Don't Miss!
- News Bengaluru Heat: ಏ.25 ರಂದು ನಗರದಲ್ಲಿ ಅತ್ಯಧಿಕ ತಾಪಮಾನ: 12 ವರ್ಷಗಳ ದಾಖಲೆ ಉಡೀಸ್
- Lifestyle ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Big News: ಅಲ್ಲು ಅರ್ಜುನ್ 'ಪುಷ್ಪ' ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ!
ತೆಲುಗು ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯಿಸುತ್ತಿರುವ ಪುಷ್ಪ ಸಿನಿಮಾ ಸೌತ್ ಇಂಡಸ್ಟ್ರಿಯಲ್ಲಿ ಭಾರಿ ಸದ್ದು ಮಾಡ್ತಿದೆ. ರೌಡಿಸಂ ಕಥೆಯಾಧರಿತ ಚಿತ್ರ ಎಂದು ಹೇಳಲಾಗುತ್ತಿದ್ದು, ಅಲ್ಲು ಅರ್ಜುನ್ ಫಸ್ಟ್ ಲುಕ್ ಸಹ ಧೂಳೆಬ್ಬಿಸುತ್ತಿದೆ.
Recommended Video
ಈ ಸಿನಿಮಾ ಕರ್ನಾಟಕದ ಪಾಲಿಗೆ ಸರ್ಪ್ರೈಸ್ ಆಗುವ ಎಲ್ಲ ಸೂಚನೆ ಸಿಗುತ್ತಿದೆ. ಯಾಕಂದ್ರೆ, ರಿಯಲ್ ಸ್ಟಾರ್ ಉಪೇಂದ್ರ ಅವರಗೆ ಪುಷ್ಪ ಸಿನಿಮಾದ ಆಫರ್ ಬಂದಿದೆಯಂತೆ. ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸುವಂತೆ ಕೇಳಲಾಗಿದೆ. ಈ ವಿಚಾರವನ್ನು ಸ್ವತಃ ಉಪೇಂದ್ರ ಹೇಳಿದ್ದಾರೆ.
ಅಲ್ಲು ಅರ್ಜುನ್ ಚಿತ್ರದಲ್ಲಿ ನಟಿಸಲಿದ್ದಾರೆಯೇ ಧನಂಜಯ್?: 'ಡಾಲಿ'ಗೆ ಬಂದ ಭರ್ಜರಿ ಆಫರ್
ಉಪೇಂದ್ರ ಅವರಿಗೂ ಮುಂಚೆ ಮತ್ತೊಬ್ಬ ಕನ್ನಡ ನಟನ ಹೆಸರು ಈ ಚಿತ್ರದಲ್ಲಿ ಕೇಳಿ ಬಂದಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಚಿತ್ರತಂಡವೇ ನೀಡಬೇಕಿದೆ. ಇನ್ನು 'ಸೂಪರ್ ಸ್ಟಾರ್' ಚಿತ್ರದ ಟೈಟಲ್ ಅನಾವರಣ ಮಾಡಿದ ಉಪೇಂದ್ರ, ಪುಷ್ಪ ಸಿನಿಮಾದ ಆಓರ್ ಕುರಿತು ಬಹಿರಂಗಪಡಿಸಿದ್ದಾರೆ. ಏನಂದ್ರು? ಮುಂದೆ ಓದಿ...
ಪುಷ್ಪ ಆಫರ್ ಬಂದಿರುವುದು ನಿಜಾ!
ಅಲ್ಲು ಅರ್ಜುನ್ ಚಿತ್ರದಲ್ಲಿ ನಟಿಸುವಂತೆ ಉಪೇಂದ್ರ ಅವರನ್ನ ಕೇಳಲಾಗಿದೆ. ಇದುವರೆಗೂ ಉಪ್ಪಿ ಈ ಬಗ್ಗೆ ಒಲವು ತೋರಿಸಿಲ್ಲ. ಸದ್ಯದ ಮಾಹಿತಿ ಪ್ರಕಾರ, ಉಪೇಂದ್ರ ಪುಷ್ಪ ಚಿತ್ರವನ್ನು ಒಪ್ಪಿಕೊಂಡಿಲ್ಲ. ಆದರೆ, ಇನ್ನೊಂದು ತೆಲುಗು ಸಿನಿಮಾದಲ್ಲಿ ನಟಿಸುವುದಾಗಿ ಹೇಳಿದ್ದಾರೆ.
