twitter
    For Quick Alerts
    ALLOW NOTIFICATIONS  
    For Daily Alerts

    ನೆರೆ ಸಂತ್ರಸ್ಥರ ಪರಿಹಾರ ನಿಧಿಗೆ 5 ಲಕ್ಷ ಚೆಕ್ ಹಸ್ತಾಂತರಿಸಿದ ಉಪೇಂದ್ರ

    |

    Recommended Video

    ನೆರೆ ಸಂತ್ರಸ್ಥರ ಪರಿಹಾರ ನಿಧಿಗೆ ಚೆಕ್ ಹಸ್ತಾಂತರಿಸಿದ ಉಪೇಂದ್ರ

    ಉತ್ತರ ಕರ್ನಾಟಕದಲ್ಲಿ ಉಂಟಾದ ಭಾರಿ ಪ್ರವಾಹದಿಂದ ಅಲ್ಲಿನ ಜನ-ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಸಾವಿರಾರು ಜನರು ಮನೆ, ಆಸ್ತಿ-ಪಾಸ್ತಿ ಎಲ್ಲವೂ ಕಳೆದುಕೊಂಡು ನಿರಾಶ್ರಿತರ ಕೇಂದ್ರದಲ್ಲಿ ಉಳಿಯಬೇಕಾಯಿತು.

    ಉತ್ತರ ಕರ್ನಾಟಕ ಭಾಗದ ಜನರಿಗೆ ನೆರವಾದ ಚಿತ್ರರಂಗ ದೊಡ್ಡ ಮಟ್ಟದಲ್ಲಿ ಅಗತ್ಯವಸ್ತುಗಳನ್ನ ಪೂರೈಸಿದೆ. ಅಭಿಮಾನಿ ಸಂಘಗಳು ಮತ್ತು ಕೆಲವು ಕಲಾವಿದರು ಖುದ್ದು ಅಲ್ಲಿಗೆ ಭೇಟಿ ನೀಡಿ ಸಹಾಯ ಮಾಡಿದ್ದರು.

    ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಲಕ್ಷ ನೀಡಿದ ಫಿಲ್ಮ್ ಚೇಂಬರ್ ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಲಕ್ಷ ನೀಡಿದ ಫಿಲ್ಮ್ ಚೇಂಬರ್

    ಈ ಮಧ್ಯೆ ನಟ-ನಿರ್ದೇಶಕ ಮತ್ತು ಪ್ರಜಾಕಾರಣಿ ಉಪೇಂದ್ರ ಅವರು ನೆರೆ ಸಂತ್ರಸ್ಥರ ಪರಿಹಾರ ನಿಧಿಗೆ 5 ಲಕ್ಷ ನೀಡುವುದಾಗಿ ಘೋಷಿಸಿದ್ದರು. ಹಾಗಾಗಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನ ಭೇಟಿ ಮಾಡಿದ ಉಪೇಂದ್ರ 5 ಲಕ್ಷದ ಚೆಕ್ ಸಿಎಂಗೆ ಹಸ್ತಾಂತರಿಸಿದ್ದಾರೆ.

    Upendra Donate 5 Lakh To Cm Relief Fund

    ಸಿಎಂ ಭೇಟಿ ಮಾಡಿ ನೆರೆ ಸಂತ್ರಸ್ಥರಿಗೆ 5 ಲಕ್ಷ ಚೆಕ್ ನೀಡಿದ ಪುನೀತ್ ಸಿಎಂ ಭೇಟಿ ಮಾಡಿ ನೆರೆ ಸಂತ್ರಸ್ಥರಿಗೆ 5 ಲಕ್ಷ ಚೆಕ್ ನೀಡಿದ ಪುನೀತ್

    ಉಪೇಂದ್ರ ಅವರಷ್ಟೆ ಅಲ್ಲ, ಇತ್ತೀಚಿಗಷ್ಟೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕೂಡ ಸಿಎಂ ಪರಿಹಾರ ನಿಧಿಗೆ 5 ಲಕ್ಷ ನೀಡಿದ್ದರು.

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ 25 ಲಕ್ಷ ರೂಪಾಯಿ ನೆರೆ ಸಂತ್ರಸ್ಥರ ಪರಿಹಾರ ನಿಧಿಗೆ ನೀಡಿದ್ದಾರೆ. ಜೊತೆಗೆ ತೆಲುಗು ನಟ ಸಂಪೂರ್ಣೇಶ್ ಬಾಬು 2 ಲಕ್ಷ ನೀಡಿದ್ದರೆ, ತಮಿಳು ನಟ ಸೂರ್ಯ ಮತ್ತು ಕಾರ್ತಿ ಕೇರಳ ಮತ್ತು ಕರ್ನಾಟಕಕ್ಕೆ ತಲಾ 5 ಲಕ್ಷ ನೀಡಿದ್ದಾರೆ.

    English summary
    karnataka flood, upendra helps to karnataka flood, uttara karnataka floods 2019, chief minister relief fund karnataka,
    Thursday, August 22, 2019, 13:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X