ ಕೊರೊನಾ ತುಸುವಾದರೂ ನಿರೀಕ್ಷೆಗೆ ಬಂದರಷ್ಟೆ ಚಿತ್ರಮಂದಿರಗಳನ್ನು ತೆರೆಯುವ ಅನುಮತಿ ಕೇಂದ್ರದಿಂದ ಸಿಗುವ ಸಾಧ್ಯತೆ ಇದೆ.
ಮೆಟ್ರೋ ಸಂಚಾರಕ್ಕೂ ಅವಕಾಶವಿಲ್ಲ
ಚಿತ್ರಮಂದಿರ ಮಾತ್ರವಲ್ಲದೆ, ಮೆಟ್ರೋ ಸಂಚಾರ, ಧಾರ್ಮಿಕ ಹಾಗೂ ಇನ್ನಿತರೆ ಕಾರ್ಯಕ್ರಮಗಳ ಆಯೋಜನೆ. ಕ್ರೀಡಾಕೂಟಗಳ ಆಯೋಜನೆಗಳನ್ನು ಬಂದ್ ಇಡುವಂತೆ ಸರ್ಕಾರ ಹೇಳಿದೆ. ಜಿಮ್ಗಳು ತೆರೆಯಲು ಅವಕಾಶ ನೀಡಲಾಗಿದೆ. ಜೊತೆಗೆ ರಾತ್ರಿ ಕರ್ಪ್ಯೂವನ್ನು ತೆರೆವುಗೊಳಿಸಿದೆ.