ದುಡ್ಡು ಪೀಕುತ್ತಿದ್ದವನನ್ನ ಉಪೇಂದ್ರ ಕ್ಷಮಿಸಿದ್ದಾರೆ: ನೀವೇನ್ಮಾಡ್ತೀರಾ.?
'ಪ್ರಜಾಕೀಯ'ದ ಮೂಲಕ ಭ್ರಷ್ಟ ರಹಿತ ಸಮಾಜವನ್ನು ನಿರ್ಮಾಣ ಮಾಡಲು ಉಪೇಂದ್ರ ಹೊರಟಿರುವಾಗ, 'ಪ್ರಜಾಕೀಯ'ದ ಹೆಸರನ್ನೇ ದುರ್ಬಳಕೆ ಮಾಡಿಕೊಂಡು ಓರ್ವ ವ್ಯಕ್ತಿ ಹಣ ಪೀಕುತ್ತಿದ್ದ. ಈ ಬಗ್ಗೆ ನಿಮ್ಮ ಫಿಲ್ಮಿಬೀಟ್ ಕನ್ನಡ ಕೂಡ ವರದಿ ಪ್ರಕಟ ಮಾಡಿತ್ತು.
Recommended Video

ಉಪೇಂದ್ರ ರವರ ಫ್ಯಾನ್ಸ್ ಅಸೋಸಿಯೇಷನ್ ನಲ್ಲಿ ಇದ್ದಾಗಲೂ ಎಲ್ಲರಿಂದಲೂ ದುಡ್ಡು ಪಡೆಯುತ್ತಿದ್ದ ವ್ಯಕ್ತಿ (ಹೆಸರು ಗೊತ್ತಿಲ್ಲ) 'ಪ್ರಜಾಕೀಯ'ದ ಹೆಸರಿನಲ್ಲೂ ಹಣ ಸಂಪಾದನೆ ಮಾಡಿಕೊಳ್ಳಲು ಯತ್ನಿಸಿದ. ಈ ಬಗ್ಗೆ ಉಪ್ಪಿ ಕಿವಿಗೆ ಬಿದ್ಮೇಲೆ, ಆ ವ್ಯಕ್ತಿಯ ಫೋಟೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡರು.

ಇದೀಗ 'ಅದೇ ವ್ಯಕ್ತಿಯನ್ನ ಕ್ಷಮಿಸೋಣ' ಎಂದು ಉಪೇಂದ್ರ ಟ್ವೀಟ್ ಮಾಡಿದ್ದಾರೆ. ''ಕ್ಷಮೆ ಅನ್ನೋದು ದೊಡ್ಡ ಗುಣ. ಈ ಹುಡುಗನ ತಪ್ಪನ್ನ ನಾವೆಲ್ಲರೂ ಕ್ಷಮಿಸೋಣ. ಮತ್ತೆ ತಪ್ಪು ಮಾಡ್ಬೇಡ ಎಂದು ಎಚ್ಚರಿಸೋಣ. ಮೋಸ ಹೋಗೋರು ಸ್ವಲ್ಪ ಜಾಣರಾಗಿರಿ ಅಂತ ತಿಳಿಸೋಣ. ಏನಂತೀರಾ.?'' ಎಂದು ಉಪೇಂದ್ರ ಟ್ವೀಟಿಸಿದ್ದಾರೆ.
ಉಪೇಂದ್ರ ರವರ ಈ ನಡೆಯನ್ನ ಕೆಲವರು ಸ್ವಾಗತಿಸಿದರೆ, ''ಆತನಿಗೆ ಶಿಕ್ಷೆ ಕೊಡಲೇಬೇಕು'' ಎಂದು ಹಲವರು ಆಗ್ರಹಿಸಿದ್ದಾರೆ.
ತಿಳಿಯದೇ ಮಾಡಿದ ತಪ್ಪಿಗೆ ಕ್ಷಮೆ ಇರಲಿ, ಆದರೆ ತಿಳಿದು ಮಾಡುವ ತಪ್ಪಿಗೆ ಶಿಕ್ಷೆ ಇರಲಿ ಎಂದು ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ.
ಉಪೇಂದ್ರ ರವರ ಈ ನಡೆಗೆ ನೀವೇನಂತೀರಾ.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ...


Click it and Unblock the Notifications











