Don't Miss!
- Sports 'ಟಿ20 ವಿಶ್ವಕಪ್ಗೆ ಈತನನ್ನು ಆಯ್ಕೆ ಮಾಡಿ'; ಅಜಿತ್ ಅಗರ್ಕರ್ಗೆ ಬಂತು ದೊಡ್ಡ ಮನವಿ!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- News Realme Narzo 70: ಭರ್ಜರಿ ಕ್ಯಾಮೆರಾ ಫೀಚರ್ಗಳೊಂದಿಗೆ ರಿಯಲ್ಮಿ ನಾರ್ಜೊ 70 ಗ್ರ್ಯಾಂಡ್ ಲಾಂಚ್
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉಪೇಂದ್ರ ಅವರಿಗೋಸ್ಕರ ಈ ಹುಚ್ಚು ಅಭಿಮಾನಿ ಏನೆಲ್ಲಾ ಮಾಡಿದ್ದಾನೆ ನೋಡಿ....
ಉಪೇಂದ್ರ ತಮ್ಮ 'ಉಪ್ಪಿ 2' ಸಿನಿಮಾದ ಹಾಡಿನಲ್ಲಿ ನನ್ನ ಫ್ಯಾನ್ಸ್ 'ಹುಚ್ಚು ಸ್ವಾಭಿಮಾನಿಗಳು' ಅಂತ ಹೇಳಿದ್ದಾರೆ. ಅದೇ ಮಾತು ಈಗ ಸಾಬೀತು ಆಗಿದೆ. ಉಪೇಂದ್ರ ಅವರ ಹುಚ್ಚು ಅಭಿಮಾನಿ ಅವರಿಗೋಸ್ಕರ ಏನೆಲ್ಲ ಮಾಡಿದ್ದಾನೆ ಅಂತ ಕೇಳಿ ಸ್ವತಃ ಉಪೇಂದ್ರ ಅವರೇ ಶಾಕ್ ಆಗಿದ್ದಾರೆ.
ಉಪೇಂದ್ರ ದಂಪತಿ ಬಗ್ಗೆ ಕಾಮೆಂಟ್ ಮಾಡಿದ ರಾಗಿಣಿ
ಲೋಹಿತ್ ಎಂಬ ಯುವಕ ಉಪೇಂದ್ರ ಅವರ ದೊಡ್ಡ ಭಕ್ತ. ಇತ್ತೀಚಿಗಷ್ಟೆ ಆತನಿಗೆ ಉಪ್ಪಿ ಅವರನ್ನು ನೋಡುವ ಭಾಗ್ಯ ಕೂಡ ಸಿಕ್ಕಿದೆ. ಆಗ ಉಪೇಂದ್ರ ಅವರ ಬಳಿ ಕೈ ಮೇಲೆ ಆಟೋಗ್ರಾಫ್ ಹಾಕಿಸಿಕೊಂಡಿದ್ದ ಈ ಹುಡುಗ ನಂತರ ಅದರ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾನೆ. ಜೊತೆಗೆ ಸಕ್ಕರೆ ಕಾಯಿಲೆ ಇರುವ ಈ ಯುವಕ ಡಾಕ್ಟರ್ ಎಷ್ಟು ಹೇಳಿದರೂ ಅದನ್ನು ತಲೆಕೆಡಿಸಿಕೊಳ್ಳದೆ ತನ್ನ ಎದೆ ಮೇಲೆ ಉಪ್ಪಿ ಮುಖದ ಟ್ಯಾಟೂ ಹಾಕಿಸಿಕೊಂಡಿದ್ದಾನೆ.
ಭೀಮನ ಅಮಾವಾಸ್ಯೆ: ಪತಿಯ ಪೂಜೆ ಮಾಡಿದ ಪ್ರಿಯಾಂಕಾ ಉಪೇಂದ್ರ
ಒಮ್ಮೆ ತನ್ನ ಕಾರಿನಲ್ಲಿ ಉಪೇಂದ್ರ ಅವರ ಚಿತ್ರವನ್ನು ತೆಗೆದು ಹಾಕಿ ಅಂತ ಕಂಪನಿಯವರು ಹೇಳಿದಾಗ ಆ ಕೆಲಸವನ್ನೇ ಬಿಟ್ಟು ಬಂದಿದ್ದಾನೆ ಈ ಅಭಿಮಾನಿ. ಇನ್ನೂ ತನ್ನ ಹುಟ್ಟುಹಬ್ಬದಂದು ಉಪೇಂದ್ರ ಅವರನ್ನು ಭೇಟಿ ಮಾಡುವುದಕ್ಕೆ ಆಗಲಿಲ್ಲ ಎಂದು ಇನ್ನು ಮುಂದೆ ತನ್ನ ಹುಟ್ಟುಹಬ್ಬದ ಆಚರಣೆಯನ್ನೇ ನಿಲ್ಲಿಸಿದ್ದಾನೆ. ಅಷ್ಟೆ ಅಲ್ಲದೆ 'ನಾನು ಸತ್ತರೆ ನಮ್ಮ ಬಾಸ್ ಉಪ್ಪಿ ಅವರನ್ನು ಕರೆಸಿ' ಅಂತ ಈ ಹುಡುಗ ಎಲ್ಲರಿಗೂ ಹೇಳಿದ್ದಾನಂತೆ.