ಪಾತ್ರ ಇಷ್ಟ ಆದ್ರೆ ಮಾತ್ರ ಮಾಡೋದು
''ವರ್ಷಕ್ಕೆ ಎರಡು ಅಥವಾ ಮೂರು ಸಿನಿಮಾ ಆಫರ್ ಬರುತ್ತೆ. ಮೊದಲಿನಿಂದಲೂ ಅವಕಾಶ ಬರುತ್ತಲೇ ಇದೆ. ಪುಷ್ಪ ಚಿತ್ರಕ್ಕೂ ಕೇಳ್ತಿದ್ದಾರೆ. ಆದರೆ, ಎಲ್ಲ ಚಿತ್ರವನ್ನು ನಾನು ಮಾಡಲ್ಲ. ನನಗೆ ಅದು ಇಷ್ಟ ಆಗ್ಬೇಕು, ಏನೋ ಇದೆ ಅನಿಸುಬೇಕು. ಸನ್ ಆಫ್ ಸತ್ಯಮೂರ್ತಿಯ ಆ ಕ್ಯಾರೆಕ್ಟರ್ ಇಷ್ಟ ಆಯ್ತು. ಬಾಕ್ಸರ್ ಅಂತ ಇನ್ನೊಂದು ಸಿನಿಮಾ ಮಾಡ್ತಿದ್ದೀನಿ. ಐದು ಅಥವಾ ಹತ್ತು ನಿಮಿಷ ಬರುತ್ತೆ, ವಿಶೇಷ ಪಾತ್ರ'' ಎಂದು ಹೇಳಿದರು.
'ಪುಷ್ಪ' ಚಿತ್ರದಲ್ಲಿ ಧನಂಜಯ್ ಹೆಸರು!
ಪುಷ್ಪ ಚಿತ್ರದ ಪ್ರಮುಖ ಪಾತ್ರಕ್ಕೆ ಧನಂಜಯ್ ಅವರ ಹೆಸರು ಸಹ ಕೇಳಿ ಬಂದಿದೆ. ಮೂಲಗಳ ಪ್ರಕಾರ, ಮಾತುಕತೆ ಸಹ ಆಗಿದೆ ಎನ್ನಲಾಗಿದೆ. ಈಗಾಗಲೇ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ತೆಲುಗು ಸಿನಿಮಾ 'ಭೈರವಗೀತಾ'ದಲ್ಲಿ ಧನಂಜಯ್ ನಟಿಸಿದ್ದಾರೆ. ಒಂದು ವೇಳೆ ಪುಷ್ಪ ಚಿತ್ರವೂ ಓಕೆ ಆದರೆ ಟಾಲಿವುಡ್ನಲ್ಲಿ ಡಾಲಿಯ ಹವಾ ಇನ್ನೂ ಸ್ವಲ್ಪ ಜೋರಾಗಲಿದೆ.
ಸಂಭಾವನೆ ವಿಚಾರಕ್ಕೆ ಭಾರಿ ಸುದ್ದಿ!
ಪುಷ್ಪ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಸುಕುಮಾರ್ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಸುನೀಲ್ ಶೆಟ್ಟಿ, ಬಾಬಿ ಸಿಂಹ, ರಾಜ್ ದೀಪಕ್ ಶೆಟ್ಟಿಯ ಹೆಸರುಗಳು ಸಹ ಸದ್ದು ಮಾಡ್ತಿದೆ. ಕನ್ನಡ ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗುವ ಸಾಧ್ಯತೆ ಹೆಚ್ಚಿದೆ. ಈ ನಡುವೆ ಸುಕುಮಾರ್ ಈ ಚಿತ್ರಕ್ಕಾಗಿ 20 ಕೋಟಿ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.