Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಪೈಲ್ವಾನ್' ಅಬ್ಬರ ಮುಗಿಯುತ್ತಿದ್ದಂತೆ, ಶುರುವಾಗಲಿದೆ ಇವರ ಆಟ
Recommended Video
ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ದೇಶಾದ್ಯಂತ ಅದ್ಧೂರಿಯಾಗಿ ತೆರೆಕಂಡಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗಿದೆ. ಕೆಜಿಎಫ್, ಕುರುಕ್ಷೇತ್ರ ಈಗ ಪೈಲ್ವಾನ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಅಪ್ಪಳಿಸಿದೆ.
ಅಂತೂ ಇಂತೂ ಬಹಳ ಕಾತುರದಿಂದ ಕಾಯುತ್ತಿದ್ದ ಪೈಲ್ವಾನ್ ಕೂಡ ಮುಗಿತು. ದರ್ಶನ್, ಸುದೀಪ್, ಯಶ್, ಶಿವಣ್ಣ ಸಿನಿಮಾ ಕೂಡ ಬಂದು ಹೋಗಿದೆ. ಈಗ ಬಾಕಿ ಇರುವ ಚಿತ್ರಗಳ ಸರದಿ. ಈಗ ಮುಂದಿನ ಚಿತ್ರಗಳ ಬಗ್ಗೆ ಲೆಕ್ಕಾಚಾರ ಆರಂಭವಾಗಲಿದೆ.
'ಪೈಲ್ವಾನ್' ಟ್ವಿಟ್ಟರ್ ವಿಮರ್ಶೆ: ಮೊದಲ ಶೋ ನೋಡಿದ ಪ್ರೇಕ್ಷಕರು ಹೇಳಿದ್ದೇನು?
ಹಾಗ್ನೋಡಿದ್ರೆ, ಪೈಲ್ವಾನ್ ಸಿನಿಮಾ ಬಳಿಕ ಬರಲಿರುವ ದೊಡ್ಡ ಚಿತ್ರಗಳು ಯಾವುದು? ಯಾವ ಸಿನಿಮಾ ಯಾವ ಕಾರಣಕ್ಕಾಗಿ ಕುತೂಹಲ ಮೂಡಿಸಿದೆ ಎಂಬುದರ ಬಗ್ಗೆ ಒಂದು ಸಣ್ಣ ಮುನ್ನೋಟ. ಮುಂದೆ ಓದಿ....
ಪುನೀತ್ 'ಯುವರತ್ನ'
ನಟಸಾರ್ವಭೌಮ ಚಿತ್ರದ ಬಳಿಕ ಪುನೀತ್ ಅಭಿನಯದ ಸಿನಿಮಾ ಯುವರತ್ನ. ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಬರುತ್ತಿರುವ ಈ ಚಿತ್ರಕ್ಕಾಗಿ ಸ್ಯಾಂಡಲ್ ವುಡ್ ಕಾಯುತ್ತಿದೆ. ಬಹುಶಃ ಈ ಸಿನಿಮಾ ಮುಂದಿನ ವರ್ಷದ ಆರಂಭಕ್ಕೆ ಬರುವ ಸಾಧ್ಯತೆ ಇದೆ.
ಕೆಜಿಎಫ್, ಕುರುಕ್ಷೇತ್ರದ ಮುಂದೆ ಗೆದ್ದು ನಿಲ್ಲಲೇಬೇಕಿದೆ ಪೈಲ್ವಾನ್
ಶ್ರೀಮುರಳಿ 'ಭರಾಟೆ'
ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಭರಾಟೆ ಭಾರಿ ಸದ್ದು ಮಾಡ್ತಿದೆ. ಚೇತನ್ ಕುಮಾರ್ ನಿರ್ದೇಶನ ಮಾಡಿರುವ ಈ ಚಿತ್ರ ಈಗಾಗಲೇ ಹಾಡುಗಳ ಮೂಲಕ ಅಬ್ಬರಿಸುತ್ತಿದೆ. ಬಹುತೇಕ ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಜ್ಜಾಗುತ್ತಿದೆ. ಎಲ್ಲ ಅಂದುಕೊಂಡಂತೆ ಆದರೆ ಮುಂದಿನ ತಿಂಗಳು ಚಿತ್ರಮಂದಿರಕ್ಕೆ ಬರಲಿದೆ.
