ದುಡ್ಡಿನ ರಾಜಕೀಯದ ಬಗ್ಗೆ ರಿಯಲ್ ಸ್ಟಾರ್ ಕೊಟ್ಟ ಹೇಳಿಕೆ
Recommended Video

ಚಿತ್ರರಂಗಕ್ಕೆ ಗುಡ್ ಬಾಯ್ ಹೇಳಿ ರಾಜಕೀಯರಂಗದಲ್ಲೇ ತೊಡಗಿಸಿಕೊಳ್ಳಬೇಕು ಎಂದುಕೊಂಡಿದ್ದ ಉಪ್ಪಿ ಮತ್ತೆ ಬಂದಿದ್ದಾರೆ. ತಮ್ಮ ಹಳೆ ಸಿನಿಮಾ ಕಮಿಂಟ್ಮೆಂಟ್ ಗಳನ್ನ ಮುಗಿಸಿ ನಂತರ ರಾಜಕೀಯ ಪ್ರವೇಶ ಮಾಡುವ ಉದ್ದೇಶದಿಂದ ತಮ್ಮ ಹೊಸ ಚಿತ್ರದ ಮುಹೂರ್ತದಲ್ಲಿ ಭಾಗಿ ಆಗಿದ್ದಾರೆ.
ಬಿಟ್ಟರು ಬಿಡದ ಮಾಯೆ ಎನ್ನುವ ರೀತಿಯಲ್ಲಿ ರಿಯಲ್ ಸ್ಟಾರ್ ತಮ್ಮ ಪ್ರಜಾಕೀಯದ ಬಗ್ಗೆ ಯಾವುದೇ ಹೇಳಿಕೆ ಕೊಡಬಾರದು ಎಂದುಕೊಂಡರು ಕೂಡ ರಾಜಕೀಯ ಅವರನ್ನೇ ಹುಡುಕಿಕೊಂಡು ಬರುತ್ತಿದೆ.

ಉಪೇಂದ್ರ ಅಭಿನಯದ ಆರ್ ಚಂದ್ರು ನಿರ್ದೇಶನದ ಐ ಲವ್ ಯೂ ಚಿತ್ರದ ಮುಹೂರ್ತ ಸಂದರ್ಭದಲ್ಲಿ ಉಪ್ಪಿ ಚುನಾವಣಾ ನಂತರದ ರಾಜಕೀಯದ ಬಗ್ಗೆ ಉಪೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಇದು ಯಾರದ್ದು ತಪ್ಪಲ್ಲ, ಯಾವುದೇ ಪಕ್ಷ ಮೆಜಾರಿಟಿ ಇಲ್ಲದಿರುವುದೇ ಇದಕ್ಕೆಲ್ಲಾ ಕಾರಣ. ದುಡ್ಡಿನ ರಾಜಕಾರಣ ಹೈಡ್ರಾಮಾ ನೋಡುತ್ತಿದ್ದೀರಿ..
ಆದ್ರೆ ಪ್ರಜಾಕೀಯದಿಂದ ಇದೆಲ್ಲವೂ ಬದಲಾಗಲಿದೆ. ಸದ್ಯ ಕುಮಾರಸ್ವಾಮಿ ಆಡಳಿತ ಹೇಗಿರಲಿದೆ ಅನ್ನುವುದನ್ನು ನೋಡಬೇಕು. ನಮ್ಮ ಪ್ರಜಾಕೀಯದ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ ಮುಂದಕ್ಕೂ ನೆಡೆಯಲಿವೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಎಂದಿದ್ದಾರೆ.

ರಾಜಕೀಯದ ಬಗ್ಗೆ ಸಾಕಷ್ಟು ಕನಸುಗಳನ್ನ ಕಟ್ಟಿಕೊಂಡಿರುವ ರಿಯಲ್ ಸ್ಟಾರ್ ಮುಂದಿನ ದಿನಗಳಲ್ಲಿ ಪರಿಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದು ಖಚಿತವಾಗಿದೆ.


Click it and Unblock the Notifications











