Don't Miss!
- News Bengaluru-Tumkur Metro: 52.41 ಕಿ.ಮೀ. ಮಾರ್ಗ, 19 ನಿಲ್ದಾಣಗಳು; ತುಮಕೂರು-ಬೆಂಗಳೂರು ಮೆಟ್ರೋ ಅಪ್ಡೇಟ್
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಮ್ಮ ರಾಶಿಫಲ ನೆನೆದು ಹಣೆಚಚ್ಚಿಕೊಂಡ ಉಪೇಂದ್ರ
ಶ್ರೀನಿವಾಸ ಮೂರ್ತಿ ಅವರ ಈ ಹೇಳಿಕೆಗೆ ಜಯಮೃತ್ಯುಂಜಯ ಶ್ರೀಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ದಯವಿಟ್ಟು ಬಸವಣ್ಣ ಅವರಿಗೂ ಜನಿವಾರಕ್ಕೂ ಥಳುಕು ಹಾಕಬೇಡಿ. ಸಮಸ್ಯೆಯನ್ನು ತಿಳಿಗೊಳಿಸುವುದಕ್ಕಿಂತಲೂ ಇವರ ಮಾತುಗಳು ಬೆಂಕಿಗೆ ತುಪ್ಪ ಸುರಿಯುವಂತಿವೆ ಎಂಬ ಎಚ್ಚರಿಕೆಯನ್ನು ಕೊಟ್ಟರು.
ಇದಕ್ಕೆ ಪ್ರತಿಯಾಗಿ ಮಾತನಾಡಿದ ಶ್ರೀನಿವಾಸ ಮೂರ್ತಿ ಅವರು, "ನಾನು ಜನಿವಾರ ಹಾಕುತ್ತೇನೆ. ಆದರೆ ಜನಿವಾರ ಹಾಕಿಕೊಂಡ ಎಷ್ಟೋ ಜನರು ತಪ್ಪು ಮಾಡುತ್ತಿದ್ದಾರೆ. ಆ ರೀತಿಯ ವ್ಯಕ್ತಿಗಳ ಬಗ್ಗ್ಗೆ ಮಾತನಾಡುತ್ತಿದ್ದೇನೆ ಅಷ್ಟೇ" ಎಂದರು.
ಈ ಶೀರ್ಷಿಕೆಯಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ನಾವು ಬದಲಾಯಿಸಿಕೊಳ್ಳುತ್ತೇವೆ. ನಾನು ಡೈರೆಕ್ಟರ್ ಹಾಗೂ ನಿರ್ಮಾಪಕರ ಜೊತೆ ಮಾತನಾಡಿ ಟೈಟಲ್ ಬದಲಾವಣೆಗೆ ಸೂಚಿಸುತ್ತೇನೆ ಎಂಬ ಭರವಸೆಯನ್ನು ನೀಡಿದರು.
ಈ ಹಿಂದೆ ಯಮನ ಬಗ್ಗೆ ಭಾರತದಲ್ಲಿ ತುಂಬಾ ಚಿತ್ರಗಳು ಬಂದಿವೆ. ಕನ್ನಡದಲ್ಲಿ ನಾವು ಒಂದು ಚಿತ್ರ ಮಾಡಿದೆವು. ಅದು ಕಠಾರಿವೀರ ಸುರಸುಂದರಾಂಗಿ ಚಿತ್ರ. ಕೆಲವರು 'ನಾರದ ವಿಜಯ', 'ಯಮಲೋಕದಲ್ಲಿ ವೀರಪ್ಪನ್' ಎಂಬ ಚಿತ್ರಗಳನ್ನು ಮಾಡಿದರು. ಆ ಚಿತ್ರಗಳ ಬಗ್ಗೆ ಯಾರೂ ಮಾತನಾಡಲಿಲ್ಲ. ಕಠಾರಿವೀರ ಚಿತ್ರದ ಬಗ್ಗೆ ಮಾತ್ರ ಆಕ್ಷೇಪ ವ್ಯಕ್ತಪಡಿಸಿದರು.
ಅದೇನು ಮಾಡ್ತೀರಾ ನನ್ನ ರಾಶಿಫಲನೇ ಆ ರೀತಿ ಇದೆಯೇನೋ ಎನ್ನಿಸುತ್ತದೆ ಎಂದು ನಗುತ್ತಾ ಹೇಳಿದರು. ಅದಕ್ಕೇ ಇರಬೇಕು ಬೇರೆ ಯಾವ ಹೆಸರು ಬೇಡ ಎಂದು 'ಉಪೇಂದ್ರ' ಹೆಸರಲ್ಲೇ ಚಿತ್ರ ಮಾಡಿದೆ ಎಂಬ ಮಾತನ್ನು ಒಪ್ಪಿಕೊಂಡರು. ಈ ರೀತಿಯ ದೊಡ್ಡ ದೊಡ್ಡ ವ್ಯಕ್ತಿಗಳ ಹೆಸರನ್ನಿಟ್ಟು ಆ ಮೂಲಕ ಒಳ್ಳೆಯದನ್ನೇ ಹೇಳಲು ಹೊರಡುತ್ತೇವೆಯೇ ಹೊರತು ಕೆಟ್ಟದು ಹೇಳಲು ಯಾರಿಗಾದರೂ ಈ ಜಗತ್ತಿನಲ್ಲಿ ಗುಂಡಿಗೆ ಇದೆಯೇ? ಎಂದು ಪ್ರಶ್ನಿಸಿದರು.
'ಬಸವಣ್ಣ' ಅವರ ವಚನಗಳನ್ನು ಕೇಳುತ್ತಾ ಬೆಳೆದವರು ನಾವೆಲ್ಲಾ. ಇಡೀ ಪ್ರಚಂಚಕ್ಕೇ ಗೊತ್ತಿರುವ ವ್ಯಕ್ತಿ ಬಸವಣ್ಣ. ಅವರ ಬಗ್ಗೆ ನಾವು ಕೆಟ್ಟ ಚಿತ್ರ ತೆಗೆಯಲು ಹೇಗೆ ಮನಸ್ಸು ಬರುತ್ತದೆ. ಒಂದು ವೇಳೆ ಎಲ್ಲರ ಮನಸ್ಸಿಗೆ ನೋವಾಗುತ್ತದೆ ಎನ್ನುವುದಾದರೆ ಶೀರ್ಷಿಕೆ ಬದಲಾಯಿಸೋಣ ಬಿಡಿ ಎಂದು ಹೇಳಿ ವಿವಾದಕ್ಕೆ ಫುಲ್ ಸ್ಟಾಪ್ ಇಟ್ಟರು.