ಪ್ಯಾನ್ ಇಂಡಿಯಾ ಮಾಡೋರು ಎರಡು ವಿಷಯದಲ್ಲಿ ರೆಡಿ ಇರಬೇಕು: ಸುದೀಪ್
ಧ್ರುವ ಸರ್ಜಾ 'ಪೊಗರು'
ಭರ್ಜರಿ ಸಿನಿಮಾ ಬಳಿಕ ಮತ್ತೆ ಗ್ಯಾಪ್ ಪಡೆದುಕೊಂಡಿರುವ ಧ್ರುವ ಸರ್ಜಾ ಪೊಗರು ಚಿತ್ರದ ಮೂಲಕ ಬರಲಿದ್ದಾರೆ. ಆದರೆ, ಪೊಗರು ಚಿತ್ರೀಕರಣ ಮಾಡುತ್ತಲೇ ಇದೆ. ಸದ್ಯಕ್ಕೆ ಈ ಸಿನಿಮಾದ ಬಿಡುಗಡೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ, ನಿರೀಕ್ಷೆಯ ಚಿತ್ರಗಳ ಪೈಕಿ ಪೊಗರು ಮೊದಲ ಸಾಲಿನಲ್ಲಿದೆ.
ಸುದೀಪ್ 'ಪೈಲ್ವಾನ್' ನೋಡಲು ಈ 6 ಕಾರಣಗಳು ಸಾಕು
ಅವನೇ ಶ್ರೀಮನ್ನಾರಾಯಣ
ಕಿರಿಕ್ ಪಾರ್ಟಿ ಬಳಿಕ ಯಾವ ಚಿತ್ರದಲ್ಲೂ ನಟಿಸದ ರಕ್ಷಿತ್ ಶೆಟ್ಟಿ ಅವನೇ ಶ್ರೀಮನ್ನಾರಾಯಣನಾಗಿ ಬರುತ್ತಿದ್ದಾರೆ. ಐದು ಭಾಷೆಯಲ್ಲಿ ಬರಲು ಸಜ್ಜಾಗಿರುವ ಈ ಚಿತ್ರ ರಿಲೀಸ್ ಗೆ ರೆಡಿಯಾಗಿದೆ. ಆದರೆ, ಯಾವಾಗ ಎಂಬುದರ ಸುಳಿವು ಬಿಟ್ಟುಕೊಟ್ಟಿಲ್ಲ. ಸಚಿನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಶಾನ್ವಿ ಶ್ರೀವಾಸ್ತವ್ ನಾಯಕಿಯಾಗಿದ್ದಾರೆ.
ಉಳಿದ ಚಿತ್ರಗಳ ಸದ್ಯಕ್ಕಿಲ್ಲ
ಗಣೇಶ್ ಅಭಿನಯದ ಗೀತಾ ಸದ್ಯದಲ್ಲೇ ಬರಲಿದೆ. ದುನಿಯಾ ವಿಜಯ್ ನಿರ್ದೇಶನ ಸಲಗ ಶೂಟಿಂಗ್ ಆಗ್ತಿದೆ. ಶಿವಣ್ಣನ ಆಯುಷ್ಮಾನ್ ಭವ, ದ್ರೋಣ ರೆಡಿಯಾಗಿದೆ. ಕೋಟಿಗೊಬ್ಬ 3, ಒಡೆಯ, ರಾಬರ್ಟ್ ಇನ್ನು ತಡವಾಗಬಹುದು. ಕೆಜಿಎಫ್ ಚಾಪ್ಟರ್-2 ಮುಂದಿನ ವರ್ಷದ ಮಧ್ಯ ಅಥವಾ ಅಂತ್ಯದಲ್ಲಿ. ಈ ಚಿತ್ರಗಳನ್ನ ಬಿಟ್ಟು ಇನ್ನು ಕೆಲವು ಸಿನಿಮಾಗಳು ಸೈಲೆಂಟ್ ಆಗಿ ಮೋಡಿ ಮಾಡಲು ಸಜ್ಜಾಗಿದೆ.