Don't Miss!
- News Bengaluru-Tumkur Metro: 52.41 ಕಿ.ಮೀ. ಮಾರ್ಗ, 19 ನಿಲ್ದಾಣಗಳು; ತುಮಕೂರು-ಬೆಂಗಳೂರು ಮೆಟ್ರೋ ಅಪ್ಡೇಟ್
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಕಲಾವಿದರ ಬೆನ್ನಿಗೆ ನಿಂತ ರಿಯಲ್ ಸ್ಟಾರ್
ರಿಯಲ್ ಸ್ಟಾರ್ ಉಪ್ಪಿ ತಾನಾಯ್ತು ತನ್ನ ಕೆಲಸವಾಯ್ತು ಎಂದು ಇದ್ದಂತ ನಿರ್ದೇಶಕ ಹಾಗೂ ನಟ. ಆದ್ರೆ 'ಪ್ರಜಾಕೀಯ' ಶುರು ಮಾಡಿದ ನಂತರ ಉಪ್ಪಿ ಜನರ ಜೊತೆಯಲ್ಲಿ ಬೆರೆಯುವುದಕ್ಕೆ ಶುರು ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಿನಿಮಾರಂಗದವರ ಜೊತೆಯಲ್ಲಿಯೂ ಹೆಚ್ಚಿನ ಒಡನಾಟ ಇಟ್ಟುಕೊಂಡಿದ್ದಾರೆ.
ವಿಭಿನ್ನ ನಿರ್ದೇಶಕ ಎಂದು ಹೆಸರು ಗಳಿಸಿರುವ ರಿಯಲ್ ಸ್ಟಾರ್ ಸ್ಪೆಷಲ್ ಎನ್ನಿಸುವ ಚಿತ್ರಗಳನ್ನ ನೋಡುವುದು ಹಾಗೂ ಅವರುಗಳನ್ನ ಕರೆದು ಅಭಿನಂದಿಸುವುದು ಹಿಂದಿನಿಂದಲೂ ನಡೆಸಿಕೊಂಡು ಬರುತ್ತಿದ್ದಾರೆ. 'ಪ್ರಜಾಕೀಯ' ಜೊತೆಯಲ್ಲಿ ಸಿನಿಮಾರಂಗದಲ್ಲಿಯೂ ತೊಡಗಿಸಿಕೊಂಡಿರುವ ಉಪೇಂದ್ರ ಹೊಸ ತಂತ್ರಜ್ಞರು ಹಾಗೂ ಕಲಾವಿದರ ಬೆನ್ನಿಗೆ ನಿಂತಿದ್ದಾರೆ.
ಈ ದಿನ ಸಿನಿತಾರೆಯರ ಟ್ವಿಟ್ಟರ್ ಲೋಕದಲ್ಲಿ ಏನೆಲ್ಲಾ ಆಗಿದೆ
ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಜ್ಜಾಗಿರುವ ಸಿನಿಮಾಗಳ ಪ್ರಚಾರಕ್ಕೆ ರಿಯಲ್ ಸ್ಟಾರ್ ಕೈ ಜೋಡಿಸಿದ್ದಾರೆ. ಹಾಗಾದರೆ ಉಪ್ಪಿ ಸಪೋರ್ಟ್ ಮಾಡುತ್ತಿರುವ ಆ ಸಿನಿಮಾಗಳು ಯಾವುದು? ಚಿತ್ರದ ಬಗ್ಗೆ ಉಪ್ಪಿ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ.
ಅಥರ್ವ ಚಿತ್ರಕ್ಕೆ ಉಪ್ಪಿ ಅಭಿನಂದನೆ
'ಅಥರ್ವ'.. ಪವನ್ ತೇಜ್ ಅಭಿನಯದ ಚೊಚ್ಚಲ ಸಿನಿಮಾ. ಅರುಣ್ ಚಿತ್ರವನ್ನ ನಿರ್ದೇಶನ ಮಾಡಿದ್ದು ವಿನಯ್ ಕುಮಾರ್ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಸನಂ ಶೆಟ್ಟಿ ನಾಯಕಿಯಾಗಿ ನಟಿಸಿರುವ 'ಅಥರ್ವ' ಚಿತ್ರದ ಟ್ರೇಲರ್ ವೈರಲ್ ಆಗಿದೆ. ಸಿನಿಮಾ ಟೀಸರ್ ಮತ್ತು ಟ್ರೇಲರ್ ನೋಡಿದ ರಿಯಲ್ ಸ್ಟಾರ್ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.
'ಫೇಸ್ ಟು ಫೇಸ್' ಜೊತೆ ಉಪ್ಪಿ
ದಿವ್ಯ ಉರುಡುಗ ಹಾಗೂ ರೋಹಿತ್ ಭಾನು ಪ್ರಕಾಶ್ ಅಭಿನಯದ 'ಫೇಸ್ ಟು ಫೇಸ್' ಚಿತ್ರತಂಡ ಕೂಡ ಇತ್ತೀಚಿಗಷ್ಟೆ ರಿಯಲ್ ಸ್ಟಾರ್ ಅವರನ್ನು ಭೇಟಿ ಮಾಡಿ ತಮ್ಮ ಚಿತ್ರದ ಟೀಸರ್ ಮತ್ತು ಹಾಡನ್ನು ತೋರಿಸಿದೆ. ಹೊಸಬರ ಪ್ರಯೋಗವನ್ನು ಮೆಚ್ಚಿರುವ ಉಪ್ಪಿ ಆದಷ್ಟು ಬೇಗ ಚಿತ್ರವನ್ನು ತೋರಿಸುವಂತೆ ತಿಳಿಸಿದ್ದಾರೆ.
'ಆದಿ ಪುರಾಣ' ಕೇಳಿದ ರಿಯಲ್ ಸ್ಟಾರ್
ನವ ನಾಯಕ ಶಶಾಂಕ್ ಅಭಿನಯದ ಮೋಹನ್ ಕಾಮಾಕ್ಷಿ ನಿರ್ದೇಶನದ 'ಆದಿ ಪುರಾಣ' ಚಿತ್ರದ ಟ್ರೇಲರ್ ನೋಡಿ ನಿರ್ದೇಶಕ ಉಪ್ಪಿ ಆಲ್ ದ ಬೆಸ್ಟ್ ಹೇಳಿದ್ದಾರೆ. ಚಿತ್ರ ಯಶಸ್ವಿ ಆಗಲಿ ಅಂತ ಶುಭಕೋರಿದ್ದಾರೆ.
ಉಪ್ಪಿ ಮೂಲಕ ಪ್ರಚಾರ
ಕನ್ನಡ ಸಿನಿಮಾರಂಗಕ್ಕೆ ಬರುತ್ತಿರುವ ಹೊಸ ಕಲಾವಿದರು, ತಂತ್ರಜ್ಙರು ಆರಂಭದಲ್ಲೇ ಚಿತ್ರರಂಗದಲ್ಲಿ ಬುದ್ದಿವಂತ ಎಂದು ಹೆಸರು ಗಳಿಸಿರುವ ರಿಯಲ್ ಸ್ಟಾರ್ ಅನ್ನು ಭೇಟಿ ಮಾಡುತ್ತಿರುವುದು ವಿಶೇಷ.