Don't Miss!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- News ಲೋಕಸಭಾ ಚುನಾವಣೆ 2024: ಮತದಾನಕ್ಕೆ ಸಕಲ ಮಂಡ್ಯ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
"ಸಂಜೆ ಕೆಂಪಾದಾಗ" ಚಲೆಗಯಿ ಚಾಂದನಿ ಆಗಯಿ
"ಸಂಜೆ ತಂಪಾದಾಗ ಕೆನ್ನೆ ಕೆಂಪಾದಾಗ ಅತ್ತಿತ್ತ ಕತ್ತಲಾದಾಗ ಚಲೆಗಯಿ ಚಾಂದಿನಿ..." ಎಂದು 'ಎ' ಚಿತ್ರದಲ್ಲಿ ಅಭಿನಯಿಸಿದ್ದ ಚಾಂದನಿ ಮತ್ತೆ ಗಾಂಧಿನಗರಕ್ಕೆ ಹಿಂತಿರುಗಿದ್ದಾರೆ. 'ಸೈಕೋ' ಖ್ಯಾತಿಯ ಗುರುದತ್ ಅವರು ಚಾಂದಿನಿಯನ್ನು ಮತ್ತೆ ಕನ್ನಡದಲ್ಲಿ ಬಣ್ಣಹಚ್ಚುವಂತೆ ಮಾಡಿದ್ದಾರೆ.
ತಮ್ಮ ಚೊಚ್ಚಲ ನಿರ್ದೇಶನದ 'ಖೈದಿ' ಎಂಬ ಚಿತ್ರಕ್ಕೆ ಚಾಂದಿನಿ ಅವರನ್ನು ಆಯ್ಕೆ ಮಾಡಿದ್ದಾರೆ. ಸುದೀರ್ಘ ಸಮಯದ ಬಳಿಕ ಕ್ಯಾಮೆರಾ ಎದುರಿಸುತ್ತಿದ್ದರೂ, ಜನ ಮಾತ್ರ ಚಾಂದಿನಿ ಅವರನ್ನು ಮರೆತಿಲ್ಲ. "ಕನ್ನಡ ಚಿತ್ರರಸಿಕರು ತಮ್ಮ ಪಾತ್ರಗಳನ್ನು ಇನ್ನೂ ಮರೆತಿಲ್ಲ. ನನ್ನನ್ನು ಆರಾಧಿಸುವ ಅಭಿಮಾನಿಗಳು ಇನ್ನೂ ಇದ್ದಾರೆ" ಎನ್ನುತ್ತಾರೆ ಚಾಂದಿನಿ.
ಸಾಹಸಸಿಂಹ ವಿಷ್ಣುವರ್ಧನ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ಶಿವಮಣಿ ಜೊತೆ ತೆರೆಹಂಚಿಕೊಂಡರು. 'ಸೈಕೋ' ಚಿತ್ರದಲ್ಲಿ ಅಭಿನಯಿಸಿದ್ದ ಧನುಷ್ ಅವರು ಖೈದಿ ಚಿತ್ರದ ನಾಯಕ ನಟ.
ಈ ಚಿತ್ರದ ಮುಹೂರ್ತ ಮೇ 9ರಂದು ನಡೆಯಲಿದ್ದು ಮೇ 4ರಂದೇ ಚಾಂದಿನಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ಮಾತನಾಡಿರುವ ನಿರ್ದೇಶಕ ಗುರುದತ್ ಅವರು, "ಸೈಕೋ ಚಿತ್ರದ ನಿರ್ಮಾಪಕರಲ್ಲಿ ನಾನೂ ಒಬ್ಬ. ಇದೀಗ 'ಖೈದಿ' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದೇನೆ. ಈ ಚಿತ್ರದಲ್ಲಿ ಹಲವಾರು ಬಹುಮುಖಿ ಪ್ರತಿಭೆಗಳಿದ್ದಾರೆ. ಚಿತ್ರರಸಿಕರಿಗೆ ತಮ್ಮ 'ಖೈದಿ' ಖಂಡಿತ ನಿರಾಸೆಪಡಿಸಲ್ಲ" ಎಂದಿದ್ದಾರೆ. (ಏಜೆನ್ಸೀಸ್)