Don't Miss!
- News ಕುಡುಕರಿಗೆ ಎಣ್ಣೆ ಸಿಗುತ್ತಿಲ್ಲ, ಪರದಾಟ ನೋಡಲು ಆಗುತ್ತಿಲ್ಲ!
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡಿಗರೇ... ತೆಲುಗಿನವರ 'ವಿಶಾಲ ಹೃದಯ'ಕ್ಕೆ ನಿಮ್ಮ ಪ್ರತಿಕ್ರಿಯೆ ಏನು.?
ತಮಿಳು ನಟ ಸತ್ಯರಾಜ್ ರವರ ಬೇಜವಾಬ್ದಾರಿ ಹೇಳಿಕೆಯಿಂದ ಕನ್ನಡಿಗರು ಸಿಟ್ಟಿಗೆದ್ದಿದ್ರೆ, ಕನ್ನಡ ಪರ ಹೋರಾಟಗಾರರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೆಲುಗು ಸಿನಿ'ಭಕ್ತ'ರು ಗೇಲಿ ಮಾಡಲು ಆರಂಭಿಸಿದ್ದಾರೆ.
''ಬಾಹುಬಲಿ' ತರಹ ಸಿನಿಮಾ ಮಾಡಿ. ಆಗ್ಲಿಲ್ಲ ಅಂದ್ರೆ ಮುಚ್ಕೊಂಡ್ ಕೂತ್ಕೊಳ್ಳಿ. ಸತ್ಯರಾಜ್ ಜೊತೆಗೆ ಸುದೀಪ್ ರವರ ಚಿತ್ರಗಳನ್ನೂ ಬ್ಯಾನ್ ಮಾಡಿ'' ಅಂತೆಲ್ಲ ಫೇಸ್ ಬುಕ್ ನಲ್ಲಿ ಗಹಗಹಿಸಿ ಟ್ರೋಲ್ ಮಾಡುತ್ತಿರುವ ಟಾಲಿವುಡ್ ಮಂದಿ, ಅದೇ 'ಟ್ರೋಲ್ ಟಾಲಿವುಡ್' ಪೇಜ್ ನಲ್ಲಿ ತಮ್ಮ ಉದಾರತನವನ್ನ ಪ್ರದರ್ಶನ ಮಾಡಿಕೊಂಡಿದ್ದಾರೆ.[ಸುದೀಪ್ ಚಿತ್ರಗಳನ್ನ ಬ್ಯಾನ್ ಮಾಡಿ: ಕನ್ನಡಿಗರಿಗೆ 'ಟ್ರೋಲ್ ಟಾಲಿವುಡ್' ಲೇವಡಿ.!]
''ಪರಭಾಷೆಯ ಹಲವು ನಟರು ಟಾಲಿವುಡ್ ನಲ್ಲಿ ತಮ್ಮ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಆದ್ರೆ, ತೆಲುಗು ಮಂದಿ ಮಾತ್ರ ಪರಭಾಷಾ ನಟರ ವಿರುದ್ಧ ಎಂದೂ ಪ್ರತಿಭಟನೆ ಮಾಡಿಲ್ಲ. ಯಾಕಂದ್ರೆ ನಮಗೆ ಸಿನಿಮಾ ಬಗ್ಗೆ ಪ್ರೀತಿ. ಪ್ರತಿಭೆ ಬಗ್ಗೆ ಗೌರವ ಇದೆ'' ಎಂದು ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.
''ಕಲೆಗೆ ಗಡಿ ಇಲ್ಲ'' ಎಂದು ಹೇಳಿರುವ 'ಟ್ರೋಲ್ ಟಾಲಿವುಡ್', ಕರ್ನಾಟಕದಲ್ಲಿ ಹುಟ್ಟಿ ಬೆಳೆದು ಪರಭಾಷೆಯಲ್ಲಿ ಜನಪ್ರಿಯತೆ ಗಳಿಸಿರುವ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಕಮಲ್ ಹಾಸನ್ ರವರನ್ನ ಉಲ್ಲೇಖಿಸಿದೆ. ಜೊತೆಗೆ ರಿಯಲ್ ಸ್ಟಾರ್ ಉಪೇಂದ್ರ ರವರಿಗೆ ಟಾಲಿವುಡ್ ನಲ್ಲೂ ಫ್ಯಾನ್ಸ್ ಇದ್ದಾರೆ ಅಂತ 'ಟ್ರೋಲ್ ಟಾಲಿವುಡ್' ಹೇಳಿಕೊಂಡಿದೆ.['ಕನ್ನಡಿಗರು ಮುಚ್ಕೊಂಡ್ ಕೂತ್ಕೊಳ್ಳಿ': ಫೇಸ್ ಬುಕ್ನಲ್ಲಿ ತೆಲುಗು ಸಿನಿ'ಭಕ್ತ'ರ ಗೇಲಿ.!]
ಕನ್ನಡಿಗರೇ... ಇದಕ್ಕೆ ನಿಮ್ಮ ಉತ್ತರವೇನು.? ನಿಮ್ಮ ಪ್ರತಿಕ್ರಿಯೆಯನ್ನ ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.