Don't Miss!
- News Bengaluru Heat: ಏ.25 ರಂದು ನಗರದಲ್ಲಿ ಅತ್ಯಧಿಕ ತಾಪಮಾನ: 12 ವರ್ಷಗಳ ದಾಖಲೆ ಉಡೀಸ್
- Lifestyle ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ರಾಗಿಣಿ ಐಪಿಎಸ್' ಚಿತ್ರದಲ್ಲಿ ಉಪೇಂದ್ರ ಡೈಲಾಗ್
ಆದರೆ ಇದೀಗ ಚಿತ್ರಕ್ಕೆ ನಾಯಕ ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ಹುಬ್ಬಳ್ಳಿ ಶೈಲಿಯಲ್ಲಿ ಡೈಲಾಗ್ ಹೊಡೆದಿದ್ದಾರೆ. ಇದು ಚಿತ್ರದ ಆರಂಭದಲ್ಲಿ ಮೂಡಿಬರಲಿದೆ. ಈ ಮೂಲಕ 'ರಾಗಿಣಿ ಐಪಿಎಸ್' ಚಿತ್ರಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.
ಹುಬ್ಬಳ್ಳಿ-ಧಾರವಾಡ ಹಿನ್ನೆಲೆಯಲ್ಲಿ ಇಡೀ ಚಿತ್ರವೂ ಇರುತ್ತದೆ. ಹುಬ್ಬಳ್ಳಿ ಹಾಗೂ ಉತ್ತರ ಕರ್ನಾಟಕದ ಪ್ರಸಿದ್ಧಿಯನ್ನು, ಖ್ಯಾತನಾಮರನ್ನು, ಪ್ರೇಕ್ಷಣೀಯ ಸ್ಥಳಗಳನ್ನು, ವಿದ್ಯಾ ಸಂಸ್ಥೆಗಳ, ವಾಣಿಜ್ಯ ನಗರಿ ಕುರಿತಾಗಿ ಸಿದ್ದಪಡಿಸಿರುವ ಸಂಭಾಷಣೆಯನ್ನು ಉಪೇಂದ್ರ ಹೇಳಿದ್ದಾರೆ.
ಇಂತಹ ಸ್ಥಳದಲ್ಲಿ ವ್ಯಾಗ್ರನೊಬ್ಬನಿದ್ದಾನೆ ಎಂದು ಎರಡರಿಂದ ಮೂರು ನಿಮಿಷಗಳ ಮಾತುಗಳನ್ನು ಕರಿಸುಬ್ಬು ಅವರ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡಲಾಯಿತು. ಆನಂದ್ ಪಿ ರಾಜು ಅವರ ನಿರ್ದೇಶನದಲ್ಲಿ ಗ್ಲಾಮರ್ ನಟಿ ಒಂದು ಕಟುವಾದ ಪೋಲೀಸು ಅಧಿಕಾರಿಯಾಗಿ ರಾಗಿಣಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.
ಇದು ಸಾಮಾಜಿಕ ಪಿಡುಗು ಹಾಗೂ ಇನ್ನಿತರೆ ವಿಚಾರಗಳನ್ನು ಸೇರಿಸಿದ ಹೆಣೆದ ಕಥಾನಕ. ಅಂತಹ ಸ್ಥಿತಿಯಲ್ಲಿ ಪೋಲೀಸು ಅಧಿಕಾರಿ ತೆಗೆದುಕೊಳ್ಳುವ ನಿರ್ಣಯ ಏನು ಎಂಬುದು ಚಿತ್ರದ ಕಥಾಹಂದರ. ಕೆ ವಿ ರಾಜು ಅವರ ಹರಿತವಾದ ಸಂಭಾಷಣೆ ಚಿತ್ರಕ್ಕಿದೆ.
ನಂದಕುಮಾರ್ ಅವರ ಛಾಯಾಗ್ರಹಣ, ಫರ್ಹಾನ್ ರೋಶನ್(ಈ ಹಿಂದೆ ಎಮಿಲ್) ಅವರ ಸಂಗೀತ, ಕೌರವ ವೆಂಕಟೇಶ್, ಮಾಸ್ ಮಾಧ ಅವರ ಸಾಹಸ ದೃಶ್ಯಗಳಿವೆ. ಇಮ್ರಾನ್ ಸರ್ದಾರಿಯ ಅವರ ನೃತ್ಯ ನಿರ್ದೇಶನವಿದ್ದು ರಾಜೇಶ್ ರಾಮನಾಥ್ ಅವರು ರೀರೆಕಾರ್ಡಿಂಗ್ ಚಿತ್ರಕ್ಕಿದೆ.
ಹುಬ್ಬಳ್ಳಿ, ಧಾರವಾಡ ಸುತ್ತ ಮುತ್ತ ಚಿತ್ರೀಕರಣ ಮಾಡಿರುವ 'ರಾಗಿಣಿ ಐಪಿಎಸ್' ಚಿತ್ರದಲ್ಲಿ ಅವಿನಾಶ್, ನಾರಾಯಣ ಸ್ವಾಮಿ, ಪೆಟ್ರೋಲ್ ಪ್ರಸನ್ನ, ವೀಣಾ ಸುಂದರ್, ವಿವೇಕ್ ಪಂಡಿತ್, ಅಚ್ಯುತ್ ಕುಮಾರ್ ಹಾಗೂ ಇನ್ನಿತರರು ಪೋಷಕ ಪಾತ್ರಗಳಲ್ಲಿದ್ದಾರೆ.(ಒನ್ಇಂಡಿಯಾ ಕನ್ನಡ)