Don't Miss!
- News Hubballi: ರಾಜ್ಯ ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆ: ನೇಹಾ ನಿವಾಸಕ್ಕೆ ಶ್ರೀಗಳು, ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ: ಪೊಲೀಸ್ ಅಭಯ
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Sports LSG vs CSK IPL 2024: ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದ ಎಂಎಸ್ ಧೋನಿ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಠಾರಿವೀರ ಕನ್ನಡದ 'ಅವತಾರ್' ಎಂದ ಉಪೇಂದ್ರ
ಬಹಳಷ್ಟು ವಿವಾದಗಳನ್ನು ಅನುಭವಿಸಿ, ಇನ್ನೂ ಕೆಲವು ವಿವಾದಗಳನ್ನು ಬೆನ್ನಿಗೆ ಕಟ್ಟಿಕೊಂಡೇ ನಾಳೆ (ಮೇ 10, 2012) ಬಿಡುಗಡೆಯಾಗುತ್ತಿದೆ ಸೂಪರ್ ಸ್ಟಾರ್ ಉಪೇಂದ್ರ ನಟನೆ ಹಾಗೂ ಮುನಿರತ್ನ ನಿರ್ಮಾಣದ 'ಕಠಾರಿವೀರ ಸುರಸುಂದರಾಂಗಿ'. ಕನ್ನಡದ ಮೊಟ್ಟಮೊದಲ ಸಂಪೂರ್ಣ '3D' ಚಿತ್ರ ಎಂಬ ಹೆಗ್ಗಳಿಕೆಯ ಕಠಾರಿವೀರ, '2D' ಆವೃತ್ತಿಯಲ್ಲಿಯೂ ಕೂಡ ಬಿಡುಗಡೆಯಾಗಲಿದೆ.
"ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಇಷ್ಟೊಂದು ಅದ್ಧೂರಿ ಹಾಗೂ '3ಡಿ' ಸಿನಿಮಾ ಬರುತ್ತಿದೆ. ಹೀಗಾಗಿ 'ಕಠಾರಿ ವೀರ ಸುರಸುಂದರಾಂಗಿ' ಚಿತ್ರ ಭಾರೀ ಕುತೂಹಲ ಮೂಡಿಸಿದೆ. ಪ್ರೇಕ್ಷಕರ ಬಹುನಿರೀಕ್ಷೆ ಸುಳ್ಳಾಗುವುದಿಲ್ಲ, ಇದು ಕನ್ನಡದ 'ಅವತಾರ್', ನೋಡಿ ಖುಷಿಪಡಿ" ಎಂದಿದ್ದಾರೆ ಉಪೇಂದ್ರ.
ಅಷ್ಟೇ ಅಲ್ಲ, "ಹಾಲಿವುಡ್ನ 3ಡಿ ಸಿನಿಮಾಗಳಿಗಿಂತಲೂ 'ಕಠಾರಿ ವೀರ ಸುರಸುಂದರಾಂಗಿ' ಚೆನ್ನಾಗಿ ಮೂಡಿ ಬಂದಿದೆ. ಕಾರಣ, ಇದರಲ್ಲಿ ಕನ್ನಡದ ಸಿನಿಮಾ ನೆಟಿವಿಟಿ ಇದೆ. ಜೊತೆಗೆ ಇಲ್ಲಿ ಬರೀ ಗ್ರಾಫಿಕ್ಸ್ ಅಥವಾ ಪರಿಸರವನ್ನು ಮಾತ್ರ ತೋರಿಸಿಲ್ಲ. ಈ ಚಿತ್ರದಲ್ಲಿರುವ ಅದ್ದೂರಿ ಸೆಟ್ ಗಳು ಹಾಲಿವುಡ್ ಚಿತ್ರಗಳಲ್ಲಿ ಕಾಣಸಿಗುವುದಿಲ್ಲ" ಎಂದಿದ್ದಾರೆ. (ಒನ್ ಇಂಡಿಯಾ ಕನ್ನಡ)